ಬೆಂಗಳೂರು : ಬೆಂಗಳೂರಿನಲ್ಲಿ ನಿನ್ನೆಯಿಂದ ನಾಪತ್ತೆಯಾಗಿದ್ದ 3 ವರ್ಷದ ಮಗು ರಾಜಕಾಲುವೆಗೆ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.
ಬೆಂಗಳೂರಿನ ಬಳಗೆರೆ ರಸ್ತೆಯಲ್ಲಿರುವ ಕಬೀರ್ ಸೌದ್ ರಾಜಕಾಲುವೆಯಲ್ಲಿ ಮಗು ಬಿದ್ದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ವಿನೋದ್ ಎಂಬ ಹೆಸರಿನ 3 ವರ್ಷದ ಮಗು ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದು, ಪೋಷಕರು ತೀವ್ರ ಹುಡುಕಾಟ ನಡೆಸಿದ್ದಾರೆ. ಆಡವಾಡುತ್ತಿದ್ದ ಮಗು ಕಾಣೆಯಾಗಿದ್ದು, ಮಗು ನಾಪತ್ತೆಯಾದ ಬಗ್ಗೆ ವರ್ತೂರು ಠಾಣೆ ಪೊಲೀಸರಿಗೆ ಪೋಷಕರು ದೂರು ನೀಡಿದ್ದಾರೆ. ಮನೆಯಿಂದ 100 ಮೀಟರ್ ದೂರವಿರುವ ಕಬೀರ್ ಸೌದ್ ರಾಜಕಾಲುವೆಯಲ್ಲಿ ಮಗು ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಉದ್ಯೋಗಿಗಳೇ ಗಮನಿಸಿ ; ‘GPF ನಿಯಮ’ಗಳಲ್ಲಿ ಮಹತ್ವದ ಬದಲಾವಣೆ ; ‘ಹೊಸ ನಿಯಮ’ಗಳ ಮಾಹಿತಿ ಇಲ್ಲಿದೆ |GPF Rule Change
VIRAL NEWS : ವೈದ್ಯರು ಬರೆದುಕೊಟ್ಟ ಹಿಂದಿ ಔಷಧದ ಚೀಟಿ ಸಾಮಾಜಿಕ ಜಾಲತಾಣದಲ್ಲಿ ವೈರಲ್