ಬೆಂಗಳೂರು : ಮೇಕೆದಾಟು ಯೋಜನೆ ಸಂಬಂಧ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಅವರು ವಿವರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.ಚುನಾವಣೆ ಮುಗಿದ ಮೇಲೆ ಮೇಕೆದಾಟು ಕಟ್ಟಲು ಬದ್ಧ ಎಂದು ನಾವು ಪ್ರಣಾಳಿಕೆಯಲ್ಲಿ ಹಾಕುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ತಿಳಿಸಿದರು.
BREAKING: ‘ನೀತಿ ಸಂಹಿತೆ ಉಲ್ಲಂಘನೆ’ ಆರೋಪ: ‘ಸಂಸದ ಬಿ.ವೈ ರಾಘವೇಂದ್ರ’ ವಿರುದ್ಧ ‘FIR’ ದಾಖಲು
ಜೆ.ಪಿ ಭವನದಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ರಾಜಕೀಯ ದೃಷ್ಟಿಕೋನದಿಂದ ನೋಡಬಾರದು. ಮಾನವೀಯತೆಯ ದೃಷ್ಟಿಕೋನದಿಂದ ನೋಡಬೇಕು. ಜನರ ಸಮಸ್ಯೆಯನ್ನು ಅರ್ಥಮಾಡಿಕೊಳ್ಳಬೇಕು. ಕುಡಿಯುವ ನೀರಿಗಾಗಿ ಈ ಯೋಜನೆ ಅವಶ್ಯಕತೆ ಇದೆ. ಜನ 5 ತಿಂಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇದು ಕಾಂಗ್ರೆಸ್, ಬಿಜೆಪಿ, ಡಿಎಂಕೆ, ಅಣ್ಣಾ ಡಿಎಂಕೆ ಪ್ರಶ್ನೆ ಅಲ್ಲ, ಇದು ಜನರ ಸಮಸ್ಯೆಯ ಪ್ರಶ್ನೆ. ಕುಡಿಯುವ ನೀರಿನ ಸಮಸ್ಯೆ, ಜನ ಕುಡಿಯುವ ನೀರಿಗೆ ತೊಂದರೆಪಡ್ತಿದ್ದಾರೆ ಎಂದರು.
ಈಶ್ವರಪ್ಪನವರ ಡಬ್ಬ ಸೌಂಡ್ ಮಾಡ್ತದೆ, ಅವರು ಕ್ಯಾಂಡಿಡೇಟ್ ಆಗಲ್ಲ : ಮಧು ಬಂಗಾರಪ್ಪ ತಿರುಗೇಟು
1964ರಲ್ಲಿ ವಿಧಾನಸಭೆಯಲ್ಲಿ ಖಾಸಗಿ ನಿರ್ಣಯ ಮಂಡಿಸಿದ್ದೆ. ನಮ್ಮ ರಾಜ್ಯದ ಸಂಪನ್ಮೂಲಗಳಿಂದ ಹೇಮಾವತಿ, ಕಬಿನಿ ಜಲಾಶಯ ಮಾಡಲು ನಿರ್ಣಯಿಸಿದ್ದೆ. ಅಂದಿನ ಸಿಎಂ ನಿಜಲಿಂಗಪ್ಪನವರು, ಒಳ್ಳೆಯ ನಿರ್ಣಯ ಎಂದಿದ್ದರು. ಆದರೆ ಷರತ್ತು ಹಾಕಿರುವ ಕಾರಣ ಆಗಲ್ಲ ಎಂದರು. ನಿರ್ಣಯ ವಾಪಸ್ ಪಡೆಯಲು ಮನವಿ ಮಾಡಿದ್ರು. ಎಲ್ಲರ ಮನವಿಗೆ ಮಣಿದು ವಾಪಸ್ ತಗೊಂಡೆ ಎಂದು ದೇವೇಗೌಡರು ವಿವರಿಸಿದರು.
ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಈವರೆಗೆ 15.78 ಕೋಟಿ ನಗದು, 23.37 ಲಕ್ಷ ಮೌಲ್ಯದ ಮದ್ಯ ವಶ
1966ರಲ್ಲಿ ಮತ್ತೆ ನಿರ್ಣಯ ಮಂಡಿಸಿದೆ. ಕೆಲಸ ಆರಂಭಿಸಿದ್ರು, ಸೂಕ್ತ ಹಣ ಒದಗಿಸಿರಲಿಲ್ಲ. ಮುಂದೆ ನಾನೇ ಅಧಿಕಾರಕ್ಕೆ ಬಂದೆ. ಪ್ರಧಾನಿಗೆ ವಿವರವಾಗಿ ಪತ್ರ ಬರೆದಿದ್ದೇನೆ. ಮೇಕೆದಾಟು ಯೋಜನೆ ಮಾಡೇ ಮಾಡುತ್ತೇವೆ. ಜೆಡಿಎಸ್ ಪ್ರಣಾಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸುತ್ತೇವೆ. ಎಲ್ಲರೂ ಸೇರಿ ಐಕ್ಯತೆಯಿಂದ ಈ ಯೋಜನೆ ಮಾಡೋಣ ಎಂದು ರಾಜ್ಯದ ಮೂರು ಪಕ್ಷಗಳು ಪ್ರಣಾಳಿಕೆಯಲ್ಲಿ ಹಾಕಬೇಕು. ಎಲ್ಲರೂ ಒಟ್ಟಾಗಿ ಈ ಯೋಜನೆ ಮಾಡಬೇಕು. ಬಿಜೆಪಿಯವರು ಅವರ ಪ್ರಣಾಳಿಕೆಯಲ್ಲಿ ಹಾಕಲಿ ಎಂದು ಹೆಚ್ಡಿಡಿ ಒತ್ತಾಯಿಸಿದರು.