ಬಾಗಲಕೋಟೆ : ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರಜ್ವಲ್ ರೇವಣ್ಣ ಎಲ್ಲೇ ಇದ್ದರೂ ಹಿಡಿದುಕೊಂಡು ಬರುತ್ತೇವೆ ಎಂದು ಬಾಗಲಕೋಟೆಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು , ಬಿಜೆಪಿಯವರು ತಪ್ಪು ಮಾಡಿದ್ದಾರೆ.ಪ್ರಜ್ವಲ್ ರೇವಣ್ಣ ವಿಡಿಯೋಗಳು ಎಂದು ಗೊತ್ತಿತ್ತು. ಆದರೂ ಯಾಕೆ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರು? ಪ್ರಜ್ವಲ್ ರೇವಣ್ಣ ವಿರುದ್ಧ ರೇಪ್ ಕೇಸ್ ದಾಖಲಾಗಿದೆ. ನನ್ನನ್ನು ರೇಪ್ ಮಾಡಿದ್ದಾನೆ ಎಂದು ಮಹಿಳೆಯೇ ಹೇಳಿದ್ದಾಳೆ.ಸಂತ್ರಸ್ತರು ಯಾವತ್ತೂ ಸುಳ್ಳು ಹೇಳಲ್ಲ. ಗೊತ್ತಿದ್ದರೂ ಯಾಕೆ ಬಿಜೆಪಿಯವರು ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ವಾಗ್ದಾಳಿ ನಡೆಸಿದರು.
ಮದುವೆಯಾಗಿರುವಂತಹ ಮಹಿಳೆ ಬಹಿರಂಗವಾಗಿ ನನ್ನ ಮೇಲೆ ಅತ್ಯಾಚಾರ ಆಗಿದೆ ಎಂದು ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಸುಳ್ಳು ಹೇಳಿದರೆ ಅವರ ಮಾನ ಮರ್ಯಾದೆ ಹೋಗಲ್ವಾ? ಆ ಒಂದು ಮಹಿಳೆ ಅತ್ಯಾಚಾರ ಮಾಡಿದಾರೆ ಎಂದು ಹೇಳಿದರು ಕೂಡ ಗೊತ್ತಿದ್ದರೂ ಕೂಡ ಬಿಜೆಪಿಯವರು ಪ್ರಜ್ವಲ್ ಗೆ ಸೀಟು ಕೊಟ್ಟರು. ಯಾಕೆ ಕೊಡಬೇಕು? ಎಂದು ಪ್ರಶ್ನಿಸಿದರು.
ಮೋದಿ ಅವರು ಮತ್ತು ಅಮಿತ್ ಶಾ ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಈಗ ಅನೇಕ ಜನ ಐಟಿ ಹಾಗೂ ಇಡಿ ಕೆಸ್ ನಲ್ಲಿ ಇರುವಂತವರನ್ನು ಸೇರಿಸಿಕೊಂಡಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ? ಅವರು ಅಧಿಕಾರ ಉಳಿಸಿಕೊಳ್ಳುವಗೋಸ್ಕರ ಏನು ಮಾಡೋದಕ್ಕೂ ಹೆಸಲ್ಲ ಎಂದು ಮೋದಿ ಶಾ ವಿರುದ್ಧ ವಾಗ್ದಾಳಿ ನಡೆಸಿದರು.
ಹಿಂದೂ ರಾಷ್ಟ್ರ ಮಾಡಕೋಸ್ಕರ ಮಾಡಬಾರದ ಕೆಲಸ ಮಾಡುತ್ತಾರೆ, ಕಾನೂನು ಬಾಹಿರವದಂತಹ ಅನೇಕ ಚಟುವಟಿಕೆಗಳನ್ನು ಬಿಜೆಪಿಯವರು ಮಾಡುತ್ತಾರೆ. ಸಮಾಜ ಸಮಾನತೆ ಕೈಯಲ್ಲಿ ನಂಬಿಕೆ ಇಲ್ಲ. ದೇಶದ ಐಕ್ಯತೆಯಲ್ಲಿ ನಂಬಿಕೆ ಇಲ್ಲ. ಸಮಾನತೆಯಲ್ಲಿ ನಂಬಿಕೆ ಇಲ್ಲ.ಸಂವಿಧಾನದಲ್ಲಿ ನಂಬಿಕೆ ಇಲ್ಲ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಹಾಗಾಗಿ ಅವರು ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುತ್ತಾರೆ ಎಂದು ಕಿಡಿಕಾರಿದರು.