Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ: HDK ವ್ಯಂಗ್ಯ

18/05/2025 2:42 PM

BREAKING : ರಾತ್ರೋ ರಾತ್ರಿ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಂಪತಿಗಳಿಂದ ದಾಳಿ : 6 ಜನ ಅರೆಸ್ಟ್!

18/05/2025 2:26 PM

ಎಷ್ಟು ಸಲ ಮದ್ಯದ ದರ ಹೆಚ್ಚಳ ಮಾಡ್ತೀರಿ.? ಎಣ್ಣೆ ಪ್ರಿಯರು ಪ್ರತಿಭಟನೆ ಮಾಡಲ್ಲ ಅಂತನಾ.?: ಆರ್ ಅಶೋಕ್ ಆಕ್ರೋಶ

18/05/2025 2:17 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಸ್ಮಾನರ ವಿರೋಧ ಏಕೆ.? ಇಲ್ಲಿದೆ ಮಾಹಿತಿ
KARNATAKA

ಪೌರತ್ವ ತಿದ್ದುಪಡಿ ಕಾಯ್ದೆಗೆ ಮುಸ್ಮಾನರ ವಿರೋಧ ಏಕೆ.? ಇಲ್ಲಿದೆ ಮಾಹಿತಿ

By kannadanewsnow0513/03/2024 7:40 PM

ಕೆಎನ್ಎನ್ ಡಿಜಿಟಲ್ ಡೆಸ್ಕ್ : Citizenship Amendment Act ( ಪೌರತ್ವ ತಿದ್ದುಪಡಿ ಕಾಯ್ದೆ ) ಭಾರತದ ನೆರೆಯ ದೇಶಗಳಾದ ಆಫ್ಘಾನಿಸ್ತಾನ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳಿಂದ 2014 ರ ಡಿಸೆಂಬರ್ 31ಕ್ಕೆ ಮುನ್ನ ಭಾರತಕ್ಕೆ ಆಗಮಿಸಿದ ಆರು ಅಲ್ಪಸಂಖ್ಯಾತ ಸಮುದಾಯಗಳ ಜನರಿಗೆ ಭಾರತೀಯ ಪೌರತ್ವ ಹೊಂದುವ ಅವಕಾಶ ಕೊಡುತ್ತದೆ.

ಈ ಮೂರೂ ಮುಸಲ್ಮಾನ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಕ್ರೈಸ್ತ, ಸಿಖ್, ಜೈನ, ಬೌದ್ಧ ಮತ್ತು ಪಾರ್ಸಿ ಸಮುದಾಯಗಳ ಜನರಿಗೆ ಪೌರತ್ವ ದೊರಕಿಸಿ ಕೊಡುವ ಕಾಯ್ದೆ ಇದಾಗಿದೆ.ಸಾಮಾನ್ಯ ಕಾನೂನು ಪ್ರಕಾರ ಯಾವುದೇ ವ್ಯಕ್ತಿ ಭಾರತೀಯ ಪೌರತ್ವ ಹೊಂದಬೇಕಾದರೆ ಕನಿಷ್ಠ 11 ವರ್ಷಗಳು ಭಾರತದಲ್ಲಿ ವಾಸವಾಗಿರಬೇಕು.ಆದರೆ, ಈ ಕಾಯ್ದೆಯಲ್ಲಿ ನೆರೆ ದೇಶಗಳ ಈ ಅಲ್ಪಸಂಖ್ಯಾತ ಸಮುದಾಯಗಳಿಗೆ ಈ ವಿಚಾರದಲ್ಲಿ ವಿನಾಯಿತಿ ಕೊಡಲಾಗಿದೆ.

ಸಿಎಎಗೆ ಮುಸಲ್ಮಾನರ ವಿರೋಧ ಏಕೆ?

ಸಿಎಎ ಎಂಬ ಈ ಕಾಯ್ಧೆಯಲ್ಲಿ ಧಾರ್ಮಿಕವಾಗಿ ತಾರತಮ್ಯ ಮಾಡಲಾಗಿದೆ. ಅಲ್ಪಸಂಖ್ಯಾತರ ಪಟ್ಟಿಯಲ್ಲಿ ಮುಸಲ್ಮಾನರು ಇಲ್ಲ ಎಂಬುದು ಮುಸಲ್ಮಾನ ನಾಯಕರ ಅಭಿಪ್ರಾಯ.ಭಾರತದಲ್ಲಿ ಎರಡನೇ ಅತಿ ದೊಡ್ಡ ಸಂಖ್ಯೆಯಲ್ಲಿ ಇರುವ ಮುಸಲ್ಮಾನರು ಅಲ್ಪಸಂಖ್ಯಾತರು. ಆದರೆ, ಮುಸಲ್ಮಾನ ರಾಷ್ಟ್ರಗಳಲ್ಲಿ ಅತೀ ದೊಡ್ಡ ಹಾಗೂ ಮೊದಲ ಜನಸಂಖ್ಯೆ ಎನಿಸಿರುವ ಮುಸಲ್ಮಾನರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಲು ಹೇಗೆ ಸಾಧ್ಯ ? ಎಂಬುದು ಸರ್ಕಾರದ ಸವಾಲು.

