ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್ಪೋ 2022 ಉದ್ಘಾಟಿಸಿದರು. ಈ ಸಮಯದಲ್ಲಿ, ಅವರು ಭಾರತ-ಪಾಕಿಸ್ತಾನ ಗಡಿಯ ಸಮೀಪವಿರುವ ದೀಸಾದಲ್ಲಿ ಹೊಸ ವಾಯುನೆಲೆಗೆ ಶಂಕುಸ್ಥಾಪನೆ ಮಾಡಿದರು. ಇನ್ನು ಈ ಹೊಸ ವಾಯುನೆಲೆ ದೇಶದ ಭದ್ರತೆಗೆ ಪರಿಣಾಮಕಾರಿ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಗುಜರಾತ್ ಭಾರತದಲ್ಲಿ ರಕ್ಷಣಾ ಕೇಂದ್ರವಾಗಲಿದ್ದು, ದೇಶದ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಹೊಸ ಏರ್ ಫೀಲ್ಡ್ ನಿರ್ಮಾಣಕ್ಕೆ ದೀಸಾ ಜನರು ಉತ್ಸುಕರಾಗಿದ್ದನ್ನ ನಾನು ತೆರೆಯ ಮೇಲೆ ನೋಡುತ್ತಿದ್ದೆ. ಈ ಏರ್ ಫೀಲ್ಡ್ ಪ್ರಮುಖ ಪಾತ್ರ ವಹಿಸಲಿದೆ. ಡೀಸಾ ಅಂತರಾಷ್ಟ್ರೀಯ ಗಡಿಯಿಂದ ಕೇವಲ 130 ಕಿ.ಮೀ ದೂರದಲ್ಲಿದೆ. ನಮ್ಮ ಸೇನೆಯಾದರೆ ವಿಶೇಷವಾಗಿ ನಮ್ಮ ವಾಯುಪಡೆಯು ಡೀಸಾದಲ್ಲಿ ಮುನ್ನಡೆ ಸಾಧಿಸುವುದರೊಂದಿಗೆ, ಪಶ್ಚಿಮ ಭಾಗದಿಂದ ಬರುವ ಯಾವುದೇ ಬೆದರಿಕೆಗೆ ನಾವು ಉತ್ತಮವಾಗಿ ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ” ಎಂದರು. ಆದಾಗ್ಯೂ, ಅವರು ಈ ಅವಧಿಯಲ್ಲಿ ಪಾಕಿಸ್ತಾನವನ್ನು ಹೆಸರಿಸಲಿಲ್ಲ.
ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಇದು ಮೊದಲ ‘ಡಿಫೆನ್ಸ್ ಎಕ್ಸ್ಪೋ’, ಇದರಲ್ಲಿ ಭಾರತೀಯ ಕಂಪನಿಗಳು ಮಾತ್ರ ಭಾಗವಹಿಸುತ್ತಿವೆ.”ಮುಕ್ತ ವ್ಯಾಪಾರ ಹಾಗೂ ಅಂತರಾಷ್ಟ್ರೀಯ ಭದ್ರತೆಗಾಗಿ ಸಮುದ್ರ ಭದ್ರತೆ ಇಂದು ವಿಶ್ವದ ಆದ್ಯತೆಯಾಗಿದೆ” ಎಂದು ಹೇಳಿದರು.