ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಅಕಾಲಿಕವಾಗಿ ಜನಿಸಿದ ಅವಳಿ ಶಿಶುಗಳು ತಾಯಿಯ ಮುಂದೆಯೇ ಕೊನೆಯುಸಿರೆಳೆದಿದ್ದಾರೆ.
ಏನಿದು ಘಟನೆ?
ಪಾಲ್ಘರ್ ಜಿಲ್ಲೆಯ ಮೊಖಾಡಾ ತಹಸಿಲ್ ನಿವಾಸಿ ವಂದನಾ ಬುಧರ್ ತನ್ನ ಮನೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ವಂದನಾಗೆ ಇನ್ನೂ ಏಳು ತಿಂಗಳ ಗರ್ಭಾವಸ್ಥೆಯಲ್ಲಿದ್ದರು. ಆದ್ರೆ, ಅವಧಿಗೂ ಮುನ್ನವೇ ಮಕ್ಕಳು ಜನಿಸಿದರು. ಶಿಶುಗಳು ದುರ್ಬಲವಾಗಿದ್ದವು ಮತ್ತು ಸರಿಯಾದ ವೈದ್ಯಕೀಯ ಆರೈಕೆಯ ಕೊರತೆಯಿಂದಾಗಿ ತಮ್ಮ ತಾಯಿಯ ಮುಂದೆ ಸಾವನ್ನಪ್ಪಿದವು.
ವಂದನಾಗೆ ಹೆರಿಗೆಯಾದ ನಂತರ ಭಾರೀ ರಕ್ತಸ್ರಾವವಾಗುತ್ತಿದ್ದಂತೆ ಕುಟುಂಬದ ಸದಸ್ಯರು ಆಕೆಯನ್ನು ಸುಮಾರು 3 ಕಿ.ಮೀ ವರೆಗೆ ಕಲ್ಲಿನ ಭೂಪ್ರದೇಶದಲ್ಲಿ ಹಾದು ಹೋಗುವ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ. ವಂದನಾ ವಾಸವಿದ್ದ ಪ್ರದೇಶದಲ್ಲಿ ರಸ್ತೆ ಹಾಗೂ ಸಾರಿಗೆ ಸಂಪರ್ಕವಿಲ್ಲ. ನವಜಾತ ಶಿಶುಗಳನ್ನು ಕಳೆದುಕೊಂಡ ತಾಯಿಯನ್ನು ಉಳಿಸಲು ನಿರ್ಧರಿಸಿದ ಕುಟುಂಬಸ್ಥರು ಹಗ್ಗ, ಬೆಡ್ಶೀಟ್ ಮತ್ತು ಮರವನ್ನು ಬಳಸಿ ತಾತ್ಕಾಲಿಕ ಸ್ಟ್ರೆಚರ್ ಅನ್ನು ನಿರ್ಮಿಸಿ ಹೊತ್ತೊಯ್ದರು. ಇದೀಗ
ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಹಾರಾಷ್ಟ್ರದ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಭಾಗವಾಗಿರುವ ಬಿಜೆಪಿಯ ರಾಜ್ಯ ಉಪಾಧ್ಯಕ್ಷೆ ಚಿತ್ರಾ ಕಿಶೋರ್ ವಾಘ್ ಘಟನೆಯನ್ನು “ತುಂಬಾ ನೋವಿನ ಸಂಗತಿ” ಎಂದು ಬಣ್ಣಿಸಿದ್ದಾರೆ. “ಸಕಾಲದಲ್ಲಿ ಆರೋಗ್ಯ ಸೇವೆ ಲಭ್ಯವಾಗದ ಕಾರಣ ಬುಧಾರ್ ಅವರ ಅವಳಿ ಮಕ್ಕಳು ಸಾವನ್ನಪ್ಪಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
पालघर जिल्हा मोखाड्यातील अतिदुर्गम बोटोशी गावातील मरकटवाडी येथील वंदना बुधर या गर्भवती महिलेला आरोग्य सेवा मिळवण्यासाठी 3km डोलीतून पायपीट करत दवाखाना गाठावा लागला
यावेळी वेळेत आरोग्य सेवा उपलब्ध न झाल्याने बुधर यांच्या जुळ्या बालकांचा मृत्यू झाला हि घटना अतीव वेदनादायी आहे..१/२— Chitra Kishor Wagh (@ChitraKWagh) August 16, 2022
ರಾಜ್ಯದ ಹಲವೆಡೆ ರಸ್ತೆಗಳು ಲಭ್ಯವಿಲ್ಲದ ಕಾರಣ ಇಂತಹ ಹಲವು ಘಟನೆಗಳು ನಡೆಯುತ್ತಿವೆ ಎಂದು ಹೇಳಿದ ಬಿಜೆಪಿ ನಾಯಕ, ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ಗೆ ವಿಷಯ ತಿಳಿಸಿದ್ದಾರೆ.
BREAKING NEWS: ಬೆಚ್ಚಿಬಿದ್ದ ಬೆಂಗಳೂರು ಪೊಲೀಸರು: ‘ರೌಡಿ ಶೀಟರ್’ನಿಂದ ‘ಮಹಿಳಾ ಹೆಚ್ ಕಾನ್ ಸ್ಟೇಬಲ್’ಗೆ ಚಾಕು ಇರಿತ
Big news: ಸಾಕುನಾಯಿಗೂ ʻಮಂಕಿಪಾಕ್ಸ್ʼ ವೈರಸ್ ಹರಡುವ ಸಾಧ್ಯತೆ ಹೆಚ್ಚು: ವೈದ್ಯರ ವರದಿ
BREAKING NEWS: ಬೆಚ್ಚಿಬಿದ್ದ ಬೆಂಗಳೂರು ಪೊಲೀಸರು: ‘ರೌಡಿ ಶೀಟರ್’ನಿಂದ ‘ಮಹಿಳಾ ಹೆಚ್ ಕಾನ್ ಸ್ಟೇಬಲ್’ಗೆ ಚಾಕು ಇರಿತ