Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಮೌನವಾಗಿಯೇ ನಿಮಗೆ ಹಾನಿ ಮಾಡುತ್ತೆ ‘ಫ್ಯಾಟಿ ಲಿವರ್’ ; ಈ ಲಕ್ಷಣಗಳನ್ನ ನಿರ್ಲಕ್ಷಿಸ್ಬೇಡಿ!

25/08/2025 10:19 PM

ರಾಜ್ಯ ಸರ್ಕಾರದ ಬಳಿ ಗುಂಡಿ ಮುಚ್ಚೋದಕ್ಕೂ ಬಿಡಿಗಾಸಿಲ್ಲ: JDS ಮಾಜಿ MLC ಹೆಚ್.ಎಂ.ರಮೇಶ್ ಗೌಡ

25/08/2025 9:54 PM

ಈವರೆಗೆ ರಾಜ್ಯದಲ್ಲಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ಯಾವುದಕ್ಕೆ ಎಷ್ಟು ಖರ್ಚು ಗೊತ್ತಾ? ಇಲ್ಲಿದೆ ಲೆಕ್ಕ | Congress Guarantee Scheme

25/08/2025 9:50 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗದಗದಲ್ಲಿ ಅವಳಿ ಮಕ್ಕಳು, ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯತನದಿಂದ ದುರಂತ ಸಂಭವ : ಕುಟುಂಬಸ್ಥರ ಆಕ್ರೋಶ
KARNATAKA

ಗದಗದಲ್ಲಿ ಅವಳಿ ಮಕ್ಕಳು, ಬಾಣಂತಿ ಸಾವು : ವೈದ್ಯರ ನಿರ್ಲಕ್ಷ್ಯತನದಿಂದ ದುರಂತ ಸಂಭವ : ಕುಟುಂಬಸ್ಥರ ಆಕ್ರೋಶ

By kannadanewsnow0505/02/2024 8:27 AM

ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬಳು ಇಬ್ಬರು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದಳು. ಆದರೆ ವೈದ್ಯರ ನಿರ್ಲಕ್ಷತನದಿಂದ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಇಬ್ಬರು ಕಂದಮ್ಮಗಳು ಸಾವನಪ್ಪಿದ್ದು, ತಾಯಿ ಕೂಡ ಅಸ್ವಸ್ಥಳಾಗಿದ್ದಾಳೆ.

ತಕ್ಷಣ ಬಾದಾಮಿ ಆಸ್ಪತ್ರೆಗೆ ರವಾನಿಸಲಾಗಿದೆ. ಆದ್ರೆ, ಆ ಬಾಣಂತಿ ಕೂಡ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಬಾಣಂತಿ, ಅವಳಿ ಕಂದಮ್ಮಗಳ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿ ವಿರುಪಾಪುರ ಗ್ರಾಮದ ತುಂಬು ಗರ್ಭಿಣಿಗೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಗಜೇಂದ್ರಗಡ ಪಟ್ಟಣದ ಕಾರೊಡಗಿಮಠ ಖಾಸಗಿ ಆಸ್ಪತ್ರೆಗೆ ಫೆಬ್ರುವರಿ 2 ರಂದು 28 ವರ್ಷದ ತುಂಬು ಗರ್ಭಿಣಿ ನಂದಿನಿ ಹರಿಗೆಗೆ ಎಂದು ದಾಖಲಿಸಲಾಗಿತ್ತು. ಅಂದು ವೈದ್ಯರು ಎರಡು ಬಾರಿ ಸ್ಕ್ಯಾನ್ ಮಾಡಿದ್ದಾರೆ. ಆಗ ಎರಡು ಅವಳಿ ಮಕ್ಕಳು ಚೆನ್ನಾಗಿವೆ ಎಂದು ಹೇಳಿದ್ದಾರೆ.

ಸಿಜೆರಿಯನ್ ಮಾಡಿಯೇ ಹೆರಿಗೆ ಮಾಡಿಬೇಕಾಗುತ್ತೆ ಅಂತ ಕುಟುಂಬಸ್ಥರಿಗೆ ವೈದ್ಯರು ತಿಳಿಸಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಿದ್ದಾರೆ. ಫೆಬ್ರುವರಿ 2ರಂದು ಹೆರಿಗೆಯಾಗಿದ್ದು, ಮುದ್ದಾದ ಒಂದು ಗಂಡು, ಒಂದು ಹೆಣ್ಣು ಕಂದಮ್ಮಗಳಿಗೆ ಜನ್ಮ ನೀಡಿದ್ದಾಳೆ.ಆದ್ರೆ, ಹೆರಿಗೆ ಬಳಿಕ ಎರಡು ಮಕ್ಕಳು ಮೃತಪಟ್ಟಿವೆ. ಬಾಣಂತಿ ನಂದಿನಿ ಕೂಡ ತೀವ್ರ ರಕ್ತ ಸ್ರಾವದಿಂದ ಅಸ್ವಸ್ಥಗೊಂಡ ಕಾರಣ ತಕ್ಷಣ ಅಲರ್ಟ್ ಆದ ವೈದ್ಯರು ಬಾಗಲಕೋಟೆ ಜಿಲ್ಲೆಯ ಬಾದಾಮಿ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಆದ್ರೆ, ಚಿಕಿತ್ಸೆ ಫಲಿಸದೇ ಇಂದು ಬಾಣಂತಿ ನಂದಿನಿ ಮೃತಪಟ್ಟಿದ್ದಾರೆ. ಹೀಗಾಗಿ ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಮತ್ತು ಮಕ್ಕಳ ಸಾವಿಗೆ ಕಾರಣ ಅಂತ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಜೇಂದ್ರಗಡ ಪಟ್ಟಣದ ಖಾಸಗಿ ಆಸ್ಪತ್ರೆ ಎದುರು ಸಂಬಂಧಿಕರು ಪ್ರತಿಭಟನೆ ಮಾಡಿ ಆಕ್ರೊಶ ವ್ಯಕ್ತಪಡಿಸಿದ್ದಾರೆ. ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಕಾರೊಡಗಿಮಠ ಆಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗರ್ಭಿಣಿಗೆ ಸಿಜೆರಿಯನ್ ಮಾಡಿ ಹೆರಿಗೆ ಮಾಡಿದ್ದಾರೆ. ಈ ವೇಳೆ ರಕ್ತದ ವ್ಯವಸ್ಥೆ ಮಾಡದೇ ಹೆರಿಗೆ ಮಾಡಿದ್ದಾರೆ. ಹೀಗಾಗಿ ರಕ್ತ ಕೊರತೆಯಿಂದಲೇ ಬಾಣಂತಿ ಸಾವನ್ನಪ್ಪಿದ್ದಾಳೆ ಎಂಬ ಆರೋಪಗಳು ಕೇಳೀ ಬಂದಿವೆ. ಗಜೇಂದ್ರಗಢ ಪಟ್ಟಣ ಮೃತ ಬಾಣಂತಿ ನಂದಿನಿ ತವರೂರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗಜೇಂದ್ರಗಢ ಪೊಲೀಸ್ರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಆದ್ರೆ, ವೈದ್ಯರು ಮಾತ್ರ ನಮ್ಮದೇನೂ ತಪ್ಪಿಲ್ಲ ಅಂತಿದ್ದಾರೆ. ತನಿಖೆ ಬಳಿಕವಷ್ಟೇ ಬಾಣಂತಿ, ಅವಳಿ ಮಕ್ಕಳ ಸಾವಿನ ಸತ್ಯ ಗೊತ್ತಾಗಲಿದೆ.

