ಉತ್ತರಪ್ರದೇಶ : ತೋಟದಲ್ಲಿ ಪೇರಲೆ ಹಣ್ಣ್ನು ಕಿತ್ತು ತಿಂದ ದಲಿತ ವ್ಯಕ್ತಿಯನ್ನು ಥಳಿಸಿ, ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಅಲಿಗಢದಲ್ಲಿ ನಡೆದಿದೆ.
BIGG NEWS : ರಾಜ್ಯ ಸರ್ಕಾರದಿಂದ ಮೇಜರ್ ಸರ್ಜರಿ : 10 ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಆದೇಶ
ಪ್ರಕರಣ ಸಂಬಂಧ ಪ್ರದೇಶ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಭೀಮಸೇನ್ ಮತ್ತು ಬನ್ವಾರಿಲಾಲ್ ಎಂದು ಗುರುತಿಸಲಾಗಿದ್ದು, ಓಂಪ್ರಕಾಶ್ ಅವರನ್ನು ತೋಟದಿಂದ ಪೇರಲವನ್ನು ಕಿತ್ತು ನಂತರ ದೊಣ್ಣೆಗಳಿಂದ ಹೊಡೆದು ಕೊಂದಿದ್ದಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಓಂಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
Aligarh, UP | Man beaten to death for allegedly stealing guava in Gangiri PS area, 2 arrested
On basis of info that a man was injured, police reached spot&sent victim to hospital.He died during treatment.2 arrested on basis of complaint filed by relatives,probe on:AK Pandey, CO pic.twitter.com/a3YMCKu8s7
— ANI UP/Uttarakhand (@ANINewsUP) November 6, 2022
ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಸರ್ಕಲ್ ಅಧಿಕಾರಿ ಅಭಯಕುಮಾರ್ ತಿಳಿಸಿದ್ದಾರೆ.
ಇಬ್ಬರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (IPC) 302 (ಕೊಲೆ) ಮತ್ತು SC/ST ಕಾಯಿದೆಯ 3(2)(v) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ.
BIG NEWS: ಸಾಗರ್ ಧನಕರ್ ಹತ್ಯೆ ಪ್ರಕರಣ: ತಿಹಾರ್ ಜೈಲಿನಿಂದ ಕುಸ್ತಿಪಟು ʻಸುಶೀಲ್ ಕುಮಾರ್ʼ ಬಿಡುಗಡೆ