ಶ್ರೀಲಂಕಾ ಮೊದಲಾದ ನೆರೆಯ ದೇಶಗಳಲ್ಲಿಯೂ ಮುಸಲ್ಮಾನರು ಅಲ್ಪಸಂಖ್ಯಾತರಾಗಿದ್ದಾರೆ. ಅವರಿಗೇಕೆ ಪೌರತ್ವ ಕೊಡುತ್ತಿಲ್ಲ? ಎಂಬುದು ಕೆಲವು ರಾಜಕೀಯ ಮುಖಂಡರ ಪ್ರಶ್ನೆ.ಈ ಕಾಯ್ದೆಯು ಆಫ್ಘಾನಿಸ್ತಾನ, ಬಾಂಗ್ಲಾ ದೇಶ ಹಾಗೂ ಪಾಕಿಸ್ತಾನದ ಅಲ್ಪಸಂಖ್ಯಾತ ಸಮುದಾಯಗಳಿಗೆ ಮಾತ್ರ ಅನ್ವಯಿಸುತ್ತದೆ.

ಆದ್ದರಿಂದ, ಮತ ಬ್ಯಾಂಕ್ ರಾಜಕೀಯ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನು ಓಲೈಸುವ ಮತ್ತು ಪ್ರಚೋದಿಸುವ ಪಟ್ಟಭದ್ರ ಹಿತಾಸಕ್ತಿಗಳ ಇಂತಹ ಪ್ರಶ್ನೆಗಳೇ ಅಪ್ರಸ್ತುತ*ಎಂಬುದು ಸರ್ಕಾರದ ತರ್ಕ.ಮುಸಲ್ಮಾನರನ್ನು ಉದ್ದೇಶಪೂರ್ವಕವಾಗಿಯೇ ಮೂಲೆ ಗುಂಪು ಮಾಡಲಾಗುತ್ತಿದೆ ಎಂಬ ಕೆಲವು ಧಾರ್ಮಿಕ ಮುಖಂಡರ ಆತಂಕದಲ್ಲಿ ಹುರುಳೂ ಇಲ್ಲ. ತಿರುಳೂ ಇಲ್ಲ ಎಂಬುದು ಸರ್ಕಾರದ ಸ್ಪಷ್ಟ ನಿಲುವು.

ಗಮನಿಸಬೇಕಾದ ಸಂಗತಿ !

1) ಪೌರತ್ವ ಅವಕಾಶ ಎಲ್ಲರಿಗೂ ಸಮಾನವಾಗಿರಬೇಕು.

2) ಕೆಲವು ನಿರ್ದಿಷ್ಟ ಸಮುದಾಯಗಳಿಗೆ ಮನ್ನಣೆ ಹಾಗೂ ಮಾನ್ಯತೆ ಕೊಡುವುದು ತಪ್ಪು ಎಂಬುದು ಪ್ರತಿ ಪಕ್ಷಗಳ ಕೆಲವು ಮುಖಂಡರ ಆಕ್ಷೇಪ.

3) ನೆರೆ ರಾಷ್ಟ್ರಗಳಲ್ಲಿನ ಭಾರತೀಯ ಸಂಸ್ಕೃತಿಯ ಅನುಯಾಯಿಗಳಿಗೆ ನೆರವು ನೀಡಿ ಆಶ್ರಯ ಕಲ್ಪಿಸುವ ತನ್ನ ಕ್ರಮ ಸರಿ ಎಂಬುದು ಸರ್ಕಾರದ ಸಮರ್ಥನೆ.

4) ಈ ಕಾಯ್ದೆಯಿಂದ ಭಾರತೀಯ ಮುಸಲ್ಮಾನರಿಗೇ ಯಾವುದೇ ಅಪಾಯವೂ ಇಲ್ಲ. ಅನಾನುಕೂಲವೂ ಆಗುವುದಿಲ್ಲ ಎಂಬುದು ಸರ್ಕಾರದ ಅಭಯ.‌

ಎನ್ಆರ್ ಸಿ ಎಂದರೇನು ?

