ಮಂಡ್ಯ : ಮಂಡ್ಯ ಜಿಲ್ಲೆಯ ಕೆರೆಗೂಡು ಗ್ರಾಮದಲ್ಲಿ ಇತ್ತೀಚಿಗೆ ಹನುಮ ಧ್ವಜ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ, ಗ್ರಾಮದಲ್ಲಿ ಇತ್ತೀಚೆಗೆ ಬಿಜೆಪಿ ನಾಯಕರು ಹಿಂದೂ ಸಂಘಟನೆಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ಹಾಗೂ ಪಾದಯಾತ್ರೆ ಮಾಡುವ ಮೂಲಕ ತೀವ್ರವಾದ ವಿರೋಧ ವ್ಯಕ್ತಪಡಿಸಿದ್ದರು.
ಅದಕ್ಕೆ ಜಿಲ್ಲೆಯ ಸಮಾನ ಮಸ್ಕರ ವೇದಿಕೆಯು ಫೆಬ್ರವರಿ 7 ಅಂದರೆ ನಾಳೆ ಮಂಡ್ಯ ಜಿಲ್ಲೆ ಬಂದ್ಗೆ ಕರೆ ನೀಡಿತ್ತು. ಆದರೆ ನಾಳೆ ನೀಡಿರುವ ಬಂದ್ ಗೆ ಇದೀಗ ಸಮಾನ ನಮಸ್ಕಾರ ವೇದಿಕೆಯು ವಾಪಸ್ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.
ಮಂಡ್ಯ ಡಿಸಿ ಡಾ. ಕುಮಾರ್ ಎಸ್ ಪಿ ಎನ್ ಯತೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಂದ್ ನಿಂದ ಸಾರ್ವಜನಿಕರು ವಿದ್ಯಾರ್ಥಿಗಳಿಗೆ ಸಮಸ್ಯೆ ಆಗಲಿದೆ. ಅಂಗಡಿ ಮುಂಗಟ್ಟುಗಳ ವ್ಯಾಪಾರಕ್ಕೂ ತೊಂದರೆ ಆಗಲಿದೆ.ಬಂದ್ ಹಿಂಪಡೆಯುವಂತೆ ಸಮಾನ ಮನಸ್ಕರ ವೇದಿಕೆಗೆ ಜಿಲ್ಲಾಡಳಿತ ಮನವಿ ಮಾಡಿತು. ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿ ಸಮಾನ ಮನಸ್ಕರ ವೇದಿಕೆಯು ಬಂದ್ ಅನ್ನು ಹಿಂಪಡೆದಿದೆ.
ನಾಳೆ ನಡೆಯಬೇಕಿದ್ದ ಮಂಡ್ಯ ಬಂದನ್ನು ತಾತ್ಕಾಲಿಕವಾಗಿ ಸಮಾನ ಮನಸ್ಕರ ವೇದಿಕೆ ಹಿಂಪಡೆದಿದೆ. ಕೆರೆಗೋಡು ಹನುಮಧ್ವಜ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಜರಂಗದಳ ಬಂದ್ ಗೆ ಕರೆ ನೀಡಿದೆ.ಇದೇ ಫೆಬ್ರವರಿ 9ರಂದು ಮಂಡ್ಯ ಬಣ್ಣಿಗೆ ಬಜರಂಗದಳ ಕಾರ್ಯಕರ್ತರು ಕರೆ ನೀಡಿದ್ದಾರೆ. ಬಜರಂಗದಳ ಬಂದ ವಿರೋಧಿಸಿ ನಾಳೆ ಬಂದ್ ಗೆ ಸಮಾನ ಮನಸ್ಕರ ವೇದಿಕೆ ಬಂದ್ ಕರೆ ನೀಡಿತ್ತು.
ಜಿಲ್ಲಾಡಳಿತ ಮನವಿ ಮೇರೆಗೆ ಸಮಾನ ಮನಸ್ಕರ ವೇದಿಕೆ ಬಂದ್ ಹಿಂಪಡೆದಿದೆ ಎಂದು ತಿಳಿದು ಬಂದಿದೆ. ಫೆ. 9 ಬಜರಂಗದಳ ಬಂದ್ ಕೂಡ ಹಿಂಪಡೆಯುವಂತೆ ಮಂಡ್ಯ ನಗರ ಬಂದ ಅವಕಾಶ ನೀಡಿದಂತೆ ಜಿಲ್ಲಾಡಳಿತಕ್ಕೆ ಸಮಾನ ಮನಸ್ಕರ ವೇದಿಕೆ, ದಲಿತಪರ ಸಂಘಟನೆಗಳು, ಪ್ರಗತಿಪರರು ಸಿಐಟಿಯು ಸೇರಿ ಹಲವು ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.