ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಂಗಾರು ಹಂಗಾಮಿನಲ್ಲಿ ಬರ ಪರಿಸ್ಥಿತಿಯಿಂದ ಉಂಟಾದಂತ ಬೆಳೆಹಾನಿಗೆ ಅರ್ಹ ರೈತರಿಗೆ ರೂ.2000ವರೆಗೆ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ಪಾವತಿಸಲು ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ.
ಈ ಕುರಿತಂತೆ ಇಂದು ರಾಜ್ಯ ಸರ್ಕಾರ ಆದೇಶ ಮಾಡಿದ್ದು, 2023ನೇ ಸಾಲಿನ ನೈರುತ್ಯ ಮುಂಗಾರು ಹಂಗಾಮಿನ ವೈಫಲ್ಯ / ಮಳೆಕೊರತೆ ಕಂಡು ಬಂದ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಬರ ಕೈಪಿಡಿ-2020 ರಲ್ಲಿ ಬರ ಪರಿಸ್ಥಿತಿ ಘೋಷಿಸಲು ಅನುಸರಿಸಬೇಕಾದ ಮಾನದಂಡಗಳಂತೆ ನಿಯಮಾನುಸಾರ ಪರಿಶೀಲಿಸಿ, ರಾಜ್ಯದ 223 ತಾಲ್ಲೂಕುಗಳನ್ನು (196 ತೀವ್ರ ಬರ & 27 ಸಾಧರಣ ಬರ) ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿರುತ್ತದೆ. ಭಾರತ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ಅನುದಾನವನ್ನು ನಿರೀಕ್ಷಿಸಿ, ಭಾರತ ಸರ್ಕಾರದ ಗ್ರಹ ಮಂತ್ರಾಲಯವು SDRF/NDRF ರಡಿ ನೀಡಬಹುದಾದ ಪರಿಹಾರ ಮೊತ್ತದ ಬಗ್ಗೆ ಮೇಲೆ (2)ರಲ್ಲಿ ಓದಲಾದ ದಿನಾಂಕ:11/07/2023ರ Items of Expenditure ಮಾರ್ಗಸೂಚಿಗಳ ಅನುಸಾರ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ಅರ್ಹ ರೈತರಿಗೆ ಗರಿಷ್ಟ ರೂ.2,000/- ರವರೆಗೆ, ಗರಿಷ್ಠ 02 ಹೆಕ್ಟೇರ್ಗೆ ಸಿಮೀತಗೊಳಿಸಿ ಕೆಲವೊಂದು ಷರತ್ತುಗಳ ಪಾಲನೆಗೊಳಪಡಿಸಿ ಪಾವತಿಸಲು ಮೇಲೆ (3) ರಲ್ಲಿ ಓದಲಾದ ದಿನಾಂಕ: 05.01.20240 ಆದೇಶದಲ್ಲಿ O.105.00 ಕೋಟಿಗಳನ್ನು, ADO:16.01.20240 ಸರ್ಕಾರಿ ಆದೇಶದಲ್ಲಿ do.237.53 ಕೋಟಿಗಳನ್ನು ಹಾಗೂ ದಿನಾಂಕ:22.01.2024ರ ಸರ್ಕಾರಿ ಆದೇಶದಲ್ಲಿ ರೂ.342.47 ಕೋಟಿಗಳಂತೆ ಒಟ್ಟು ರೂ.685.00 ಕೋಟಿಗಳನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಬಿಡುಗಡೆ ಮಾಡಲಾಗಿದ್ದು, ಅದರಂತೆ, ಈ ಮೊತ್ತವನ್ನು ರಾಜ್ಯದಲ್ಲಿ ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸಿರುವ 223 