ಕಲಬುರಗಿ : ರಾಷ್ಟ್ರಪತಿಯವರನ್ನು ಏಕವಚನದಲ್ಲಿ ಸಂಭೋಧಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಲ್ಬುರ್ಗಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಸಿಎಂ ಹಾಗೂ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದು ದಲಿತ ಮಹಿಳೆಯನ್ನು ಉನ್ನತ ಸ್ಥಾನದಲ್ಲಿ ಕೂರಿಸಿರುವುದಕ್ಕೆ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಕಿಡಿ ಕಾರಿದ್ದರೆ.
ಈ ಕುರಿತಂತೆ ಕಲ್ಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿಗಳ ಬಗ್ಗೆ ಸಿಎಂ ಏಕವಚನದ ಮಾತಿಗೆ ಬಿವೈ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ್ದು, ಈ ಮಾತು ಮುಖ್ಯಮಂತ್ರಿಗಳ ಬಾಯಿ ತಪ್ಪಿನಿಂದ ಬಂದಿದೆ ಅಂತ ಅನಿಸುತ್ತಿಲ್ಲ. ಸಿಎಂ ಅಂತರಾಳದ ಭಾವನೆಯನ್ನು ಮಾತಿನ ಮೂಲಕ ಹೊರ ಹಾಕಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅನುಭವಿ ಸಿಎಂ ಅವರಿಂದ ಇಂತಹ ನಿರೀಕ್ಷೆಯನ್ನು ಮಾಡಿರಲಿಲ್ಲ ಸಿಎಂ ಬಾಯಿಯಿಂದ ಯಾಕೆ ಈ ಮಾತು ಬಂತು ಅನ್ನೋದೇ ಆಶ್ಚರ್ಯವಾಗಿದೆ.
ರಾಷ್ಟ್ರಪತಿಗಳ ಬಗ್ಗೆ ಅವರ ಮಾತನ್ನಾಡಿದ್ದು ಅಕ್ಷಮ್ಯ ಅಪರಾಧ ಉನ್ನತ ಸ್ಥಾನದಲ್ಲಿ ದಲಿತ ಮಹಿಳೆಯನ್ನು ಕೂರಿಸಿದ್ದಕ್ಕೆ ಅವರು ಸಹಿಸುತ್ತಿಲ್ಲ.ಇದ್ಯಾವುದನ್ನು ಸಹಿಸಿಕೊಳ್ಳಲು ಕಾಂಗ್ರೆಸ್ ನವರಿಗೆ ಆಗುತ್ತಿಲ್ಲ. ಕಾಂಗ್ರೆಸ್ನವರು ಗುತ್ತಿಗೆ ಪಡೆದವರಂತೆ ದಲಿತರ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದರು.