ಮನಾಲಿ: ಚುನಾವಣಾ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಲು ಹಿಮಾಚಲ ಪ್ರದೇಶಕ್ಕೆ ಬುಧವಾರ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಂಗ್ರಾ ಜಿಲ್ಲೆಯ ಚಂಬಿಯಲ್ಲಿ ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಡಲು ತಮ್ಮ ಬೆಂಗಾವಲು ಪಡೆಯನ್ನು ತಡೆದ ಘಟನೆ ನಡೆದಿದೆ.
ಹಿಮಾಚಲ ಪ್ರದೇಶ ಬಿಜೆಪಿ ತನ್ನ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಇದರ ವೀಡಿಯೊವನ್ನು ಪೋಸ್ಟ್ ಮಾಡಿದೆ. ಮಾನವೀಯತೆಗಿಂತ ಮುಖ್ಯವಾದುದು ಯಾವುದೂ ಇಲ್ಲ ಎಂದು ಅವರು ಹೇಳುತ್ತಾರೆ. ಈ ದೃಶ್ಯವು ಇದನ್ನು ವಿವರಿಸುತ್ತದೆ” ಎಂದು ಬಿಜೆಪಿ ರಾಜ್ಯ ಘಟಕವು ಹಿಂದಿಯಲ್ಲಿ ಟ್ವೀಟ್ ಮಾಡಿದೆ. “ಕಾಂಗ್ರಾದ ಚಂಬಿಯಲ್ಲಿ, ಪ್ರಧಾನಿ ಅವರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ಮೊದಲು ಆಂಬ್ಯುಲೆನ್ಸ್ಗೆ ದಾರಿ ಮಾಡಿಕೊಟ್ಟರು” ಎಂದು ಹೇಳಿದೆ.
ನವೆಂಬರ್ 12 ರಂದು ಮತದಾನ ನಡೆಯಲಿರುವ ರಾಜ್ಯದ ಚಂಬಿ ಮತ್ತು ಸುಜನ್ಪುರದಲ್ಲಿ ಪ್ರಧಾನಿ ಬುಧವಾರ ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದರು. ಹಿಮಾಚಲ ಪ್ರದೇಶದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಕಣ್ಣಿಟ್ಟಿದೆ.
वो कहते हैं ना कि इंसानियत से बढ़कर कुछ नहीं। ये बात ये दृश्य समझाता है।
चम्बी, काँगड़ा में प्रधानमंत्री श्री @narendramodi जी ने अपने क़ाफ़िले को रोककर पहले एम्बुलेंस को जाने का रास्ता दिया। pic.twitter.com/xZ8hB84vDE
— BJP Himachal Pradesh (@BJP4Himachal) November 9, 2022