ಬೆಂಗಳೂರು : ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನುದಾನ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸುತ್ತಿದ್ದು,ಕೇಂದ್ರ ಸರ್ಕಾರ ತೆರಿಗೆ ಹಣ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗಾಗಲೇ ಏಳರಂದು ಅಂದರೆ ನಾಡಿದ್ದು ದೆಹಲಿಯ ಜಂತರ್ ಮಂತರ್ ನಲ್ಲಿ ಕಾಂಗ್ರೆಸ್ ಸರ್ಕಾರ ಕಾಂಗ್ರೆಸ್ ಸರ್ಕಾರ ಮತ್ತು ಪಕ್ಷ ಪ್ರತಿಭಟನೆಯನ್ನು ಕೇಂದ್ರ ಸರ್ಕಾರದ ಗಮನ ಸೆಳೆಯೋಗೊಸ್ಕರ ದೇಶದ ಜನರ ಗಮನ ಸೆಳೆಯಲು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.ಇಲ್ಲಿಯವರೆಗೆ ನಾವು ಯಾವತ್ತಿಗೂ ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿಲ್ಲ ಆದರೆ ಅನಿವಾರ್ಯ ಕಾರಣಗಳಿಂದ ಪ್ರತಿಭಟನೆ ಮಾಡಲೇಬೇಕಾದಂತಹ ಪರಿಸ್ಥಿತಿ ಇವತ್ತು ಒದಗಿ ಬಂದಿದೆ.
ಈ ಪ್ರತಿಭಟನೆಯೂ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿದೆ ಇದು ರಾಜಕೀಯ ಪ್ರತಿಭಟನೆ ಅಲ್ಲ. ನಮಗೆ ಆಗಿರುವಂತಹ ಅನ್ಯಾಯದ ಬಗ್ಗೆ ಇಡೀ ದೇಶದ ಜನರ ಗಮನ ಸೆಳೆಯಲು ಹಣಕಾಸು ಹಂಚಿಕೆಯಲ್ಲಿ ಆಗಿರುವಂತಹ ತಾರತಮ್ಯದಲ್ಲಿ ಕೇಂದ್ರದ ಮಲತಾಯಿ ಧೋರಣೆ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಎಲ್ಲಾ ಕಾರಣ ಗಳಿಗೋಸ್ಕರ ನಾವು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದೇವೆ.ನಾಡಿದ್ದು ಅಂದರೆ ಫೆಬ್ರವರಿ 7ರಂದು ಜಂತರ್ ಮಂತನಲ್ಲಿ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ ಇದರಲ್ಲಿ ಎಲ್ಲಾ ಶಾಸಕರು ಕೆಳಮನೆ ಮತ್ತು ಮೇಲ್ಮನೆ ಸದಸ್ಯರು ಎಲ್ಲರೂ ಕೂಡ ಭಾಗವಹಿಸುತ್ತಿದ್ದಾರೆ. ನಾಳೆ ಸಾಯಂಕಾಲನೆ ನಾವೆಲ್ಲರೂ ದೆಹಲಿಗೆ ತೆರಳುತ್ತಿದ್ದೇವೆ. ನಾಡಿದ್ದು ಬೆಳಿಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಯುತ್ತದೆ ನಾವು ಸ್ವಾತಂತ್ರ್ಯ ಬಂದ ಮೇಲೆ. ನಮ್ಮ ದೇಶದಲ್ಲಿ ಒಕ್ಕೂಟದ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಕೇಂದ್ರ ಮತ್ತು ರಾಜ್ಯ ಹಾಗೂ ಯೂನಿಯನ್ ಟೆರಿಟರೀಸ್ ಇವೆಲ್ಲವೂ ಸೇರಿ ಜನರ ಸೇವೆ ಮಾಡಬೇಕೆಂದು ಒಕ್ಕೂಟ ವ್ಯವಸ್ಥೆಯಲ್ಲಿ ಒಪ್ಪಿಕೊಂಡಿದ್ದೇವೆ.
ದೇಶ ಅಂತ ಅಂದರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೂಡಿರುವಂತದ್ದು ಕೇಂದ್ರಕ್ಕೆ ಬರ್ತಕಂತಹ ತೆರಿಗೆ ರಾಜ್ಯಗಳಿಂದ ತೆರಿಗೆ ಕೇಂದ್ರಾಡಳಿತ ಪ್ರದೇಶಗಳಿಂದ ಬರುವಂತಹ ತೆರಿಗೆ ಕೇಂದ್ರ ಸರ್ಕಾರದ ತೆರಿಗೆ ಹಣ ಎಂದರೆ ರಾಜ್ಯದಲ್ಲಿ ವಸೂಲಿ ಆಗುವಂತಹ ಹಣ ಅದು ಕೇಂದ್ರ ಸರ್ಕಾರಕ್ಕೆ ತೆರಿಗೆ ಹೋಗುತ್ತದೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೂ ಬರುತ್ತದೆ.
ಇನ್ಕಮ್ ಟ್ಯಾಕ್ಸ್ ಕಾರ್ಪೋರೇಟ್ ಟ್ಯಾಕ್ಸು ಜಿಎಸ್ಟಿ ಪೆಟ್ರೋಲ್ ಡೀಸೆಲ್ ಮೇಲೆ ಬರುವಂತಹ ತೆರಿಗೆ ಸಸ್ಸು ಇವುಗಳಿಂದ ಸಂಗ್ರಹವಾಗುತ್ತಿರುವ ಹಣ ಇದು ಹೇಗೆ ಕೇಂದ್ರ ಮತ್ತು ರಾಜ್ಯಗಳಿಗೆ ಹಂಚಿಕೆ ಆಗಬೇಕು ಅಂತ ಹೇಳಿ ಸಂವಿಧಾನದಲ್ಲಿ ಬಹಳ ಸ್ಪಷ್ಟವಾಗಿ ಹಣಕಾಸು ಸಚಿವಾಲಯ ಕೇಂದ್ರಕ್ಕೆ ಎಷ್ಟಿರಬೇಕು ರಾಜಕೀಯ ಎಷ್ಟು ಕೊಡಬೇಕೆನ್ನುವುದು ಅದರಲ್ಲಿದೆ ಎಂದು ಅವರು ತಿಳಿಸಿದರು.