ಮಡಿಕೇರಿ : ಅಪಘಾತದಲ್ಲಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದ ವ್ಯಕ್ತಿ ಒಬ್ಬ ಪಶ್ಚಾತಾಪ ಪಟ್ಟುಕೊಂಡು ನೇಣಿಗೆ ಶರಣಾಗಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೇರವನಾಡಿನಲ್ಲಿ ನಡೆದಿದೆ.
ಅಲ್ಲದೆ ಕಾಕತಾಳಿಯವೆಂಬಂತೆ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕ ಧನಲ್ ಕೂಡ ಇದೀಗಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಅಪಘಾತ ಮಾಡಿದ್ದ ವ್ಯಕ್ತಿ ಯುವಕನ ಜೀವನ ಹಾಳು ಮಾಡಿದೆ ಎಂದು ಮನನೊಂದು ತಮ್ಮಯ್ಯ (57) ತಾನು ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಫೆಬ್ರವರಿ 9ರಂದು ಮಡಿಕೇರಿಯ ಬಳಿಯ ಚೈನ್ ಗೇಟ್ ಬಳಿ ಅಪಘಾತ ನಡೆದಿತ್ತು.ಬೈಕಿನಲ್ಲಿ ಆಗಮಿಸಿದ ಧನಲ್ ಗೆ ಮತ್ತೊಂದು ಬೈಕನಲ್ಲಿ ಬರುತ್ತಿದ್ದ ತಮ್ಮಯ್ಯ ಡಿಕ್ಕಿ ಹೊಡೆದಿದ್ದ.ಈ ವೇಳೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿಯಾಗಿ ಧನಲ್ ಗಾಯಗೊಂಡಿದ್ದ ಸವಾರ ಧನಾಲ್ಗೆ ಗಂಭೀರ ಗಾಯ ಹಿನ್ನೆಲೆ ತಮ್ಮಯ್ಯ ಮನನೊಂದಿದ್ದ ಎಂದು ಹೇಳಲಾಗುತ್ತಿದೆ.
ಯುವಕನ ಜೀವನ ನಾನು ಹಾಳು ಮಾಡಿದೆ ಅಂತ ತಮ್ಮಯ್ಯಗೆ ಪಶ್ಚಾತಾಪ ಮೂಡಿದೆ ಮನನೊಂದು ಬೆಳಗಿನ ಜಾವ ತಮ್ಮಯ್ಯ ನೇಣಿಗೆ ಶರಣಾಗಿದ್ದಾನೆ. ಇದೆ ವೇಳೆ ಕಾಕತಾಳಿಯವಾಗಿ ಧನಲ್ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಸೋಮವಾರಪೇಟೆ ತಾಲೂಕಿನ ಕಾಂಡನ ಕೊಲ್ಲಿ ನಿವಾಸಿ ಧನಲ್ ಎಂದು ಹೇಳಲಾಗುತ್ತಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ. ಮಡಿಕೇರಿ ನಗರ ಸಂಚಾರಿ ಠಾಣೆಯಲ್ಲಿ ಅಪಘಾತ ಸಂಬಂಧ ಪ್ರಕರಣ ದಾಖಲಾಗಿದೆ.