ದಾವಣಗೆರೆ : ವೀರಪ್ಪನ್ ಹೆಸರಲ್ಲಿ ವೀರ ಇದೆ, ಅವನಿಗೆ ವೀರ ಅಂತಾ ಹೇಳೋಕೆ ಆಗುತ್ತಾ, ಹಾಗೆ ಸಿಎಂ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ ಎಂಬ ಪದ ಇದೆ, ಹಾಗಂತ ರಾಮ ಅನ್ನೋಕೆ ಆಗುತ್ತಾ ಎಂಬ ಆರ್ ಆಶೋಕ್ ಗೇಲಿ ಮಾಡಿದ್ದರು. ಅವರ ಈ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿ, ಶ್ರೀ ರಾಮಚಂದ್ರ ಎಲ್ಲ ಹಿಂದುಗಳಿಗೂ ಬೇಕು, ನಾನು ಹಿಂದುನೇ, ಅಶೋಕ್ ಕೂಡ ಹಿಂದು. ಆದ್ರೆ ಅವನಗಿಂತ ನಾನು ಒಳ್ಳೆ ಹಿಂದು ಎಂದರು.
ಹೊನ್ನಾಳಿಯಲ್ಲಿ ಕನಕದಾಸರ ಕಂಚಿನ ಪುತ್ಥಳಿ ಅನಾವರಣ ಮಾಡಿದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಸಿಎಂ, ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ್ದರು.ಆದರೆ ಅವರು ಕುರುಬರಾಗಿ ಉಳಿದಿರಲಿಲ್ಲ, ವಿಶ್ವಮಾನವರಾದರು. ಕುವೆಂಪು ಹೇಳಿದಂತೆ ಎಲ್ಲರೂ ಹುಟ್ಟುವಾಗ ವಿಶ್ವಮಾನವರಾಗಿ ಹುಟ್ಟುತ್ತಾರೆ. ಬೆಳೆಯುತ್ತಾ ಅಲ್ಪ ಮಾನವರಾಗುತ್ತಾರೆ, ಜಾತಿ ವ್ಯವಸ್ಥೆ ಪರಿಣಾಮ ಅಲ್ಪಮಾನವರಾಗಿ ಬಿಡುತ್ತೇವೆ ಎಂದು ತಿಳಿಸಿದರು.
ನನ್ನ ಶರೀರದಲ್ಲಿ ರಕ್ತ ಹರಿತಾ ಇದೆ. ನನಗೆ ಆಪರೇಷನ್ ಆದರೆ ರಕ್ತ ಬೇಕಾಗುತ್ತದೆ. ನಾನು ನನ್ನ ಕುರುಬ ಜಾತಿಯ ರಕ್ತವನ್ನೇ ಕೇಳ್ತಿನಾ ಎಂದು ಮಾಜಿ ಶಾಸಕ ರೇಣುಕಾಚಾರ್ಯ ಅವರ ಕಾಲೆಳೆದರು. ಇನ್ನು ಕುರುಬರೇ ರಕ್ತ ಕೊಡ್ರಿ ಅಂತೀರಾ, ರೇಣುಕಾಚಾರ್ಯ ನೀನು ಜಂಗಮ ರಕ್ತ ಕೊಡು ಅಂತಿಯಾ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯಗೆ ಪ್ರಶ್ನಿಸಿದರು. ಕನಕರು ದಾಸ ಶ್ರೇಷ್ಠ ಸಂತ ಅಷ್ಟೇ ಅಲ್ಲ, ಅವರೊಬ್ಬ ಸಮಾಜ ಸುಧಾರಕ ಕೂಡ. ಪಾಳೇಗಾರರಾಗಿದ್ರು ಬಳಿಕ ಎಲ್ಲ ತ್ಯಾಗ ಮಾಡಿ ದಾಸರಾದರು. ಕನಕ ನಾಯಕ ಕನಕ ದಾಸ ಆಗುತ್ತಾನೆ, ಕನಕದಾಸರು ಪಾಳೆಗಾರರ ವಂಶಕ್ಕೆ ಸೇರಿದವರು ಎಂದು ಹೇಳಿದರು.