Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಇಂದಿಗೆ 10 ವರ್ಷ ಪೂರೈಸಿದ `ಡಿಜಿಟಲ್ ಇಂಡಿಯಾ’ : ಪ್ರಧಾನಿ ಮೋದಿ ಆಸಕ್ತಿದಾಯಕ ಟ್ವೀಟ್ | Digital India

01/07/2025 10:27 AM

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

01/07/2025 10:27 AM

BREAKING : ತಮಿಳುನಾಡಿನಲ್ಲಿ ಘೋರ ದುರಂತ : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನ.!

01/07/2025 10:19 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮೋದಿ’ ಬಂದ ಮೇಲೆ ಕೆಂದ್ರದಲ್ಲಿ ‘ಸಮ್ಮಿಶ್ರ ಸರ್ಕಾರ’ದ ಕಾಲ ಮುಗಿದಿದೆ: ಬಸವರಾಜ ಬೊಮ್ಮಾಯಿ
KARNATAKA

‘ಮೋದಿ’ ಬಂದ ಮೇಲೆ ಕೆಂದ್ರದಲ್ಲಿ ‘ಸಮ್ಮಿಶ್ರ ಸರ್ಕಾರ’ದ ಕಾಲ ಮುಗಿದಿದೆ: ಬಸವರಾಜ ಬೊಮ್ಮಾಯಿ

By kannadanewsnow0903/04/2024 6:29 PM

ಹಾವೇರಿ: ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರ್ಕಾರದ ಕಾಲ ಮುಗಿದು ಹೋಗಿದೆ. ದೇಶದ ಅಭಿವೃದ್ಧಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಏಕ ಪಕ್ಷದ ಆಡಳಿತ ಒಳ್ಳೆಯದು ಎಂದು ದೇಶದ ಜನರು ತೀರ್ಮಾನಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕುಡುಪಲಿ, ಕಡೂರು, ಬುಳ್ಳಾಪೂರ, ಹಳ್ಳೂರು ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಪಧಾನಿ ನರೇಂದ್ರ ಮೋದಿಯವರು ಈ ಚುನಾವಣೆಯ ಕೇಂದ್ರಬಿಂದುವಾಗಿದ್ದಾರೆ. ಸಾಮಾನ್ಯವಾಗಿ ಎರಡು ವ್ಯಕ್ತಿತ್ವದ ನಡುವೆ ಚುನಾವಣೆಯಾಗುತ್ತದೆ. ಆದರೆ, ಇಲ್ಲಿ ನರೇಂದ್ರಮೋದಿ ಪರ ಹಾಗೂ ನರೇಂದ್ರ ಮೋದಿ ವಿರುದ್ಧ ಚುನಾವಣೆ ನಡೆಯುತ್ತಿದೆ. ದೇಶದಲ್ಲಿ ನರೇಂದ್ರ ಮೋದಿಯಂತಹ ವ್ಯಕ್ತಿತ್ವ ಬೇರೆ ಯಾರೂ ಇಲ್ಲ ಎಂದು ಹೇಳಿದರು.

ಲೋಕಸಭೆಯ 543 ಸ್ಥಾನದಲ್ಲಿ ಸ್ಪರ್ಧೆ ಮಾಡಲು ಸಾಧ್ಯವಾಗದಿರುವ ಪಕ್ಷಗಳು ದೇಶ ಆಳುವ ಬಗ್ಗೆ ಮಾತನಾಡುತ್ತವೆ. ಹಿಂದೆ ಸಣ್ಣ ಸಣ್ಣ ಪಕ್ಷಗಳು ಸೇರಿ ಸರ್ಕಾರ ಆಳಿರುವುದನ್ನು ನೋಡಿದ್ದೇವೆ. ಕೇಂದ್ರದಲ್ಲಿ ನರೇಂದ್ರ ಮೋದಿಯವರು ಬಂದ ಮೇಲೆ ಸಮ್ಮಿಶ್ರ ಸರ್ಕಾರದ ಕಾಲ ಮುಗಿದು ಹೋಗಿದೆ. ಇದು ದೇಶದ ಅಭಿವೃದ್ಧಿ ಮತ್ತು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು. ಈ ಕೆಲಸವನ್ನು ದೇಶದ ಪ್ರಜೆಗಳು ಮಾಡುತ್ತಿದ್ದಾರೆ ಎಂದರು.

