ಬೆಂಗಳೂರು : ಭಾರತೀಯ ಜನತಾ ಪಾರ್ಟಿಯ ಭೀಷ್ಮ ಮತ್ತು ಉಕ್ಕಿನ ಮನುಷ್ಯ ಮಾಜಿ ಪ್ರಧಾನಿ ಆಗಿರುವಂತಹ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ ನೀಡುರುವುದು ಸಂತೋಷದ ವಿಷಯವಾಗಿದೆ ಎಂದು ಶಾಸಕ SR ವಿಶ್ವನಾಥ್ ಸಂತೋಷ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಾರ್ಯಕರ್ತರ ಕಾರ್ಯಕ್ರಮಕ್ಕೆ ನಡೆಯುವ ಸಂದರ್ಭದಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಣೆ ಮಾಡಿರುವ ವಿಷಯ ತಿಳಿದು ತುಂಬಾ ಸಂತೋಷವಾಯಿತು. ಸಭೆಯ ಬಳಿಕ ಕಾರ್ಯಕರ್ತರು ಸಂಭ್ರಮೋತ್ಸವ ನಡೆಸಿದ್ದಾರೆ.
90ರ ದಶಕದಲ್ಲಿ ರಾಮಜನ್ಮ ಭೂಮಿ ಹೋರಾಟಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಅವರ ಜೊತೆಗೆ ನಾನು ಹೋರಾಟ ಮಾಡಿದ್ದೇನೆ. ಭಾರತೀಯ ಜನತಾ ಪಾರ್ಟಿಗೆ ಒಂದು ನೇತೃತ್ವವನ್ನು ಕೊಟ್ಟು ಕೇಂದ್ರದಲ್ಲಿ ಭಾರತೀಯ ಜನತಾ ಪಾರ್ಟಿ ಬರುವುದಕ್ಕೆ ಪ್ರಮುಖವಾದಂತ ಕಾರಣಿಕರ್ತರಿವರು ಎಂದು ತಿಳಿಸಿದರು.
ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಸಲುವಾಗಿ LK ಅಡ್ವಾನಿಯವರು 500 ವರ್ಷಗಳ ನಮ್ಮ ಸತತ ಹೋರಾಟ ನಡೆಸಿದ್ದಾರೆ.ಅಂತ ಹೇಳಿ ಇದನ್ನ ಜನಲೋಂದನವಾಗಿ ಪರಿವರ್ತನೆ ಮಾಡಿದಂತ ಹಾಗೂ ಸಾಮಾನ್ಯ ಜನಗಳಿಗೂ ಕೂಡ ರಾಮಮಂದಿರ ವಿಷಯವನ್ನು ತಿಳಿಸಿದಿರುವಂತಹ ಒಬ್ಬ ಮಹಾನುಭಾವರು.
ಲಾಲಕೃಷ್ಣ ಅಡ್ವಾಣಿ ಅವರಿಗೆ ಇವತ್ತು ರಾಮ ಮಂದಿರ ನಿರ್ಮಾಣ ಆಗಿರುವ ಸಂದರ್ಭ ದಲ್ಲಿ ಭಾರತ ರತ್ನ ಕೊಟ್ಟಿರುವಂಥದ್ದು ನಮ್ಮ ಭಾರತೀಯರಿಗೆ ಅತ್ಯಂತ ಹೆಮ್ಮೆಪಡುವಂತದ್ದು.ಒಬ್ಬ ಹೋರಾಟಗಾರನಿಗೆ ಮಾಡಿರುವಂತಹ ಗೌರವ ನಿಜಕ್ಕೂ ಹೆಮ್ಮೆಯ ಹೆಂಡತಿಯಾಗಿದೆ.ಭಾರತ ರತ್ನ ಕೊಟ್ಟಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.