ತಾಡೆಪಲ್ಲಿಗುಡೆಂ : ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಡಿಯಡ್ಡಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಈ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಇನ್ನು ಕೆಲವರು ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಚಿಂತಾಜನಕವಾಗಿದೆ.
ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನ ನಿಯಂತ್ರಿಸಿದ್ದಾರೆ. ಇನ್ನು ಅವಘಡ ಸಂಭವಿಸಿದಾಗ ಪಟಾಕಿ ಕಾರ್ಖಾನೆಯಲ್ಲಿ 10 ಮಂದಿ ಇದ್ದರು ಎನ್ನಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ವರದಿಯಾಗಿದ್ದು, ಭಾರೀ ಸ್ಫೋಟದಿಂದಾಗಿ ಸ್ಥಳೀಯರು ಭಯಭೀತರಾಗಿದ್ದರು. ಪಟಾಕಿ ಕಾರ್ಖಾನೆ ಅಣ್ಣಾವರಂ ಎಂಬುವವರಿಗೆ ಸೇರಿದ್ದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ನ.14ಕ್ಕೆ ‘ಜಿ-20 ಶೃಂಗಸಭೆ’ಗಾಗಿ ಇಂಡೋನೇಷ್ಯಾಕ್ಕೆ ‘ಪ್ರಧಾನಿ ಮೋದಿ’, ಭಾರತೀಯ ಸಮುದಾಯದ ಭೇಟಿ
BIG NEWS: ನಿವೃತ್ತಿ ವಯಸ್ಸಿನ ಬಗ್ಗೆ ‘ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್’ಗೆ ನೋಟಿಸ್ ನೀಡಿದ ಹೈಕೋರ್ಟ್
ಭಾರತ ಸೋಲಿಗೆ ‘ಪಾಕ್ ಪ್ರಧಾನಿ’ ವ್ಯಂಗ್ಯ, ಮುಟ್ಟಿ ನೋಡಿಕೊಳ್ಳುವ ಉತ್ತರ ಕೊಟ್ಟ ‘ಅಭಿಮಾನಿ’ಗಳು