ರಾಮನಗರ : ರಾಮನಗರ ಜಿಲ್ಲೆಯ ಕನಕಪುರ ಮೂಲದ ಕಾಂಗ್ರೆಸ್ ಮುಖಂಡರಾಗಿರುವಂತಹ ಕ್ಯಾಂಪರಾಜು ಮನೆಯ ಮೇಲೆ ಇದೀಗ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಅವರ ಮನೆಯಲ್ಲಿರುವ ದಾಖಲೆಗಳು ಹಾಗೂ ಕಡತಗಳನ್ನು ಅಧಿಕಾರಿಗಳು ಇದೀಗ ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಮುಖಂಡ ಕೆಂಪರಾಜು ಮನೆಯ ಮೇಲೆ ಐಟಿ ಅಧಿಕಾರಿಗಳ ದಾಳಿ ನಡೆಸಿದ್ದಾರೆ. ಕೆಂಪರಾಜು ನಿವಾಸದಲ್ಲಿ ಐಟಿ ಅಧಿಕಾರಿಗಳು ಇದೀಗ ದಾಳಿ ನಡೆಸಿ ದಾಖಲೆಗಳನ್ನು ಹಾಗೂ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೆಂಪರಾಜು ರಾಮನಗರ ಜಿಲ್ಲೆಯ ಕನಕಪುರ ಮೂಲದ ಕಾಂಗ್ರೆಸ್ ಮುಖಂಡ ಎನ್ನಲಾಗಿದೆ.
ಅಲ್ಲದೆ ಅವರು ಗ್ರಾನೆಟ್, ಕ್ರಶರ್ ಸೇರಿದಂತೆ ಹಲವು ಬಿಸಿನೆಸ್ ಅನ್ನು ಹೊಂದಿದ್ದು, ಈ ಹಿಂದೆ ಯುವ ಕಾಂಗ್ರೆಸ್ ಚುನಾವಣೆಗೂ ಅವರು ಸ್ಪರ್ಧಿಸಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ಇದೀಗ ಐಟಿ ಅಧಿಕಾರಿಗಳು ಅವರ ಮನೆಯ ಮೇಲೆ ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸುತ್ತಿದ್ದಾರೆ. ಎರಡು ಇನೋವಾ ಕಾರಿನಲ್ಲಿ ಐಟಿ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ.