ಶಿವಮೊಗ್ಗ : ಲೋಕಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯ ವೆದ್ದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಇದೀಗ ಮತ್ತೆ ಬಿಎಸ್ ವೈ ಹಾಗೂ ಅವರ ಪುತ್ರರವರು ಕಿಡಿ ಕಾರಿದ್ದಾರೆ.
ದೆಹಲಿ : ‘ಮೆಟ್ರೋ’ದಲ್ಲಿ ಯುವತಿಯರ ಅಸಭ್ಯ ವರ್ತನೆ : ಪರಸ್ಪರ ಬಣ್ಣ ಎರಚಿ ‘ಹೋಳಿ’ ಆಚರಣೆ
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದು ನನ್ನ ಹೋರಾಟ ಬಿಜೆಪಿ ವಿರುದ್ಧವಲ್ಲ ಕುಟುಂಬ ರಾಜಕಾರಣದ ವಿರುದ್ಧ. ಶಿವಮೊಗ್ಗ ಕ್ಷೇತ್ರದಲ್ಲಿ ನನಗೆ ಪಕ್ಷಾತೀತವಾಗಿ ಬೆಂಬಲವನ್ನು ನೀಡುತ್ತಿದ್ದಾರೆ.ನಾನು ಬಿಜೆಪಿಯನ್ನು ಬಿಟ್ಟಿಲ್ಲ ಇನ್ನು ಬಿಜೆಪಿಯಲ್ಲಿ ಇದೀನಿ ಎಂದು ತಿಳಿಸಿದರು.
ಕೇವಲ ಎರಡು ಎಸೆತಗಳ ನಂತ್ರ ‘RR vs LSG’ ಪಂದ್ಯ ಕ್ಷಣಕಾಲ ನಿಲುಗಡೆ: ಕಾರಣ ಏನು ಗೊತ್ತಾ?
ಕಾಂಗ್ರೆಸ್ ನಲ್ಲಿ ಇದ್ದವರ ಮನೆಗೆ ಹೋಗಿ ಮತ್ತೆ ಬಿಜೆಪಿಗೆ ಕರೆತರುತ್ತಾರೆ. ಮಾಜಿ ಸಿಎಂ ಶೆಟ್ಟರನ್ನು ಕರೆದುಕೊಂಡು ಬಂದು ಟಿಕೆಟ್ ನೀಡುತ್ತಾರೆ.ಕೇಂದ್ರದ ನಾಯಕರ ಮೇಲೆ ಪ್ರಭಾವ ಬೀರಿ ಬಿಎಸ್ ಯಡಿಯೂರಪ್ಪ ಟಿಕೆಟ್ ಹಂಚಿದ್ದಾರೆ.ಇದರ ಪರಿಣಾಮ ಏನೆಂದು ಲೋಕಸಭಾ ಚುನಾವಣೆ ಬಳಿಕ ಗೊತ್ತಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಐಟಿ, ಇಡಿ, ಸಿಬಿಐ ದಾಳಿಗೆ ಹೆದರಿ ಬಿಜೆಪಿ ಸೇರ್ತಿದ್ದಾರೆ : ‘NCP’ ಸಂಸದೆ ಸುಪ್ರಿಯಾ ಸುಳೆ ವಾಗ್ದಾಳಿ
ಲೋಕಸಭಾ ಚುನಾವಣೆ ಬಳಿಕ ಬಿ ವೈ ವಿಜಯೇಂದ್ರ ರಾಜೀನಾಮೆ ನೀಡುತ್ತಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ರಾಘವೇಂದ್ರ ಸೋಲು ಅನುಭವಿಸಿ ಮನೆಗೆ ಹೋಗುತ್ತಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಂದ್ರ ರಾಜೀನಾಮೆ ನೀಡುತ್ತಾರೆ. ರಾಷ್ಟ್ರವಾದಿ ಮುಸಲ್ಮಾನರು ಕೂಡ ನನಗೆ ಬೆಂಬಲ ನೀಡುತ್ತಾರೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದರು.