Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM

ಚಿಕ್ಕದಿದ್ರೂ ದೊಡ್ಡ ಕೆಲಸ.. ಊಟದ ನಂತ್ರ ಹೀಗೆ ಮಾಡಿದ್ರೆ, 48 ಗಂಟೆಗಳಲ್ಲಿ ಊಹಿಸದ ಬದಲಾವಣೆ

11/08/2025 10:05 PM

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » `BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್
KARNATAKA

`BMTC’ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್

By kannadanewsnow5715/05/2024 10:37 AM

ಬೆಂಗಳೂರು : ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯವಾದ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಅಸಮಾಧನ ಹೊರಹಾಕಿದ್ದಾರೆ.

ದಿನಾಂಕ 14-05-2024 ರಂದು ಬೆಳಗ್ಗೆ 07:00 ರಿಂದ 11:00 ಘಂಟೆ ವರೆಗೆ ಘಟಕ-03 ರಲ್ಲಿ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಉಂಟಾದ ವ್ಯತ್ಯಯಕ್ಕೆ ಸಾರಿಗೆ ಸಚಿವರು ಗರಂ ಆಗಿದ್ದು, ವ್ಯವಸ್ಥಾಪಕ ನಿರ್ದೇಶಕರು, ಬಿಎಂಟಿಸಿ ಅವರಿಗೆ ಈ ರೀತಿ ಮುಂದಿನ ದಿನಗಳಲ್ಲಿ ಆಗದಂತೆ ಜಾಗ್ರತೆ ವಹಿಸುವುದು ಹಾಗೂ ಖಾಸಗಿ‌ ಕಂಪನಿಯಾದ M/s TML Smart City Mobility Solutions ಅವರ ಒಪ್ಪಂದ ರದ್ದು ಮಾಡುವ ಬಗ್ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಮಗೆ ಸಾರ್ವಜನಿಕ ಪ್ರಯಾಣಿಕರಿಗೆ ಅಗತ್ಯ ಸೇವೆ ಒದಗಿಸುವ ಬದ್ಧತೆಯಿದ್ದು, ಆ ನಿಟ್ಟಿನಲ್ಲಿ ‌ಯಾವೆಲ್ಲ ತುರ್ತು ಕ್ರಮ ತೆಗೆದುಕೊಳ್ಳಬೇಕೊ ಅದೆಲ್ಲವನ್ನು ಕೂಡಲೇ ಜರುಗಿಸುವಂತೆ ಸೂಚನೆ ನೀಡಿದ್ದಾರೆ.

ಏತನ್ಮದ್ಯೆ, ಕೇಂದ್ರ ಸರ್ಕಾರದ‌ ನೀತಿಯಾದ ಈ ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಗೆ ನೇರವಾಗಿ ಬಸ್ಸು ತಯಾರಿಕಾ ಕಂಪನಿಗಳಿಗೆ ಸಬ್ಸಡಿ ನೀಡುವುದರಿಂದ, ಚಾಲಕರು ಖಾಸಗಿ ಕಂಪನಿಯವರೇ ಒದಗಿಸುತ್ತಾರೆ.

ಸಾರಿಗೆ ಸಂಸ್ಥೆಗಳಿಗೆ ಸಬ್ಸಿಡಿ ನೀಡಿದ್ದರೆ ಈಗಾಗುವುದಿಲ್ಲ, ಬಸ್ಸು ಮತ್ತು ಚಾಲಕರು ಸಾರಿಗೆ ಸಂಸ್ಥೆಗಳ‌ ಒಡೆತನದಲ್ಲಿರುತ್ತಾರೆ. ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುತ್ತಾರೆ. ಇದಕ್ಕೂ ರಾಜ್ಯ ಸರ್ಕಾರಕ್ಕೂ ಏನೂ ಸಂಬಂಧವಿಲ್ಲ. ಖಾಸಗಿ‌ ಚಾಲಕರ ವೇತನ ಪಾವತಿ ಕಂಪನಿ‌ ಸಕಾಲಕ್ಕೆ ಪಾವತಿಸಬೇಕು. ಆದಾಗ್ಯೂ ಸಾರಿಗೆ ಸಚಿವರ ಸೂಚನೆ ಬಂದ ಕೂಡಲೇ ಕಾರ್ಯಪ್ರವೃತ್ತರಾದ ಸಂಸ್ಥೆಯ ಹಿರಿಯ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಬಗೆಹರಿಸಿ, ಬಸ್ಸುಗಳ‌ ಕಾರ್ಯಾಚರಣೆ‌ಗೆ ಅನುವು ಮಾಡಿಕೊಟ್ಟಿದ್ದಾರೆ.

ಬೆಂ.ಮ.ಸಾ.ಸಂಸ್ಥೆಯು ಭಾರತ ಸರ್ಕಾರದ ಫೇಮ್-2 ಯೋಜನೆಯಡಿಯಲ್ಲಿ 921, 12 ಮೀ. ಉದ್ದದ ಹವಾನಿಯಂತ್ರಣ ರಹಿತ Low-floor ಎಲೆಕ್ನಿಕ್ ಬಸ್ಸುಗಳನ್ನು Gross Cost Contract (GCC) ಆಧಾರದ ಮೇಲೆ ಕಾರ್ಯಾಚರಿಸುವ ಸಂಬಂಧ M/s. TML Smart City Mobility Solutions Limited ರವರೊಂದಿಗೆ ದಿನಾಂಕ 16-12-2022 ರಂದು ಕರಾರು ಒಪ್ಪಂದ ಮಾಡಿಕೊಂಡಿರುತ್ತದೆ. ಅದರಂತೆ, ಚಾಲಕರ ನಿಯೋಜನೆ ಹಾಗೂ ಎಲೆಕ್ನಿಕ್ ಬಸ್ಸುಗಳ ನಿರ್ವಹಣೆ M/s. TML Smart City Mobility Solutions Limited ರವರ ಹೊಣೆಯಾಗಿರುತ್ತದೆ ಹಾಗೂ ನಿರ್ವಾಹಕರ ನಿಯೋಜನೆಯು ಸಂಸ್ಥೆಯ ಜವಾಬ್ದಾರಿಯಾಗಿರುತ್ತದೆ.

ಪ್ರಥಮ ಹಂತದಲ್ಲಿ, ದಿನಾಂಕ 27-12-2023 ರಂದು ಘಟಕ-03 (ಶಾಂತಿನಗರ) ರಿಂದ ಎಲೆಕ್ನಿಕ್ ಬಸ್ಸುಗಳ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿರುತ್ತದೆ.

ಘಟಕ-03 ರಿಂದ ಸಂಪೂರ್ಣ ಎಲೆಕ್ನಿಕ್ ಬಸ್ಸುಗಳನ್ನು ಕಾರ್ಯಾಚರಿಸಲಾಗುತ್ತಿದ್ದು, ಒಟ್ಟಾರೆ 113 ಅನುಸೂಚಿಗಳನ್ನು ಕಾರ್ಯಚರಿಸಬೇಕಿರುತ್ತದೆ. ಆದರೆ, ದಿನಾಂಕ 14-05-2024 ರಂದು M/s. TML Smart City Mobility Solutions Limited ರವರ ಚಾಲಕರ ವೇತನ ಪಾವತಿಯಲ್ಲಿನ ವ್ಯತ್ಯಾಸ ದಿಂದ ಚಾಲಕರು ಪ್ರತಿಭಟನೆ ಮಾಡಿದ್ದರಿಂದ ಘಟಕ-03 ರ 27 ಪಾಳಿ ಹಾಗೂ 46 ಸಾಮಾನ್ಯ ಪಾಳಿಯಲ್ಲಿನ ಅನುಸೂಚಿಗಳ ಕಾರ್ಯಾಚರಣೆಯಲ್ಲಿ ಬೆಳಗ್ಗೆ 07:00 ರಿಂದ 11:00 ಘಂಟೆ ವರೆಗೆ ವ್ಯತ್ಯಯ ಉಂಟಾಗಿರುತ್ತದೆ.

`BMTC' ಎಲೆಕ್ಟ್ರಿಕ್ ಬಸ್ಸುಗಳ ಕಾರ್ಯಾಚರಣೆಯಲ್ಲಿ‌ ವ್ಯತ್ಯಯ : ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಖಡಕ್ ವಾರ್ನಿಂಗ್ Transport Minister Ramalinga Reddy warns of disruption in operation of BMTC electric buses
Share. Facebook Twitter LinkedIn WhatsApp Email

Related Posts

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM5 Mins Read

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM1 Min Read

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM1 Min Read
Recent News

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

11/08/2025 10:10 PM

ಚಿಕ್ಕದಿದ್ರೂ ದೊಡ್ಡ ಕೆಲಸ.. ಊಟದ ನಂತ್ರ ಹೀಗೆ ಮಾಡಿದ್ರೆ, 48 ಗಂಟೆಗಳಲ್ಲಿ ಊಹಿಸದ ಬದಲಾವಣೆ

11/08/2025 10:05 PM

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM
State News
KARNATAKA

3 ದಿನಗಳ ಹರ್ ಘರ್ ತಿರಂಗಾ ಚಲನಚಿತ್ರೋತ್ಸವ ದೇಶಾದ್ಯಂತ ಆರಂಭ: ಭಾರತದ ಸ್ವಾತಂತ್ರ್ಯ, ಏಕತೆಯ ಕಥೆಗಳ ಪ್ರದರ್ಶನ

By kannadanewsnow0911/08/2025 10:10 PM KARNATAKA 5 Mins Read

ನವದೆಹಲಿ: ಹರ್ ಘರ್ ತಿರಂಗಾ – ದೇಶಭಕ್ತಿಯ ಚಲನಚಿತ್ರೋತ್ಸವವು ಇಂದು ಉತ್ಸಾಹಭರಿತ ಪ್ರತಿಕ್ರಿಯೆಯೊಂದಿಗೆ ಪ್ರಾರಂಭವಾಯಿತು, ಇದು ಭಾರತದ ಸ್ವಾತಂತ್ರ್ಯಕ್ಕೆ ಮೂರು ದಿನಗಳ…

ರಾಹುಲ್ ಗಾಂಧಿ ಸುಳ್ಳಿಗೆ ಕನ್ನಡಿ ಹಿಡಿದ ದಲಿತ ಮಂತ್ರಿಗೆ ರಾಜೀನಾಮೆ ‘ಗ್ಯಾರೆಂಟಿ ಭಾಗ್ಯ’: ಆರ್.ಅಶೋಕ್

11/08/2025 10:05 PM

ಕಾನನ ಪ್ರದೇಶದೊಳಗೆ ಸಾಗುವ ರಸ್ತೆಗಳಲ್ಲಿ ಅರಣ್ಯ ಇಲಾಖೆಯ ಗಸ್ತು ವಾಹನ ನಿಯೋಜನೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ

11/08/2025 10:01 PM

ಸಾಗರದಲ್ಲಿ ಧರ್ಮಸ್ಥಳ ಕ್ಷೇತ್ರದ ಗೌರವ, ಘನತೆ ಕುಗ್ಗಿಸುವವರ ವಿರುದ್ಧ ಸೂಕ್ತ ಕ್ರಮಕ್ಕೆ ನಾಗರೀಕ ಸಮಿತಿ ಒತ್ತಾಯ

11/08/2025 8:40 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.