ಶಿವಮೊಗ್ಗ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2022-23ನೇ ಶೈಕ್ಷಣಿಕೆ ಸಾಲಿನ ಜುಲೈ ಆವೃತ್ತಿಯಲ್ಲಿ ದ್ವಿತೀಯ/ತೃತೀಯ ಬಿ.ಎ./ಬಿ.ಕಾಂ./ಬಿ.ಬಿ.ಎ/ಬಿ.ಸಿ.ಎ/ಬಿ.ಎಸ್ಸಿ(ಜನರಲ್)/ಬಿ.ಎಸ್ಸಿ (ಹೋಮ್ಸೈನ್ಸ್)/ಬಿ.ಎಸ್ಸಿ(ಐ.ಟಿ) ಮ್ತು ಅಂತಿಮ ಎಂ.ಎ/ಎಂ.ಕಾಂ./ಎಂ.ಬಿ.ಎ ಮತ್ತು ಎಂ.ಎಸ್ಸಿ ಪದವಿಗಳಿಗೆ ಪ್ರವೇಶಾತಿ ನವೀಕರಣ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದ್ದು, ದಂಡ ಶುಲ್ಕವಿಲ್ಲದೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಡಿ. 09 ರಿಂದ ಡಿ. 20 ರವರೆಗೆ ವಿಸ್ತರಿಸಲಾಗಿದೆ ಎಂದು ಮೈಸೂರು ಕರಾಮುವಿಯ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 8800335638, ಅಂತರ್ಜಾಲ ತಾಣ https://www.ksoumysuru.ac.in ಅಥವಾ ಇಮೇಲ್ techsupport@ksouportal.com ಗಳನ್ನು ಸಂಪರ್ಕಿಸಬಹುದಾಗಿದೆ.
ರೈಲ್ವೆ ಸಿಬ್ಬಂದಿಗಳ ಗಮನಕ್ಕೆ: ಡಿ.15ರಂದು ಮೈಸೂರು ರೈಲ್ವೆ ವಿಭಾಗದಿಂದ ರಾಷ್ಟ್ರವ್ಯಾಪ್ತಿ ಪಿಂಚಣಿ ಅದಾಲತ್
ವಿದ್ಯುತ್ ವ್ಯತ್ಯಯ : ಸಹಕರಿಸಲು ಮನವಿ
ಶ್ರೀರಾಂಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ರಾ.ಹೆ.206ರಲ್ಲಿ ಫ್ಲೈ ಓವರ್ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಈ ಪ್ರದೇಶದ ವ್ಯಾಪ್ತಿಗೊಳಪಡುವ ಶ್ರೀರಾಂಪುರ, ಗಾಜನೂರು ಭಾಗದ ಬಿ.ಎಸ್.ಎನ್.ಎಲ್ ಲೇಔಟ್, ವೀರಣ್ಣ ಬೆನವಳ್ಳಿ, ವೀರಗಾರನ ಭೈರನಕೊಪ್ಪ, ಭೂಮಿಕಾ ಅಲಾಯ್ಸ್, ಫೆಸಿಟ್ ಕಾಲೇಜ್, ಕಿಮ್ಮನೆ ಗಾಲ್ಫ್ ಕ್ಲಬ್, ಆಲದೇವರಹೊಸೂರು, ಪೊಲೀಸ್ ಲೇಔಟ್, ಗುಡ್ಡದಹರಕೆರೆ, ಇಂದಿರಾ ಬಡಾವಣೆ, ಗಿರಿದೀಪಮ್ ಸ್ಕೂಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ದಿ: 15/12/20222 ರಂದು ಬೆಳಗ್ಗೆ 10.00 ರಿಂದ ಸಂಜೆ 6.00ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಕುಂಸಿ ಪಾಲನೆ ಮತ್ತು ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.