ಜನರ ಪ್ರೀತಿ ವಿಶ್ವಾಸವನ್ನು ಪಡೆಯಬೇಕೆಂದರೆ ಹಗಲುರಾತ್ರಿ ಜನರಿಗಾಗಿ ಕೆಲಸ ಮಾಡಬೇಕಾಗುತ್ತದೆ. ದೇಶ ಹಲವಾರು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮನ್ನಾಳುವ ಬ್ರಿಟೀಷರು ಮಾತ್ರ ನಮ್ಮ ವೈರಿಗಳಾಗಿದ್ದರು. ಆದರೆ, ಸ್ವಾತಂತ್ರ ಬಂದ ಮೇಲೆ ಬಡತನ, ಜನಸಂಖ್ಯೆ ನಮಗೆ ದೊಡ್ಡ ಸವಾಲಾಗಿದ್ದವು. ಜನಸಂಖ್ಯೆಯೇ ದೇಶಕ್ಕೆ ದೊಡ್ಡ ಶಾಪ ಎಂದು ವಿಶ್ಲೇಷಣೆ ಮಾಡಲಾಗುತ್ತಿತ್ತು. ಆದರೆ, ಮೋದಿಯವರು ಬಂದ ಮೇಲೆ ಜನಸಂಖ್ಯೆಯನ್ನೇ ಅಭಿವೃದ್ಧಿಯ ಏಣಿ ಮಾಡಿ ಶೇ 46 ರಷ್ಟಿರುವ ಯುವಕರನ್ನು ಬಳಸಿಕೊಂಡು ದೇಶದ ಅಭಿವೃದ್ಧಿ ಮಾಡುತ್ತಿದ್ದಾರೆ. ಇದು ನರೇಂದ್ರ ಮೋದಿಯವರ ತಾಕತ್ತು. ಸವಾಲನ್ನು ಮೆಟ್ಟಿಲಾಗಿ ಮಾಡಿಕೊಂಡು ಸವಾಲನ್ನು ಗೆಲುವಾಗಿ ಪರಿವರ್ತಿಸುವ ಶಕ್ತಿ ನರೇಂದ್ರ ಮೋದಿಯವರಿಗೆ ಇದೆ.

ಮನಮೋಹನ್ ಸಿಂಗ್ ದುರ್ಬಲ ಪಧಾನಿ

ಮೋದಿಯವರು ಬರುವ ಮೊದಲು ದೇಶದಲ್ಲಿ ಭಯೋತ್ಪಾದನೆ ಹೆಚ್ಚಾಗಿತ್ತು. ಆಗ ದೇಶದಲ್ಲಿ ಅತ್ಯಂತ ದುರ್ಬಲ ಸರ್ಕಾರ ಹಾಗೂ ದುರ್ಬಲ ಪಧಾನಿ ಇದ್ದರು. ಮನಮೋಹನ್ ‌ ಸಿಂಗ್ ಅವರು ರಿಮೋಟ್ ಕಂಟೋಲ್ ಪ್ರಧಾನಮಂತ್ರಿಯಾಗಿದ್ದರು. ಸೋನಿಯಾಗಾಂಧಿ ಮಾತು ಮೀರಿ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸ್ವತಃ ರಾಹುಲ್ ಗಾಂಧಿ ಮನಮೋಹನ್ ಸಿಂಗ್ ಅವರಿಗೆ ಗೌರವ ಕೊಡುತ್ತಿರಲಿಲ್ಲ ಎಂದರು.

ಒಂದು ಸಾರಿ ಮನಮೋಹನ್ ಸಿಂಗ್ ಅವರು ಯಾವ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣಗಳಿರುತ್ತವೆಯೋ ಅಂತವರಿಗೆ ಚುನಾವಣೆಗೆ ಸ್ಪರ್ಧೆಗೆ ಅವಕಾಶ ನೀಡಬಾರದು ಎನ್ನುವ ಕಾನೂನು ತರಲು ಹೊರಟಿದ್ದರು. ಆಗ ರಾಹುಲ್ ಗಾಂಧಿಯವರು ವಿದೇಶದಲ್ಲಿದ್ದರು. ಅವರು ವಿಮಾನದಲ್ಲಿ ಬರುವಾಗ ಅವರಿಗೆ ವಿಧೇಯಕದ ಪ್ರತಿ ನೀಡಿದ್ದರು. ಅವರು ಅವರದೇ ಪಕ್ಷದ ಪ್ರಧಾನಿ ಜಾರಿಗೆ ತರಲು ಹೊರಟಿದ್ದ ಕಾನೂನು ಪ್ರತಿಯನ್ನು ಹರಿದು ಹಾಕಿದ್ದರು. ಯಾಕೆಂದರೆ ರಾಹುಲ್ ಗಾಂಧಿ ಅವರ ಕೈಯಲ್ಲಿ ಮನಮೋಹನ್ ಸಿಂಗ್ ಅವರ ರಿಮೋಟ್ ಕಂಟ್ರೋಲ್ ಇತ್ತು ಪ್ರಧಾನಿ ನರೇಂದ್ರ ಮೋದಿ ರಿಮೋಟ್ ಕಂಟೋಲ್‌ನಲ್ಲಿ ಯಾವುದೇ ವ್ಯಕ್ತಿಯ ಕೈಯಲ್ಲಿ ಇಲ್ಲ. ಇಡಿ ದೇಶದ 130 ಕೋಟಿ ಜನರ ರಿಮೋಟ್ ಕಂಟ್ರೋಲ್‌ನಲ್ಲಿ ಇದ್ದಾರೆ ಎಂದು ಹೇಳಿದರು.

ಕೈಗಾರಿಕೆ ನೀರಾವರಿಗೆ ಯೋಜನೆ

ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದ ಬದಲಾವಣೆ ತರಲು ಶಿಕ್ಷಣ ಹಾಗೂ ಔದ್ಯೋಗಿಕ ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗುವುದು. ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಈ ಕ್ಷೇತವನ್ನು ಸಮಗ್ರ ಅಭಿವೃದ್ಧಿ ಮಾಡಲು ತೀರ್ಮಾನಿಸಿದ್ದೇನೆ. ಅದಕ್ಕಾಗಿ ಎಲ್ಲರೂ ನರೇಂದ್ರ ಮೋದಿಯವರ ಕೈ ಬಲ ಪಡಿಸಲು ಕಮಲದ ಗುರುತಿಗೆ ಮತ ನೀಡಿ ತಮ್ಮನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಸ್ಥಳೀಯ ಮುಖಂಡರು ಹಾಜರಿದ್ದರು.

ಬಿಸಿಪಿ ಥ್ರಿ ಇನ್ ಒನ್ : ಬೊಮ್ಮಾಯಿ

ಮಾಜಿ ಸಚಿವ ಬಿ.ಸಿ.ಪಾಟೀಲ್‌ ಅವರು ಪೊಲೀಸ್ ಅಧಿಕಾರಿಯಾಗಿ, ಸಿನೆಮಾ ನಟರಾಗಿ, ರಾಜಕಾರಣಿಯಾಗಿ ಥ್ರಿ ಇನ್ ಒನ್ ಮ್ಯಾನ್ ಆಗಿದ್ದಾರೆ. ಇದು ಅಷ್ಟು ಸುಲಭದ ಮಾತಲ್ಲ. ಒಬ್ಬ ಅಧಿಕಾರಿಯಾಗಿ ನೇಮಕ ಆಗುವುದೇ ಕಷ್ಟ ಅಂತದರಲ್ಲಿ ಪೊಲೀಸ್ ಅಧಿಕಾರಿಯಾಗಿ ನೇಮಕ ಆಗಿ ಕೆಲಸ ಮಾಡಿ, ಅಲ್ಲಿಂದ ಸಿನೆಮಾ ರಂಗ ಪ್ರವೇಶ ಮಾಡಿ, ಭಾವನಾತ್ಮಕ ಲೋಕಕ್ಕೆ ಹೋಗಿ ಅಲ್ಲಿಯೂ ಜನರ ಪ್ರೀತಿ ಗಳಿಸಿ, ಈಗ ರಾಜಕಾರಣಿಯಾಗಿ ಬಂದು ಎಲ್ಲರ ಎದುರು ನಿಂತಿದ್ದಾರೆ ಎಂದು ಹೇಳಿದರು.
ಅಧಿಕಾರ ಇಲ್ಲದಿದ್ದಾಗ ರೈತರ ಪರವಾಗಿ ಬರಗಾಲದ ಸಲುವಾಗಿ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ತಾವು ಯಾವುದಕ್ಕೆ ಹೋರಾಟ ಮಾಡಿದ್ದರೋ, ಅದನ್ನು ಈಡೇರಿಸುವ ಕೆಲಸ ಮಾಡಿದ್ದಾರೆ ಎಂದು ಹೆಳಿದರು.

‘ಬಿಸಿಲ ಬೇಗೆ’ಯಿಂದ ಬಸವಳಿದ ಜನತೆಗೆ ‘ಕೂಲ್’ ಆಗೋ ಸುದ್ದಿ: ರಾಜ್ಯದಲ್ಲಿ ಮುಂದಿನ ‘5 ದಿನ ಭಾರೀ ಮಳೆ’ | Rain in Karnataka

‘CTET 2024 ನೋಂದಣಿ’ಗೆ ಕೊನೆ ದಿನಾಂಕ ವಿಸ್ತರಣೆ, ಕನ್ನಡ ಸೇರಿ 20 ಭಾಷೆಗಳಲ್ಲಿ ಪರೀಕ್ಷೆ, ಶೀಘ್ರ ಅರ್ಜಿ ಸಲ್ಲಿಸಿ

