ಬೆಂಗಳೂರು : ಸರ್ಕಾರದ ಹಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಮಾಡಿದ್ದೇ ದೊಡ್ಡ ಅಪರಾಧ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ಧಾಳಿ ನಡೆಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್ ಕೆಂಪೇಗೌಡ ಪ್ರತಿಮೆಯನ್ನು ಸರ್ಕಾರದ ಹಣದಲ್ಲಿ ಮಾಡಿದ್ದೇ ಒಂದು ದೊಡ್ಡ ಅಪರಾಧ, ಏರ್ ಪೋರ್ಟ್ ನವರಿಗೆ ಹೇಳಿದ್ದರೆ ಅವರೇ ಪ್ರತಿಮೆ ನಿರ್ಮಿಸುತ್ತಿದ್ದರು, ಸರ್ಕಾರದ ದುಡ್ಡಲ್ಲಿ ಕಟ್ಟುವಂತಹ ಅಗತ್ಯತೆ ಏನಿತ್ತು ಎಂದು ಕೇಳಿದ್ದಾರೆ.
ಏರ್ ಪೋರ್ಟ್ ಅವರೇ ಮಾಡುತ್ತಿದ್ದರು ಎಂದು ಮೊದಲೇ ಹೇಳಿದ್ದೆ, ಅವರೇನು ಧರ್ಮಕ್ಕೆ ಜಾಗ ನೀಡುತ್ತಾರಾ..? ಅವರು ಸಂಪಾದನೆ ಮಾಡಿಲ್ಲವೇ..? ವಾಣಿಜ್ಯ ಬಳಕೆಗೆ ಹೆಚ್ಚು ಜಾಗ ನೀಡಿದ್ದೇವೆ. ಸರ್ಕಾರ ಇದನ್ನು ನಿರ್ಮಿಸುವ ಅಗತ್ಯ ಏನಿತ್ತು…ಈಗ ಸರ್ಕಾರ ನಾವೇ ಮಾಡಿದ್ದು ಎಂಬ ಜಂಭ ಕೊಚ್ಚಿಕೊಳ್ಳುತ್ತಿದೆ ಎಂದರು.
ದ್ವೇಷ ಭಾಷಣ ಪ್ರಕರಣದಲ್ಲಿ ಶಿಕ್ಷೆ ಪ್ರಶ್ನಿಸಿ ಅಜಂ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸದ ನ್ಯಾಯಾಲಯ