ತಾಲ್ಲೂಕುಗಳಲ್ಲಿ ನಿಯಮಾನುಸಾರ ಅರ್ಹವಿರುವ 33,55,599 ಫಲಾನುಭವಿ ರೈತರುಗಳಿಗೆ ಅರ್ಹತೆಯನುಸಾರ ಒಟ್ಟು ಮೊತ್ತ ರೂ.6364466128/-ಗಳನ್ನು ಬೆಳೆಹಾನಿ ಪರಿಹಾರವಾಗಿ ಪಾವತಿಸಲಾಗಿರುತ್ತದೆಂದು ತಿಳಿಸುತ್ತಾ, ಉಪಯೋಗಿತಾ ಪುಮಾಣ ಪತ್ರವನ್ನು ಮೇಲೆ (4)ರಲ್ಲಿ ಓದಲಾದ ದಿನಾಂಕ:01.04.2024ರ ಪತ್ರದಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ, ಆಯುಕ್ತರು ನೀಡಿರುತ್ತಾರೆ ಎಂದಿದ್ದಾರೆ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) ಆರ್ಥಿಕ ನೆರವನ್ನು ನೀಡುವಂತೆ, ಸೂಕ್ತ ನಿರ್ದೇಶನವನ್ನು ಭಾರತ ಸರ್ಕಾರಕ್ಕೆ ನೀಡುವಂತೆ ರಾಜ್ಯ ಸರ್ಕಾರವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಂಖ್ಯೆ: 210/2024ನ್ನು ದಾಖಲಿಸಿದ್ದು, ಇನ್ನು ಬಾಕಿ ಇರುತ್ತದೆ ಎಂದಿದೆ.
ಭಾರತ ಸರ್ಕಾರದ ಆರ್ಥಿಕ ಮಂತ್ರಾಲಯವು ಮೇಲೆ (5)ರಲ್ಲಿ ಓದಲಾದ ದಿನಾಂಕ:26.04.2024ರ ಪತ್ರದಲ್ಲಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (NDRF) 2023ನೇ ಸಾಲಿನ ಮುಂಗಾರು (Kharif) ಬರ ಪರಿಹಾರಕ್ಕಾಗಿ ರೂ. 3454.22 ಕೋಟಿಗಳನ್ನು ರಾಜ್ಯಕ್ಕೆ ಬಿಡುಗಡೆ ಮಾಡಿರುತ್ತದೆ ಎಂದು ಹೇಳಿದೆ.
ಭಾರತ ಸರ್ಕಾರದ ಗೃಹ ಮಂತ್ರಾಲಯವು SDRF/NDRF ರಡಿ ನೀಡಬಹುದಾದ ಪರಿಹಾರ ಮೊತ್ತದ ಬಗ್ಗೆ ಮೇಲೆ (2)ರಲ್ಲಿ ಓದಲಾದ ದಿನಾಂಕ:11/07/2023ರ Items of Expenditure ಮಾರ್ಗಸೂಚಿಗಳ ಪುಕಾರ ನಿಯಮಾನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಟ ರೂ.2000/-ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಪಾವತಿಸಬೇಕಾಗಿರುವ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಪಾವತಿಸಲು ಭಾರತ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ నిధి (NDRF)& ಬಿಡುಗಡೆಯಾಗಿರುವ ರೂ.3454.22 ಕೋಟಿಗಳನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ, ಆಯುಕ್ತರಿಗೆ ಬಿಡುಗಡೆ ಮಾಡಲು ಸರ್ಕಾರವು ತೀರ್ಮಾನಿಸಿ, ಕೆಳಕಂಡಂತೆ ಆದೇಶಿಸಿದೆ.
ಪುಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಗ್ರಹ ಮಂತ್ರಾಲಯವು SDRF/NDRF ರಡಿ ನೀಡಬಹುದಾದ ಪರಿಹಾರ ಮೊತ್ತದ ಬಗ್ಗೆ ಮೇಲೆ (2)ರಲ್ಲಿ ಓದಲಾದ ದಿನಾಂಕ:11/07/2023ರ Items of Expenditure ಮಾರ್ಗಸೂಚಿಗಳ ಪುಕಾರ ನಿಯಮಾನುಸಾರ ಈಗಾಗಲೇ ಅರ್ಹ ರೈತರಿಗೆ ಗರಿಷ್ಮ ರೂ.2000/-ರವರೆಗೆ ಅರ್ಹತೆಯಂತೆ ಪಾವತಿಸಿರುವ ಬೆಳೆಹಾನಿ ಪರಿಹಾರ ಮೊತ್ತವನ್ನು ಪರಿಗಣನೆಗೆ ತೆಗೆದುಕೊಂಡು, ಅರ್ಹತೆಯಂತೆ ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ ಮೊತ್ತವನ್ನು, ಮೇಲೆ (3)ರಲ್ಲಿ ಓದಲಾದ ದಿನಾಂಕ:05.01.2024ರ ಸರ್ಕಾರಿ ಆದೇಶದಲ್ಲಿ ವಿಧಿಸಿರುವ ಎಲ್ಲಾ ಷರತ್ತುಗಳ ಪಾಲನೆಗೆ ಒಳಪಟ್ಟು, ನಿಯಮಾನುಸಾರ ಅರ್ಹ ರೈತರಿಗೆ ಪಾವತಿಸಲು ಭಾರತ ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (NDRF)ರಡಿ ಬಿಡುಗಡೆಯಾಗಿರುವ ರೂ. 3454.22 ಕೋಟಿಗಳನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ, ಆಯುಕ್ತರಿಗೆ ಬಿಡುಗಡೆ ಮಾಡಿ, ಆದೇಶಿಸಿದೆ.
ಈ ಮೊತ್ತವನ್ನು ಲೆಕ್ಕ ಶೀರ್ಷಿಕೆ: 2245-80-102-0-01-059″ ರಡಿ ಭರಿಸತಕ್ಕದ್ದು. ಬಿಡುಗಡೆ ಮಾಡಿರುವ ಅನುದಾನವನ್ನು ಸರ್ಕಾರದ ಅಧೀನ ಕಾರ್ಯದರ್ಶಿ ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ & ಸೇವೆಗಳು-3) ಇವರು ಲೆಕ್ಕ ಶೀರ್ಷಿಕೆ “2245-80-102-0-01-059” ರಡಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರ ಡ್ರಾಯಿಂಗ್ ಕೋಡ್ 265400 ಗೆ ಅಪ್ಲೋಡ್ ಮಾಡುವುದು.
ಪರಿಹಾರ ತಂತ್ರಾಂಶವನ್ನು ನಿರ್ವಹಣೆ ಮಾಡುತ್ತಿರುವ ಭೂಮಿ ಉಸ್ತುವಾರಿ ಕೋಶವು ದಿನಾಂಕ:05/01/2024ರ ಸರ್ಕಾರಿ ಆದೇಶ ಸಂಖ್ಯೆ: ಕಂಇ 560 ಇಟಿಸಿ 20230 ಹಾಗೂ ಈ ಆದೇಶದಲ್ಲಿ ವಿಧಿಸಿರುವ ಎಲ್ಲಾ ಷರತ್ತುಗಳನ್ನು ಚಾಚುತಪ್ಪದೇ ಪಾಲಿಸತಕ್ಕದ್ದು.
ಸದರಿ ಅನುದಾನವನ್ನು ಅರ್ಹತೆಯ ಮತ್ತು ನಿಯಮಾನುಸಾರ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರು ಖಜಾನೆ-2 ರಡಿ CTS-5 ರಶೀದಿ ಮತ್ತು ನೇರ ನಗದು ವರ್ಗಾವಣೆ (DT) ವೇ ಮೂಲಕ ನಿಯಮಾನುಸಾರ ಅರ್ಹ ಫಲಾನುಭವಿಗಳ ಆಧಾರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸುವಂತೆ ಸೂಚಿಸಲಾಗಿದೆ.
ಕೋವಿಶೀಲ್ಡ್ ಬಗ್ಗೆ ಯಾವುದೇ ಸುತ್ತೋಲೆ ಹೊರಡಿಸಿಲ್ಲ: ಸ್ಪಷ್ಟನೆ ನೀಡಿದ ಆರೋಗ್ಯ ಇಲಾಖೆ
ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಶೇ.86ರಷ್ಟು ಉದ್ಯೋಗ ಹೆಚ್ಚಳ, ನೇಮಕಾತಿಯಲ್ಲಿ ನಮ್ಮ ಬೆಂಗಳೂರೇ ಫಸ್ಟ್