National Register of Citizens ಎಂಬುದು ದೇಶದ ನಾಗರಿಕರ ನೊಂದಣಿ ಮಾಡಿಕೊಳ್ಳುವ ಯೋಜನೆಯಾಗಿದೆ. ದೇಶದ ಎಲ್ಲಾ ಪ್ರಜೆಗಳ ಅಧಿಕೃತ ಪಟ್ಟಿ ಎನಿಸುವ ಎನ್ ಆರ್ ಸಿ ಪಟ್ಟಿಯು ಅಕ್ರಮವಾಗಿ ವಲಸೆ ಬಂದವರನ್ನು ಗುರುತಿಸಲು ನೆರವಾಗುತ್ತದೆ. ಅಲ್ಲದೆ, ಅಂತಹ ನುಸುಳುಕೋರ ವಲಸಿಗರನ್ನು ಹೊರಹಾಕಲು ಅನುಕೂಲವಾಗುತ್ತದೆ. ಬಾಂಗ್ಲಾದೇಶ ಹಾಗೂ ಮಯನ್ಮಾರ್ ನಿಂದ ಅಕ್ರಮವಾಗಿ ವಲಸೆ ಬಂದ ಜನರನ್ನು ಗುರುತಿಸಿ, ಹೊರಹಾಕಲು ಹಾಗೂ ದೇಶಕ್ಕೆ ಪ್ರವೇಶಿಸುವ ನುಸುಳು ಕೋರರನ್ನು ತಡೆಗಟ್ಟಲು ಎನ್ ಆರ್ ಸಿ ಸಹಾಯವಾಗಲಿದೆ

Share. Facebook Twitter LinkedIn WhatsApp Email

Related Posts

ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ: HDK ವ್ಯಂಗ್ಯ

18/05/2025 2:42 PM1 Min Read

BREAKING : ರಾತ್ರೋ ರಾತ್ರಿ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಂಪತಿಗಳಿಂದ ದಾಳಿ : 6 ಜನ ಅರೆಸ್ಟ್!

18/05/2025 2:26 PM1 Min Read

ಎಷ್ಟು ಸಲ ಮದ್ಯದ ದರ ಹೆಚ್ಚಳ ಮಾಡ್ತೀರಿ.? ಎಣ್ಣೆ ಪ್ರಿಯರು ಪ್ರತಿಭಟನೆ ಮಾಡಲ್ಲ ಅಂತನಾ.?: ಆರ್ ಅಶೋಕ್ ಆಕ್ರೋಶ

18/05/2025 2:17 PM2 Mins Read
Recent News

ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ: HDK ವ್ಯಂಗ್ಯ

18/05/2025 2:42 PM

BREAKING : ರಾತ್ರೋ ರಾತ್ರಿ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಂಪತಿಗಳಿಂದ ದಾಳಿ : 6 ಜನ ಅರೆಸ್ಟ್!

18/05/2025 2:26 PM

ಎಷ್ಟು ಸಲ ಮದ್ಯದ ದರ ಹೆಚ್ಚಳ ಮಾಡ್ತೀರಿ.? ಎಣ್ಣೆ ಪ್ರಿಯರು ಪ್ರತಿಭಟನೆ ಮಾಡಲ್ಲ ಅಂತನಾ.?: ಆರ್ ಅಶೋಕ್ ಆಕ್ರೋಶ

18/05/2025 2:17 PM

BIG NEWS : ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್’ಗಳ ಬೆಂಗಳೂರು : ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಕಿಡಿ

18/05/2025 2:09 PM
State News
KARNATAKA

ಗ್ರೇಟರ್ ಬೆಂಗಳೂರು ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ: HDK ವ್ಯಂಗ್ಯ

By kannadanewsnow0918/05/2025 2:42 PM KARNATAKA 1 Min Read

ಬೆಂಗಳೂರು: ಗ್ರೇಟರ್ ಬೆಂಗಳೂರು. ಹೆಚ್ಚು ಮಳೆಯಾದರೆ ಮುಳುಗುತ್ತದೆ! ಕಡಿಮೆ ಸುರಿದರೆ ತೇಲುತ್ತದೆ ಎಂಬುದಾಗಿ ಕೇಂದ್ರ ಸಚಿವ ಹೆೆಚ್ ಡಿ ಕುಮಾರಸ್ವಾಮಿ…

BREAKING : ರಾತ್ರೋ ರಾತ್ರಿ ಮರಳು ಅಡ್ಡೆ ಮೇಲೆ ತಹಶೀಲ್ದಾರ್ ದಂಪತಿಗಳಿಂದ ದಾಳಿ : 6 ಜನ ಅರೆಸ್ಟ್!

18/05/2025 2:26 PM

ಎಷ್ಟು ಸಲ ಮದ್ಯದ ದರ ಹೆಚ್ಚಳ ಮಾಡ್ತೀರಿ.? ಎಣ್ಣೆ ಪ್ರಿಯರು ಪ್ರತಿಭಟನೆ ಮಾಡಲ್ಲ ಅಂತನಾ.?: ಆರ್ ಅಶೋಕ್ ಆಕ್ರೋಶ

18/05/2025 2:17 PM

BIG NEWS : ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್’ಗಳ ಬೆಂಗಳೂರು : ಸರ್ಕಾರದ ವಿರುದ್ಧ HD ಕುಮಾರಸ್ವಾಮಿ ಕಿಡಿ

18/05/2025 2:09 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.