ನವದೆಹಲಿ: ಉತ್ತರ ಪ್ರದೇಶದ ಅಖಿಲ ಭಾರತ ಮಜ್ಲಿಸ್-ಇ-ಇತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ರಾಜ್ಯ ಅಧ್ಯಕ್ಷ ಶೌಕತ್ ಅಲಿ ಹಿಂದೂ ವಿವಾಹ
ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
“ನಾವು ಮೂರು ಮದುವೆಗಳನ್ನು ಆಗುತ್ತೇವೆ ಎಂದು ಜನರು ಹೇಳುತ್ತಾರೆ. ಆದರೆ, ನಾವು ಎರಡು ಬಾರಿ ಮದುವೆಯಾದರೂ, ನಾವು ನಮ್ಮ ಹೆಂಡತಿಯರಿಗೆ ಪೂರ್ಣ ಗೌರವವನ್ನು ನೀಡುತ್ತೇವೆ. ಆದರೆ ನೀವು (ಹಿಂದೂಗಳು) ಒಬ್ಬರನ್ನು ಮದುವೆಯಾಗುತ್ತೀರಿ ಮತ್ತು ತಲಾ ಮೂವರು ಗೆಳತಿಯರನ್ನು ಹೊಂದಿದ್ದೀರಿ. ನೀವು ನಿಮ್ಮ ಹೆಂಡತಿಯನ್ನು ಅಥವಾ ನಿಮ್ಮ ಗೆಳತಿಯನ್ನು ಗೌರವಿಸುವುದಿಲ್ಲ ಹೇಳಿದ್ದಾನೆ.
ಇದೇ ಸಮಯದಲ್ಲಿ, ಹಿಜಾಬ್ ವಿವಾದದ ಬಗ್ಗೆ ಮಾತನಾಡಿರುವ ಶೌಕತ್ ಅಲಿ, ದೇಶದಲ್ಲಿ ಯಾರು ಏನು ಧರಿಸಬೇಕು ಎಂಬುದನ್ನು ಸಂವಿಧಾನ ನಿರ್ಧರಿಸುತ್ತದೆ ಎಂದು ಹೇಳಿದರು. ಇಂತಹ ವಿಷಯಗಳನ್ನು ಎತ್ತುವ ಮೂಲಕ ಬಿಜೆಪಿ ದೇಶವನ್ನು ಒಡೆಯುವ ಕೆಲಸ ಮಾಡುತ್ತಿದೆ. ಶೌಕತ್ ಅಲಿ ಬಿಜೆಪಿಯನ್ನು ಗುರಿಯಾಗಿಸಿಕೊಂಡು, ಬಿಜೆಪಿ ದುರ್ಬಲವಾಗಿರುವಾಗ, ಅದು ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎತ್ತುತ್ತದೆ ಎಂದು ಹೇಳಿದರು. ಬಿಜೆಪಿ ಕೊಳಕು ರಾಜಕಾರಣ ಮಾಡುತ್ತಿದೆ ಎಂದು ಅವರು ಆರೋಪಿಸಿದರು.