ಬೆಂಗಳೂರು: ನಗರದ ಟಿ-20 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ವೀಕ್ಷಣೆಯಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರ ಅನುಕೂಲಕ್ಕಾಗಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಿಂದ ಹೆಚ್ಚಿನ ಸಾರಿಗೆ ಸೌಲಭ್ಯಗಳನ್ನು BMTC ಕಲ್ಪಿಸಿದೆ. ಈ ಮೂಲಕ ಬೆಂಗಳೂರಿನ ಟಿ20 ಪ್ರಿಯರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಈ ಬಗ್ಗೆ ಬಿಎಂಟಿಸಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಸಾರ್ವಜನಿಕ ಪ್ರಯಾಣಿಕರಿಗೆ ದಕ್ಷ, ವಿಶ್ವಾಸನೀಯ, ಆರಾಮದಾಯಕ ಹಾಗೂ ಮಿತವ್ಯಯಕರ ದರದಲ್ಲಿ ಉತ್ತಮ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ ಎಂದಿದೆ.
ದಿನಾಂಕ 17.01.2024 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ-20 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಗೆ ಭಾಗವಹಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಮೇಲ್ಕಂಡ ದಿನಾಂಕದಂದು ಬೆಂ.ಮ.ಸಾ.ಸಂಸ್ಥೆಯು ಹೆಚ್ಚುವರಿ ಸಾರಿಗೆ ಸೇವೆಗಳನ್ನು ಕಾರ್ಯಾಚರಿಸಲಿದ್ದು, ವಿವರ ಕೆಳಕಂಡಂತಿದೆ ಎಂದು ಹೇಳಿದೆ.
ಮಾರ್ಗ ಸಂಖ್ಯೆ | ಎಲ್ಲಿಂದ | ಎಲ್ಲಿಗೆ | ಮಾರ್ಗ |
SBS-1K | ಎಂ.ಚಿನ್ನಸ್ವಾಮಿ ಕ್ರೀಡಾಂಗಣ | ಕಾಡುಗೋಡಿ ಬಸ್ ನಿಲ್ದಾಣ | ಹೆಚ್.ಎ.ಎಲ್ ರಸ್ತೆ |
SBS-13K | ಕಾಡುಗೋಡಿ ಬಸ್ ನಿಲ್ದಾಣ | ಹೂಡಿ ರಸ್ತೆ | |
G-2 | ಸರ್ಜಾಪುರ | ಅಗರ, ದೊಮ್ಮಸಂದ್ರ | |
G-3 | ಎಲೆಕ್ಟ್ರಾನಿಕ್ ಸಿಟಿ | ಹೊಸೂರು ರಸ್ತೆ | |
G-4 | ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್ | ಜಯದೇವ ಆಸ್ಪತ್ರೆ | |
G-6 | ಕೆಂಗೇರಿ ಕೆ.ಹೆಚ್.ಬಿ. Quarters | ಎಂ.ಸಿ.ಟಿ.ಸಿ-ನಾಯಂಡನಹಳ್ಳಿ | |
G-7 | ಜನಪ್ರಿಯ ಟೌನಷಿಪ್ | ಮಾಗಡಿ ರಸ್ತೆ | |
G-8 | ನೆಲಮಂಗಲ | ಯಶವಂತಪುರ | |
G-9 | ಯಲಹಂಕ 5ನೇ ಹಂತ | ಹೆಬ್ಬಾಳ | |
G-10 | ಆರ್.ಕೆ.ಹೆಗಡೆ ನಗರ-ಯಲಹಂಕ | ನಾಗವಾರ, ಟ್ಯಾನರಿ ರಸ್ತೆ | |
G-11 | ಬಾಗಲೂರು | ಹೆಣ್ಣೂರು ರಸ್ತೆ | |
KBS-12HK | ಹೊಸಕೋಟೆ | ಟಿನ್ ಫ್ಯಾಕ್ಟರಿ |
BIG NEWS: ‘ಸಚಿವ ಕೆ.ಎನ್ ರಾಜಣ್ಣ’ ವಿರುದ್ಧ ‘ಕಾಂಗ್ರೆಸ್ ಕಾರ್ಯಕರ್ತ’ರಿಂದ ‘ಎಐಸಿಸಿ ಅಧ್ಯಕ್ಷ’ರಿಗೆ ದೂರು
‘ಉದ್ಯೋಗಾಕಾಂಕ್ಷಿ’ಗಳಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರದಿಂದಲೇ ಫೆಬ್ರವರಿಯಲ್ಲಿ ‘ಬೃಹತ್ ಉದ್ಯೋಗ ಮೇಳ’