ಮೋದಿ ಬಂದ ಮೇಲೆ ಕೆಂದ್ರದಲ್ಲಿ ಸಮ್ಮಿಶ್ರ ಸರ್ಕಾರದ ಕಾಲ ಮುಗಿದಿದೆ: ಬಸವರಾಜ ಬೊಮ್ಮಾಯಿ Coalition government at Centre is over after Modi came to power: Basavaraj Bommai
Share. Facebook Twitter LinkedIn WhatsApp Email

Related Posts

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

01/07/2025 10:27 AM1 Min Read

BIG NEWS : ಬೆಂಗಳೂರಲ್ಲಿ ನೀರಜ್ ಚೋಪ್ರಾ ಜೊತೆ ಫೋಟೋ ತೆಗೆಸಿಕೊಂಡ ವಿದ್ಯಾರ್ಥಿ ನಾಪತ್ತೆ : ದೂರು ದಾಖಲು!

01/07/2025 10:18 AM1 Min Read

SHOCKING : ಚಿಕ್ಕಮಗಳೂರಲ್ಲಿ ಮಾತ್ರೆ ಸೇವಿಸುವಾಗಲೇ ‘ಹೃದಯಾಘಾತಕ್ಕೆ’ ವ್ಯಕ್ತಿ ಬಲಿ : 2 ತಿಂಗಳಲ್ಲಿ ಒಟ್ಟು 13 ಜನರ ಸಾವು!

01/07/2025 10:13 AM1 Min Read
Recent News

BIG NEWS : ಇಂದಿಗೆ 10 ವರ್ಷ ಪೂರೈಸಿದ `ಡಿಜಿಟಲ್ ಇಂಡಿಯಾ’ : ಪ್ರಧಾನಿ ಮೋದಿ ಆಸಕ್ತಿದಾಯಕ ಟ್ವೀಟ್ | Digital India

01/07/2025 10:27 AM

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

01/07/2025 10:27 AM

BREAKING : ತಮಿಳುನಾಡಿನಲ್ಲಿ ಘೋರ ದುರಂತ : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಐವರು ಕಾರ್ಮಿಕರು ಸಜೀವ ದಹನ.!

01/07/2025 10:19 AM

BIG NEWS : ಬೆಂಗಳೂರಲ್ಲಿ ನೀರಜ್ ಚೋಪ್ರಾ ಜೊತೆ ಫೋಟೋ ತೆಗೆಸಿಕೊಂಡ ವಿದ್ಯಾರ್ಥಿ ನಾಪತ್ತೆ : ದೂರು ದಾಖಲು!

01/07/2025 10:18 AM
State News
KARNATAKA

BREAKING : ರಾಜಕಾರಣಿಗಳೊಂದಿಗೆ ಮಲಗುವಂತೆ ಪತ್ನಿಗೆ ಕಿರುಕುಳ : ಪತಿ, ಅತ್ತೆ, ಮಾವನ ವಿರುದ್ಧ ‘FIR’ ದಾಖಲು

By kannadanewsnow0501/07/2025 10:27 AM KARNATAKA 1 Min Read

ಬೆಂಗಳೂರು : ಬೆಂಗಳೂರಿನಲ್ಲಿ ಸೈಕೋ ಪತಿಯ ವಿರುದ್ಧ ಪತ್ನಿ ಠಾಣೆಯ ಮೆಟ್ಟಿಲು ಏರಿದ್ದು, ಪತಿಯ ವರ್ತನೆಗೆ ಬೇಸತ್ತು ಇದೀಗ ಠಾಣೆಗೆ…

BIG NEWS : ಬೆಂಗಳೂರಲ್ಲಿ ನೀರಜ್ ಚೋಪ್ರಾ ಜೊತೆ ಫೋಟೋ ತೆಗೆಸಿಕೊಂಡ ವಿದ್ಯಾರ್ಥಿ ನಾಪತ್ತೆ : ದೂರು ದಾಖಲು!

01/07/2025 10:18 AM

SHOCKING : ಚಿಕ್ಕಮಗಳೂರಲ್ಲಿ ಮಾತ್ರೆ ಸೇವಿಸುವಾಗಲೇ ‘ಹೃದಯಾಘಾತಕ್ಕೆ’ ವ್ಯಕ್ತಿ ಬಲಿ : 2 ತಿಂಗಳಲ್ಲಿ ಒಟ್ಟು 13 ಜನರ ಸಾವು!

01/07/2025 10:13 AM

BREAKING : ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ಸರ್ಕಾರದಿಂದ ಮಹತ್ವದ ನಿರ್ಧಾರ : ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ.!

01/07/2025 10:10 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.