ಹೈದ್ರಾಬಾದ್ ; ತೆಲಂಗಾಣದ ಅಮಾನತುಗೊಂಡ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿರುದ್ಧ ‘ಸರ್ ತಾನ್ ಸೆ ಜುದಾ (ಶಿರಚ್ಛೇದ)’ ಘೋಷಣೆ ಕೂಗಿದ್ದ ಹೈದರಾಬಾದ್ ಮೂಲದ ಪ್ರಭಾವಿ ಮತ್ತು ಸ್ವಯಂ ಘೋಷಿತ ಸಾಮಾಜಿಕ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಸೈಯದ್ ಅಬ್ದಾಹು ಕಶಾಫ್ನನ್ನ ಬಂಧಿಸಲಾಗಿದೆ.
ಸೈಯದ್ ಅಬ್ದಾಹು ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಉಪ ಪೊಲೀಸ್ ಆಯುಕ್ತರು (ಸೈಬರ್ ಅಪರಾಧ ವಿಭಾಗ) ತಿಳಿಸಿದ್ದಾರೆ.
ಅಂದ್ಹಾಗೆ, ಹೈದರಾಬಾದ್ನ ದಕ್ಷಿಣ ವಲಯದ ಡಿಸಿಪಿ ಕಚೇರಿಯ ಹೊರಗೆ ಟಿ.ರಾಜಾ ಸಿಂಗ್ ವಿರುದ್ಧ ಪ್ರತಿಭಟನೆ ಮುಂದುವರಿಸುವಂತೆ ಒತ್ತಾಯಿಸಿ ಸಯ್ಯದ್ ಅಬ್ದಾಹು ಕಶಾಫ್ ಸೋಮವಾರ ವೀಡಿಯೊವೊಂದನ್ನು ಪೋಸ್ಟ್ ಮಾಡಿ’ಸರ್ ತಾನ್ ಸೆ ಜುದಾ’ ಘೋಷಣೆಗಳನ್ನ ಕೂಗಿದ್ದ.