ನೆಲ್ಲೂರು : ಸಾಮಾನ್ಯವಾಗಿ, ಹೆಚ್ಚಿನ ಜನರು ತಮ್ಮ ಮೊಬೈಲ್ ಫೋನ್ʼಗಳನ್ನ ಚಾರ್ಜ್ʼಗೆ ಹಾಕಿ ಕರೆಯಲ್ಲಿ ಮಾತನಾಡುತ್ತಾರೆ. ಈ ಕಾರಣದಿಂದಾಗಿ, ಹಲವು ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ. ಅನೇಕ ಸಾವಿಗೆ ಕಾರಣವಾಗಿದೆ. ಆದಾಗ್ಯೂ, ಫೋನ್ ಚಾರ್ಜ್ ಮಾಡುವುದು ನಿಜವಾಗಿಯೂ ಅಪಾಯಕಾರಿಯೇ ಎಂಬ ಬಗ್ಗೆ ಸರಿಯಾದ ಉತ್ತರವಿಲ್ಲ.ಯಾಕಂದ್ರೆ, ಈ ಮಟ್ಟದ ಅಪಾಯವು ವಿದ್ಯುತ್ ಪೂರೈಕೆಯಲ್ಲಿನ ಏರಿಳಿತಗಳನ್ನ ಅವಲಂಬಿಸಿರುತ್ತದೆ. ಅದಕ್ಕಾಗಿಯೇ ಎಚ್ಚರಿಕೆಯಿಂದಿರಲು ಫೋನ್ ಚಾರ್ಜ್ ಮಾಡುತ್ತಿರುವಾಗ ಮಾತನಾಡದಿರುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. ಆದಾಗ್ಯೂ, ಕೆಲವರು ಇದನ್ನ ನಿರ್ಲಕ್ಷಿಸುತ್ತಾರೆ ಮತ್ತು ಮೊಬೈಲ್ ಚಾರ್ಜಿಂಗ್ ಮಾಡುವಾಗ್ಲೇ ಮಾತನಾಡುತ್ತಾ ತಮ್ಮ ಪ್ರಾಣ ತೆಗೆದುಕೊಳ್ಳುತ್ತಾರೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ನೆಲ್ಲೂರು ಜಿಲ್ಲೆಯ ಸೀತಾರಾಮಪುರಂ ಮಂಡಲದ ಮುತ್ತೋಲಿನಗರದ ಎಸ್. ಸಾಲ್ಮನ್ ಮತ್ತು ಸುಲೋಚನಾ ದಂಪತಿಯ ಪುತ್ರ ಪ್ರವೀಣ್ ಕುಮಾರ್ (29) ಮಂಗಳವಾರ ಸಾವನ್ನಪ್ಪಿದ ದುರ್ದೈವಿ. ಅಂದ್ಹಾಗೆ, ಸಂಜೆ ಮಳೆ ಸುರಿಯುತ್ತಿದ್ದು, ಆತ ಮನೆಯಲ್ಲಿ ಸೆಲ್ ಫೋನ್ ಚಾರ್ಜ್ʼಗೆ ಹಾಕಿದ್ದಾನೆ. ಅಷ್ಟರಲ್ಲಿ, ಫೋನ್ ಬಂದಿದ್ದು, ಆತ ಚಾರ್ಜ್ ಮಾಡುತ್ಲೇ ಮಾತನಾಡುವ ಗುಡುಗು ಮತ್ತು ಮಿಂಚಿನಿಂದಾಗಿ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದಾನೆ. ಕುಟುಂಬ ಸದಸ್ಯರು ತಕ್ಷಣ ಯುವಕನ್ನ ಸೀತಾರಾಮಪುರಂ ಆಸ್ಪತ್ರೆಗೆ ಕರೆದ್ಯೊಯ್ದರಾದ್ರು, ವೈದ್ಯರು ಆತ ಸಾಪನ್ನಪ್ಪಿರುವುದಾಗಿ ತಿಳಿಸಿದ್ದಾರೆ.