ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಲಟ್ಕಾ-ಜಟ್ಕಾ ಎಂದು ಟೀಕೆ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಅಜಯ್ ರೈ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕಾಂಗ್ರೆಸ್ ನಾಯಕ ಸೋಮವಾರ ಇರಾನಿ ವಿರುದ್ಧ ವ್ಯಂಗ್ಯವಾಡಿದ್ದು, ತಮ್ಮ ಕ್ಷೇತ್ರ ಅಮೇಥಿಗೆ ‘ಲಟ್ಕಾಗಳು’ ಮತ್ತು ‘ಜಟ್ಕಾಗಳು’ ತೋರಿಸಲು ಬರುತ್ತಾರೆ ಎಂದು ಹೇಳಿದ್ದರು.
ಬಿಜೆಪಿಯ ಮಹಿಳಾ ಮೋರ್ಚಾದ ಸೋನ್ಭದ್ರಾ ಪುಷ್ಪಾ ಸಿಂಗ್ ಅವರು ರಾಬರ್ಟ್ಸ್ಗಂಜ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ಅಜಯ್ ರೈ ವಿರುದ್ಧ ಪ್ರಕರಣ ದಾಖಲಾಗಿದೆ.
2024ರಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಲೋಕಸಭೆಗೆ ಸ್ಪರ್ಧಿಸುತ್ತಾರೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ರೈ, ಇದು ಗಾಂಧಿ ಕುಟುಂಬದ ಸ್ಥಾನವಾಗಿತ್ತು. ರಾಹುಲ್ ಜಿ ಅಲ್ಲಿಂದ ಲೋಕಸಭಾ ಸಂಸದರಾಗಿದ್ದರು. ಹಾಗೆಯೇ ರಾಜೀವ್ (ಗಾಂಧಿ) ಜಿ. ಮತ್ತು ಸಂಜಯ್ (ಗಾಂಧಿ) ಜೀ ಕೂಡ ಸ್ಪರ್ಧಸಿದ್ದರು.
ಅಮೇಥಿಯಲ್ಲಿ ಬಹುತೇಕ ಕಾರ್ಖಾನೆಗಳು ಮುಚ್ಚುವ ಹಂತದಲ್ಲಿವೆ. ಜಗದೀಶ್ಪುರ ಕೈಗಾರಿಕಾ ಪ್ರದೇಶದಲ್ಲಿ ಅರ್ಧದಷ್ಟು ಕಾರ್ಖಾನೆಗಳು ಮುಚ್ಚಿವೆ. ಸ್ಮೃತಿ ಇರಾನಿ ಮಾತ್ರ ಬರುತ್ತಾರೆ. ಲಟ್ಕಾ-ಜಟ್ಕಾ ತೋರಿಸುಸಿ ಹೋಗುತ್ತಾರೆ ಎಂದು ಪಕ್ಷದ ಪ್ರಾದೇಶಿಕ ಮುಖ್ಯಸ್ಥ ರೈ ಹೇಳಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಇರಾನಿ ಲೋಕಸಭೆಯಲ್ಲಿ ಅಮೇಥಿಯನ್ನು ಪ್ರತಿನಿಧಿಸುತ್ತಿದ್ದಾರೆ.
BIGG NEWS : ರಾಜ್ಯದಲ್ಲಿ ಅಲ್ಪಸಂಖ್ಯಾತರ ಅಭಿವೃದ್ದಿಗೆ 2400 ಕೋಟಿ ರೂ. ವೆಚ್ಚ : ಸಿಎಂ ಬೊಮ್ಮಾಯಿ
BIGG NEWS : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರ ಪ್ರತಿಭಟನೆ
WATCH VIDEO: ಆಂಬ್ಯುಲೆನ್ಸ್ ನಿಲ್ಲಿಸಿ ರೋಗಿಗೆ ಕುಡಿಯಲು ಮದ್ಯ ನೀಡಿದ ಡ್ರೈವರ್…! ಮುಂದೆನಾಯ್ತು? ಈ ವಿಡಿಯೋ ನೋಡಿ