ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಂಡಿದೆ.
ಅದರಲ್ಲೂ ಕೊಲೆ ಮಾಡಿ ಚಾನಲ್ ನಲ್ಲಿ ಬಿಸಾಕಿ ಹೋಗಿದ್ದಾರೆ ಎಂದು ಚಂದ್ರು ತಂದೆ ರಮೇಶ್ ಕೂಡ ಈಗಾಗಲೇ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಆದರೆ ಸರ್ಕಾರದ ಅವಿಭಾಜ್ಯ ಅಂಗವಾಗಿರುವ ರೇಣುಕಾಚಾರ್ಯ ಅವರೇ ಪೊಲೀಸ್ ತನಿಖೆ ಮೇಲೆ ಅನುಮಾನ ಗೊಂಡಿದ್ದಾರೆ. ಕೊಲೆಗಾರರನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ, ಈ ಪ್ರಕರಣವನ್ನು ಹೆಚ್ಚಿನ ತನಿಖೆಗೆ ಒತ್ತಾಯಿಸಿದ್ದಾರೆ.
ಚಂದ್ರು ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈ ಸೇರಿಲ್ಲ. ಈಗಾಗಲೇ ಚಂದ್ರು ಸಾವು ಸಹಜವಲ್ಲ ಕೊಲೆ ಅಂತ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಚಂದ್ರುವಿನ ಕಾರು ತುಂಗಾ ನಾಲೆಯಲ್ಲಿ ಸಿಕ್ಕಿದ್ದು, ಮೃತದೇಹ ಹಿಂಬದಿ ಸೀಟ್ನಲ್ಲಿ ಸಿಕ್ಕಿದೆ. ಅಲ್ಲದೇ ಆತನ ಮೇಲೆ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ರು ಅಂತ ಆರೋಪಿಸಿದ್ದಾರೆ. ಆದರೆ ಡಯಾಟಂ ಟೆಸ್ಟ್ ನಲ್ಲಿ ಕೂಡ ಇದೊಂದು ಅಪಘಾತ ಎಂದು ಬಂದಿದೆ. ಈ ಎಲ್ಲಾ ವರದಿಗಳ ಮೇಲೆ ನಂಬಿಕೆ ಇಲ್ಲದೆ ಹೆಚ್ವಿನ ತನಿಖೆಗೆ ಒತ್ತಾಯಿಸಿದೆ. ಈ ಮಧ್ಯೆ ಅಲ್ಲದೆ ಮಾಜಿ ಸಿಎಂ ಪುತ್ರ ವಿಜಯೇಂದ್ರ, ಮುತಾಲಿಕ್ ಸೇರಿದಂತೆ ಕ್ಷೇತ್ರದ ಜನರು ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ರು