ಕಾಸರಗೋಡು: ಅನಂತಪುರಂ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಅತಿ ದೊಡ್ಡ ವೈಶಿಷ್ಟ್ಯವಾದ ʻಬಬಿಯಾʼ ಮೊಸಳೆ ನಿನ್ನೆ ರಾತ್ರಿ ಕೊನೆಯುಸಿರೆಳೆದಿದೆ. ಬಬಿಯಾ ಕಳೆದ ಎರಡು ದಿನಗಳಿಂದ ಮೊಸಳೆ ನಾಪತ್ತೆಯಾಗಿತ್ತು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಬಂದ ಭಕ್ತರಿಗೆ ಬಬಿಯಾ ಮೊಸಳೆ ಯಾವತ್ತೂ ಕೂಡ ತೊಂದರೆ ನೀಡಿಲ್ಲ. 75 ವರ್ಷದ ಬಬಿಯಾ ಈ ಕೊಳದಲ್ಲಿ ವಾಸಿಸುತ್ತಿದೆ. ಈ ಮೊಸಳೆಯು ಕೊಳದಲ್ಲಿರುವ ಮೀನುಗಳನ್ನು ಸಹ ತಿನ್ನುತ್ತಿರಲಿಲ್ಲ. ಸಂಪೂರ್ಣ ಸಸ್ಯಾಹಾರಿಯಾಗಿರುವ ಬಬಿಯಾಗೆ ಅರ್ಚಕರು ದೇವರಿಗೆ ಅರ್ಪಿಸಿದ ನೈವೇದ್ಯ ನೀಡುತ್ತಾರೆ. ಅ=ಬಬಿಯಾ ಅದನ್ನೇ ತಿಂದು ಜೀವಿಸುತ್ತಿತ್ತು. ಹೀಗಾಗಿ ಇದು ಸಸ್ಯಾಹಾರಿ ಮೊಸಳೆ ಎಂದೇ ಪ್ರಖ್ಯಾತ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಈ ಮೊಸಳೆಯ ದರ್ಶನ ಪಡೆದೇ ಹೋಗುತ್ತಿದ್ದರು. ಇದರ ದರ್ಶನವನ್ನು ಭಕ್ತರು ಮಂಗಳಕರವೆಂದು ಪರಿಗಣಿಸುತ್ತಾರೆ.
ಕಾಲಕಾಲಕ್ಕೆ ಮೊಸಳೆಯು ಸರೋವರದ ಬಿಲದಿಂದ ದಡಕ್ಕೆ ಬಂದು ದೇಗುಲವನ್ನು ಪ್ರವೇಶಿಸುತ್ತಿತ್ತು. ಒಮ್ಮೆ ಬಬಿಯಾವನ್ನು ದೇಗುಲದ ಮುಂದೆ ‘ದರ್ಶನ’ ಮಾಡಿದ ದೇವಾಲಯದ ಅರ್ಚಕ ತನ್ನ ಮೊಬೈಲ್ ಫೋನ್ನಲ್ಲಿ ಅದನ್ನು ರೆಕಾರ್ಡ್ ಮಾಡಿದರು. ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
BIGG NEWS : ರಾಜ್ಯದ ಜನತೆಗೆ ನೆಮ್ಮದಿಯ ಸುದ್ದಿ : ಶೀಘ್ರವೇ ವಿದ್ಯುತ್ ದರ ಇಳಿಕೆ?
BIG NEWS : ರಾಜ್ಯದಲ್ಲಿ ʻಗೋಹತ್ಯೆ ನಿಷೇಧʼ ಕಾನೂನು ಜಾರಿಯಿಂದ 6,000 ಜಾನುವಾರುಗಳ ರಕ್ಷಣೆ: ಡೇಟಾ ವರದಿ