ಬೆಂಗಳೂರು: ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಜಂಬೂಸವಾರಿ ನೋಡುವುದಕ್ಕೆ ಜನರು ಕಾದು ಕುಳಿತಿದ್ದಾರೆ. ಇನ್ನು ದಸರಾ ಹಬ್ಬ ಸಂಭ್ರಮದಲ್ಲಿದ್ದ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದೆ. ದಸರಾ ಆಚರಣೆಯ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸರು ಉತ್ತರ, ಪೂರ್ವ, ಈಶಾನ್ಯ ಮತ್ತು ಕೇಂದ್ರ ಬೆಂಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ.
BIGG NEWS: ಬಿಬಿಎಂಪಿ ಮುಖ್ಯ ಆಯುಕ್ತರ ತುಷಾರ್ ಗಿರಿನಾಥ್ ಫೋಟೋ ದುರ್ಬಳಕೆ; ದೂರು ದಾಖಲು
ಅಕ್ಟೋಬರ್ 5 ರಂದು ಬೆಳಿಗ್ಗೆ 7 ರಿಂದ ಅಕ್ಟೋಬರ್ 6 ರಂದು ಮಧ್ಯಾಹ್ನ 12 ರವರೆಗೆ ಅವರು ನಿಷೇಧಿಸಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ತಮ್ಮ ಆದೇಶದಲ್ಲಿ ಉತ್ತರ ವಿಭಾಗದ ಆರ್.ಟಿ.ನಗರ, ಜೆ.ಸಿ.ನಗರ, ಸಂಜಯನಗರ ಮತ್ತು ಹೆಬ್ಬಾಳ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಪೂರ್ವ ವಿಭಾಗದಲ್ಲಿ ಭಾರತೀನಗರ, ಪುಲಕೇಶಿನಗರ, ಕೆ.ಜಿ.ಹಳ್ಳಿ, ಡಿಜೆ ಹಳ್ಳಿ ಮತ್ತು ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು.