ರಾಯಚೂರು : ಕಾಂಗ್ರೆಸ್ ನಲ್ಲಿ ( Congress) ಗುಂಪುಗಳು ಸೃಷ್ಟಿಯಾಗಿ ಕಾಂಗ್ರೆಸ್ ಕೋಮಾ ಸ್ಥಿತಿಯಲ್ಲಿದೆ. ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯರಿಂದ ಪಕ್ಷದಲ್ಲಿ ಎರಡು ಬಣ ಸೃಷ್ಟಿ ಆಗಿದೆ ಎಂದು ಸಚಿವ ಶ್ರೀರಾಮುಲು ( Sri Ramulu ) ಹೇಳಿದರು.
ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಸಚಿವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು.
ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯರಿಂದ ಪಕ್ಷದಲ್ಲಿ ಎರಡು ಬಣ ಸೃಷ್ಟಿ ಆಗಿದೆ. ಒಂದನೇ ಭಾಗ ಕನಕಪುರ ಬಂಡೆ. ಹಳೆ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರದ್ದು ಮತ್ತೊಂದು ಭಾಗ. ತುಮಕೂರು ಭಾಗದಲ್ಲಿ ಪರಮೇಶ್ವರ್ ಅವರ ಭಾಗ. ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದ ಬಳಿಕ ಅವರದೊಂದು ಗುಂಪಾಗಿದೆ ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ನಾಯಕರ ಕಾಲೆಳೆದರು. ಕಾಂಗ್ರೆಸ್ ಗೆ ತಮ್ಮ ಪಕ್ಷದ ಗೊಂದಲಗಳನ್ನೇ ಸರಿಪಡಿಸಿಕೊಳ್ಳಲು ಆಗ್ತಿಲ್ಲ. ಅಸ್ತಿತ್ವ ಕಳೆದುಕೊಂಡ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಹಗಲು ಕನಸು ಕಾಣುತ್ತಿದೆ ಎಂದು ಶ್ರೀರಾಮುಲು ಹೇಳಿದರು.
ಸರ್ಕಾರಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ; ಶೀಘ್ರ ‘ತುಟ್ಟಿಭತ್ಯೆ’ ಹೆಚ್ಚಳ, ಸ್ಯಾಲರಿ ಹೈಕ್
WATCH VIDEO : ಇದಪ್ಪಾ ಗುಂಡಿಗೆ ಅಂದ್ರೆ ! ಮೊಸಳೆಯಂತೆ ಮೊಸಳೆ ಪಕ್ಕವೇ ಮಲಗಿ ಕೀಟಲೆ ಕೊಟ್ಟ ‘ಭೂಪ’