ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನ್ಯಾಯಾಲಯದ ಆದೇಶ ಉಲ್ಲಂಘಿಸಿ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಕೊಡದೆ ರಾಜ್ಯದ ರಾಜಕಾರಣಿಗಳು ತನ್ಮ ಅಭಿಮಾನಿ ಸಂಘದ ಮೂಲಕ ಪ್ಲೆಕ್ಸ್ ಬ್ಯಾನರ್ ಅಳವಡಿಸೊ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿರುವ ಅಂಶವನ್ನ ಕಳೆದ ಜುಲೈ ತಿಂಗಳಲ್ಲಿ ನ್ಯೂಸ್ ನೌ ಸುದ್ದಿ ಪ್ರಸಾರ ಮಾಡಿತ್ತು.
ರಾಜ್ಯಾದಾದ್ಯಂತ ಪ್ಲೆಕ್ಸ್ ಬ್ಯಾನರ್ ನಿಷೇಧ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಇತ್ತ ಜಿಲ್ಲಾದಧಿಕಾರಿಗಳು ಕೂಡ ಆದೇಶ ಪ್ಲೆಕ್ಸ್ ಬ್ಯಾನರ್ ಪ್ಲಾಸ್ಟಿಕ್ ನಿಷೇದ ಸಂಬಂದ ಆದೇಶ ಹೊರಡಿಸಿದ್ದರೂ ಕ್ಯಾರೆ ಎನ್ನದೆ ಪ್ಲೆಕ್ಸ್ ಅಳವಡಿಸಿದ್ದಾರೆ
ಚಾಮರಾಜನಗರದ ಭುವನೇಶ್ವರಿ ವೃತ್ತ ಬಿ.ರಾಚಯ್ಯ ಜೋಡಿ ರಸ್ತೆಯ ಪ್ರತಿ ವಿದ್ಯುತ್ ಕಂಬಗಳು ಸೇರಿದಂತೆ ವಿವಿದ ವೃತ್ತಗಳಲ್ಲಿ ಫ್ಲೆಕ್ಸ್ ಗಳ ಆರ್ಭಟ ಜೋರಾಗಿದ್ದು ಇದರಿಂದ ವಾಹನ ಸವಾರಿಗೆ ಕಿರಿಕಿರು ಜೊತೆಗೆ ನಗರದ ಸೌಂದರ್ಯ ಕೂಡ ಹಾಳುಗೆಡುವುತ್ತಿದ್ದಾರೆ. ಪ್ರಮುಖವಾಗಿ ಎಲ್ಲದಕ್ಕಿಂತ ಮಿಗಿಲಾಗಿ ಜಿಲ್ಲಾಧಿಕಾರಿ ತೆರಳೊ ಕಛೇರಿ ಜಿಲ್ಲಾಡಳಿತ ಭವನ ಮುಂಭಾಗ ರಾಜಾರೋಷವಾಗಿ ಹಾಕಿ ಜಿಲ್ಲಾಧಿಕಾರಿಯ ಆದೇಶಕ್ಕೆ ಕವಡೆಕಾಸಿನ ಬೆಲೆ ಇಲ್ಲದಂತೆ ನೋಡಿಕೊಳ್ಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಜನ್ಮ ದಿನದಂದು ಪ್ಲೆಕ್ಸ್ ಅಳವಡಿಸಲಾಗಿದ್ದು ಸ್ಥಳೀಯ ನಗರಸಬೆಯಿಂದ ಅನುಮತಿಯನ್ನ ಪಡೆಯದೆ ರಾಜಾರೋಷವಾಗಿ ಹಾಕಲಾಗಿದೆ. ಚಾಮರಾಜನಗರ ಪಟ್ಟಣದಲ್ಲಿ ಹಿಂದೆಯೂ ಪ್ಲೆಕ್ಸ್ ಅಳವಡಿಕೆ ಸಂಬಂದ ಎರಡು ಕೋಮುಗಳ ನಡುವೆ ಸಂಘರ್ಷ ಉಂಟಾಗಿ ಗೋಲಿಬಾರ್ ಕೂಡ ಆಗಿದ್ದವು. ಅಷ್ಟೆ ಅಲ್ಲ ಕೆಲವೊಮ್ಮೆ ಈ ಜಿಲ್ಲೆಯಲ್ಲಿ ಮಹಾನ್ ನಾಯಕರಿಗೆ ಚಪ್ಪಲಿ ಹಾರ ಹಾಕುವ ಮೂಲಕ ಸಂಘರ್ಷಣೆಗಳು ಕೂಡ ನಡೆದಿದ್ದವು. ಇತ್ತಿಚೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಪ್ಲೆಕ್ಸ್ ಹಾಕಿದ್ದಾಗ ಏಕಾಏಕಿ ತೆರವು ಮಾಡಿದಾಗ ಪ್ರತಿಭಟನೆ ಮಾಡಿ ದಲಿತ ಸಂಘಟನೆಗಳ ಕೆಂಗಣ್ಣಿಗೆ ನಗರಸಬೆ ಗುರಿಯಾಗಿದ್ದವು.
