ಬೆಂಗಳೂರು: ಶಾಸಕ ಹರೀಶ್ ಪೂಂಜಾ ಅವರೇ ಕಾನೂನಿನ ಅಡಿಯಲ್ಲಿ ಎಲ್ಲರೂ ಸಮಾನರು. ನೀವು ಏನೂ ಕಾನೂನು ಚೌಕಟ್ಟಿನಿಂದ ಹೊರತಾಗಿಲ್ಲ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಅವರು, ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜಾ ಅವರಿಗೆ ಮಾನ್ಯ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ, ಪೊಲೀಸರಿಗೇ ಬೆದರಿಕೆ ಹಾಕುವ ಹರೀಶ್ ಪೂಂಜಾ ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ ಅಂತ ತಿಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿದರೆ ಶಾಸಕರಾದವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಬಹುದೇ.. ಕ್ರಿಮಿನಲ್ ಪ್ರಕರಣಗಳ ಪರ ನಿಂತು ಶಾಸಕರಾದವರು ಪ್ರತಿಭಟನೆ ನಡೆಸುವುದು ಎಷ್ಟು ಸರಿ ಎಂದು ಘನ ನ್ಯಾಯಾಲಯ ಪ್ರಶ್ನಿಸಿದೆ. ಪೂಂಜಾ ಅವರೇ ಪುಡಿ ರೌಡಿ ರೀತಿ ವರ್ತಿಸದೆ, ಇನ್ಮದೆ ಆದರೂ ಶಾಸಕ ಸ್ಥಾನದ ಘನತೆ, ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಿ ಅಂತ ಹೇಳಿದ್ದಾರೆ.
ಶಾಸಕ ಸ್ಥಾನವನ್ನು ಅಹಂಕಾರಿ ಪ್ರವೃತ್ತಿಯಲ್ಲಿ ತೋರ್ಪಡಿಸುತ್ತಿರುವ ಹರೀಶ್ ಪೂಂಜಾ ಅವರಿಗೆ ಮಾನ್ಯ ನ್ಯಾಯಾಲಯ ಚೆನ್ನಾಗಿಯೇ ಚಾಟಿ ಬೀಸಿದೆ. ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಕ್ಕೆ, ಪೊಲೀಸರಿಗೇ ಬೆದರಿಕೆ ಹಾಕುವ @HPoonja ಅವರೇ, ನೀವು ಕಾನೂನು ಚೌಕಟ್ಟಿನಿಂದ ಏನು ಹೊರತಾಗಿಲ್ಲ..
ಆರೋಪಿಯನ್ನು ಬಂಧಿಸಿದರೆ… pic.twitter.com/RlVVjFF0NW
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) June 1, 2024
ವಾಲ್ಮೀಕಿ ಅಭವೃದ್ಧಿ ನಿಗಮದ ಅಕ್ರಮ ಹಣದಲ್ಲಿ ರಾಹುಲ್ ಗಾಂಧಿಗೆ ಪಾಲು: ಡಿವಿ ಸದಾನಂದಗೌಡ ಗಂಭೀರ ಆರೋಪ
Alert : ʻಮೊಬೈಲ್ʼ ಬಳಕೆದಾರೇ ಗಮನಿಸಿ : ಈ ಕರೆಗಳನ್ನು ಸ್ವೀಕರಿಸದಂತೆ ಸರ್ಕಾರ ಎಚ್ಚರಿಕೆ