ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗಲು ಅನುಮತಿ ಪಡೆಯಬೇಕಾ? ಹೀಗಾಗಿ ಇಂದು ಕಾಂಗ್ರೆಸ್ ಪತನದ ಪರಾಖಾಷ್ಟೇ ಹೊಂದಿದ್ದು ಅಧಿಕಾರಕ್ಕಾಗಿ ಬೆಂಕಿನ ಆಟ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ತುಕುಡೆ ತುಕುಡೆ ಗ್ಯಾಂಗ್ ಜೊತೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕೆಂಡಮಂಡಲರಾದರು.ಕಾಂಗ್ರೆಸ್ ದೇಶದ ವಿರುದ್ಧವೇ ಮಾತನಾಡುತ್ತದೆ. ಕಾಂಗ್ರೆಸ್ ಪಕ್ಷ ಕತರ್ನಾಕ್ ಕಾಂಗ್ರೆಸ್ನ ಕತರ್ನಾಕು ಉದ್ದೇಶಗಳು ಈಗಲೂ ಹಾಗೆ ಇದೆ. ಆರ್ಟಿಕಲ್ 370 ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು. ತುಕುಡಿ ತಿಕುಡೆ ಗ್ಯಾಂಗ್ ಸುಲ್ತಾನಾಗಿ ಕಾಂಗ್ರೆಸ್ ಓಡಾಡುತ್ತಿದೆ ಎಂದರು.
ಕಾಂಗ್ರೆಸ್ನ ಖತರ್ನಾಕ ಉದ್ದೇಶಗಳು ಈಗಲೂ ಹಾಗೆ ಇದೆ. ಕಾಶ್ಮೀರಕ್ಕೂ ಬೇರೆ ರಾಜ್ಯಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ಭಾರತದ ವಿರುದ್ಧ ಮಾಡುವವರಿಗೆ ಟಿಕೆಟ್ ಕೊಡುತ್ತದೆ.ಭಾರತ ಮಾತೆಗೆ ಜೈಕಾರ ಹಾಕಲು ನಾಯಕರ ಅನುಮತಿ ಕೇಳಬೇಕಾಯಿತು. ಮೊದಲು ಒಂದೇ ಮಾತರಂ ಗೆ ವಿರೋಧ ಮಾಡುತ್ತಿದ್ದರು. ಭಾರತ ಮಾತೆಗೆ ಜೈಕಾರ ಹಾಕಲು ಅನುಮತಿ ಪಡೆಯಬೇಕಾ? ಇಂತಹ ಕಾಂಗ್ರೆಸ್ ಅನ್ನು ಜನರು ಕ್ಷಮಿಸುತ್ತಾರಾ? ಎಂದು ಆಕ್ರೋಶ ಹೊರಹಾಕಿದರು.
ನಿಮ್ಮ ಪ್ರತಿಯೊಂದು ವೋಟು ಮೋದಿ ತಾಕತ್ತು ಹೆಚ್ಚಿಸುತ್ತದೆ. ದೇವೇಗೌಡರಂತಹ ಹಿರಿಯರು ಮಾರ್ಗದರ್ಶನವಿದೆ. ಯಡಿಯೂರಪ್ಪ ಅವರ ನಾಯಕತ್ವ ಇದೆ ಕುಮಾರಸ್ವಾಮಿ ಅವರ ಅನುಭವವಿದೆ. ಕರ್ನಾಟಕದಲ್ಲಿ ಇವೆಲ್ಲ ಪರಿಣಾಮ ಬೀರಲಿದೆ. ರಾಷ್ಟ್ರಕವಿ ಕುವೆಂಪು ರವರ ಏಕತೆಯ ಧ್ವನಿ ಕೃಷ್ಣರಾಜ ಒಡೆಯರ್ ಅಭಿವೃದ್ಧಿ ಕಾರ್ಯ ಪ್ರೇರಣೆಯಾಗಲಿದೆ ಎಂದು ತಿಳಿಸಿದರು.
ಜಗತ್ತಿನ ದೇಶಗಳು ಭಾರತದ ಖ್ಯಾತಿ ಹೆಚ್ಚಾಗಿದೆ.ಕಾಂಗ್ರೆಸ್ ನ ನಾಯಕ ವಿದೇಶದಲ್ಲಿ ಭಾರತದ ಮಾತನಾಡುತ್ತಾರೆ.ಸರ್ಜಿಕಲ್ ಸ್ಟ್ರೈಕ್ ಅಗೆ ಸಾಕ್ಷಿ ಕೇಳುತ್ತಿದ್ದಾರೆ. ನಿಷೇಧಕ್ಕೊಳಪಟ್ಟ ಸಂಘಟನೆಯ ರಾಜಕೀಯ ಪಕ್ಷದ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದು ಧಾರ್ಮಿಕ ಧ್ವಜಗಳನ್ನು ಕೆಳಗಿಳಿಸಲಾಗುತ್ತದೆ. ಮತ ಬ್ಯಾಂಕ್ ರಾಜಕಾರಣದಿಂದ ದೇಶ ಉದ್ದಾರ ಆಗುತ್ತಾ? ಮೈಸೂರು ಕರ್ನಾಟಕದ ಸಂಸ್ಕೃತಿಕ ನಗರಿ ಆಗಿದೆ ಎಂದು ಅವರು ತಿಳಿಸಿದರು.