ನ್ಯಾಯಾಲಯ ಮತ್ತೆ ಚಾಟಿ ಬೀಸುವುದೇ?: ನ್ಯಾಯಾಲಯ ಆದೇಶ ಉಲ್ಲಂಘನೆ ಸಂಬಂದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳು ನ್ಯಾಯಾಲಯ ಆಡಳಿತಾಧಿಕಾರಿಗಳಿಗಾಗಲಿ, ಕಾ.ಸೇ.ಪ್ರಾಧಿಕಾರದ ಅದ್ಯಕ್ಷರಿಗಾಗಲಿ ಸುಮೊಟೊ ಪ್ರಕರಣ ದಾಖಲಿಸಲು ರಾಜ್ಯ ಉಚ್ಚ ನ್ಯಾಯಾಲಯ ಆಡಳಿತಾದಿಕಾರಿಗಳು ಕ್ರಮಜರುಗಿಸಬೇಕಾಗಿದೆ ಎಂದು ಅಂದೆ ಪ್ರಕಟಿಸಿದ್ದೆವು. ಸಾರ್ವಜನಿಕರೊಬ್ಬರು ದೂರು ಕೂಡ ಸಲ್ಲಿಸಿದ್ದರು. ಅದರಂತೆ ಆಗಸ್ಟ್ 10 ರಂದು ಕಾನೂನುಸೇವೆಗಳ ಪ್ರಾಧಿಕಾರ ಅದ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾದೀಶರು ಜಿಲ್ಲಾದಿಕಾರಿಗಳಿಗೆ ಪತ್ರ ಬರೆದು ಸೂಚಿಸಿದ್ದಾರೆ.
ಪತ್ರದ ಒಕ್ಕಣೆ: ಚಾಮರಾಜನಗರ ಪಟ್ಟಣದ ಶ್ರೀ ಭವನೇಶ್ವರಿ ವೃತ್ತದಿಂದ ಜಿಲ್ಲಾಡಳಿತದವರೆಗೆ ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಹಾಕುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಎಂಬ ವಿಷಯ ಪ್ರಸ್ತಾಪಿಸಿದ್ದಾರೆ.
ಚಾಮರಾಜನಗರ ಪಟ್ಟಣದ ಮುಖ್ಯ ಪ್ರದೇಶವಾದ ಶ್ರೀ ಭುವನೇಶ್ವರಿ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಇತ್ತೀಚಿನ ದಿನಗಳಲ್ಲಿ ಹುಟ್ಟು ಹಬ್ಬಗಳಾದರೆ ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಹಾಕುವ ಪದ್ಧತಿ ನೆಚ್ಚಾಗಿ ಕಂಡು ಬರುತ್ತಿದ್ದು, ಇದರಿಂದ ಸಂಚಾರ ನಿಯಮಕ್ಕೆ ತೊಂದರೆ ಉಂಟಾಗುತ್ತಿರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಮನಹರಿಸದೇ ನಿರ್ಲಕ್ಷ್ಯ ವಹಿಸಿರುತ್ತಾರೆ, ಪ್ರಸ್ತುತ ಮಾನ್ಯ ಕರ್ನಾಟಕ ನ್ಯಾಯಲಯದ ಸಾರ್ವಜನಿಕ ಸ್ಥಳಗಳಲ್ಲಿ ಪ್ಲಾಸಿಕ್ ಬಳಸದಂತೆ ಆದೇಶ ಮಾಡಿದ್ದರೂ ಸಹ ಪ್ಲೆಕ್ಸ್ ಬ್ಯಾನರ್ ಇಂದಕೂಡಿದೆ. ಪ್ಲೆಕ್ಸ್ಗಳನ್ನು ಅಳವಡಿಸಿ ಸಂಚಾರಿ ನಿಯಮಕ್ಕೆ ತೊಂದರೆ ಉಂಟಾಗುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಚಾಮರಾಜನಗರ ಪಟ್ಟಣದ ಶ್ರೀ ಭವನೇಶ್ವರ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ದೊಡ್ಡ ದೊಡ್ಡ ಪ್ಲೆಕ್ಸ್ ಗಳನ್ನು ಹಾಕುತ್ತಿರುವ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಈ ಮೂಲಕ ಜಿಲ್ಲಾದಿಕಾರಿಗಳಿಗೆ ಕೋರಲಾಗಿದೆ ಎಂದು ಸಹಿ ಹಾಕಿ ಕಳಿಸಿದ್ದಾರೆ. ಈ ಆದೇಶವನ್ನ ಗಂಭೀರವಾಗಿ ಪರಿಗಣಿಸದ ಜಿಲ್ಲಾದಿಕಾರಿ ಹಾಗೂ ನಗರಸಬೆ ಅದಿಕಾರಿಗಳು ಕ್ಯಾರೆ ಎನ್ನದೆ ಮೌನವಾಗಿದ್ದಾರೆ. ಒಟ್ಟಾರೆ ನಿಷೇದಿತ ಪ್ಲೆಕ್ಸ್ ಬ್ಯಾನರ್ ಸಂಬಂದ ಕಾನೂನು ಉಳ್ಳವರಿಗೊಂದು ಇಲ್ಲದವರಿಗೊಂದು ಎಂಬಂತೆ ಪಾಲನೆಯಾಗುತ್ತಿರುವುದು ಶೋಚನೀಯ.