Share. Facebook Twitter LinkedIn WhatsApp Email

Related Posts

ರಾಜ್ಯ ಸರ್ಕಾರದ ಬಳಿ ಗುಂಡಿ ಮುಚ್ಚೋದಕ್ಕೂ ಬಿಡಿಗಾಸಿಲ್ಲ: JDS ಮಾಜಿ MLC ಹೆಚ್.ಎಂ.ರಮೇಶ್ ಗೌಡ

25/08/2025 9:54 PM1 Min Read

ಈವರೆಗೆ ರಾಜ್ಯದಲ್ಲಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ಯಾವುದಕ್ಕೆ ಎಷ್ಟು ಖರ್ಚು ಗೊತ್ತಾ? ಇಲ್ಲಿದೆ ಲೆಕ್ಕ | Congress Guarantee Scheme

25/08/2025 9:50 PM2 Mins Read

ಶಿವಮೊಗ್ಗ: ಆ.27ರಂದು ಮಾಂಸ ಮಾರಾಟ ನಿಷೇಧ

25/08/2025 9:40 PM1 Min Read
Recent News

ಮೌನವಾಗಿಯೇ ನಿಮಗೆ ಹಾನಿ ಮಾಡುತ್ತೆ ‘ಫ್ಯಾಟಿ ಲಿವರ್’ ; ಈ ಲಕ್ಷಣಗಳನ್ನ ನಿರ್ಲಕ್ಷಿಸ್ಬೇಡಿ!

25/08/2025 10:19 PM

ರಾಜ್ಯ ಸರ್ಕಾರದ ಬಳಿ ಗುಂಡಿ ಮುಚ್ಚೋದಕ್ಕೂ ಬಿಡಿಗಾಸಿಲ್ಲ: JDS ಮಾಜಿ MLC ಹೆಚ್.ಎಂ.ರಮೇಶ್ ಗೌಡ

25/08/2025 9:54 PM

ಈವರೆಗೆ ರಾಜ್ಯದಲ್ಲಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ಯಾವುದಕ್ಕೆ ಎಷ್ಟು ಖರ್ಚು ಗೊತ್ತಾ? ಇಲ್ಲಿದೆ ಲೆಕ್ಕ | Congress Guarantee Scheme

25/08/2025 9:50 PM

ಶಿವಮೊಗ್ಗ: ಆ.27ರಂದು ಮಾಂಸ ಮಾರಾಟ ನಿಷೇಧ

25/08/2025 9:40 PM
State News
KARNATAKA

ರಾಜ್ಯ ಸರ್ಕಾರದ ಬಳಿ ಗುಂಡಿ ಮುಚ್ಚೋದಕ್ಕೂ ಬಿಡಿಗಾಸಿಲ್ಲ: JDS ಮಾಜಿ MLC ಹೆಚ್.ಎಂ.ರಮೇಶ್ ಗೌಡ

By kannadanewsnow0925/08/2025 9:54 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಗುಂಡಿ ಮುಚ್ಚಲು ಬಿಡಿಗಾಸು ಇಲ್ಲದ ಕಾಂಗ್ರೆಸ್ ಸರ್ಕಾರ, ಸುರಂಗ ಮಾಡುತ್ತೇವೆ ಎಂದು ಜನರಿಗೆ ಮಂಕುಬೂದಿ ಎರಚುತ್ತಿದೆ ಎಂದು…

ಈವರೆಗೆ ರಾಜ್ಯದಲ್ಲಿ ‘ಪಂಚ ಗ್ಯಾರಂಟಿ ಯೋಜನೆ’ಗಳಿಗೆ ಯಾವುದಕ್ಕೆ ಎಷ್ಟು ಖರ್ಚು ಗೊತ್ತಾ? ಇಲ್ಲಿದೆ ಲೆಕ್ಕ | Congress Guarantee Scheme

25/08/2025 9:50 PM

ಶಿವಮೊಗ್ಗ: ಆ.27ರಂದು ಮಾಂಸ ಮಾರಾಟ ನಿಷೇಧ

25/08/2025 9:40 PM

ಉಚಿತ CCTV ಅಳವಡಿಕೆ, ಸರ್ವೀಸಿಂಗ್ ತರಬೇತಿಗೆ ಅರ್ಜಿ ಆಹ್ವಾನ

25/08/2025 9:38 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.