ಜಮ್ಮು: ಇಂದು ಬೆಳಗ್ಗೆ ಜಮ್ಮುವಿನ ಹೊರವಲಯದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರರನ್ನು ಸೇನೆ ಹೊಡೆದುರುಳಿಸಿತ್ತು.
ಇದೇ ವೇಳೆ ಉಗ್ರರರಿಂದ 7 ಎಕೆ -47 ರೈಫಲ್ಗಳು, ಒಂದು ಯುಎಸ್ ನಿರ್ಮಿತ ಎಂ4 ರೈಫಲ್, ಮೂರು ಪಿಸ್ತೂಲ್ಗಳು ಮತ್ತು ಗ್ರೆನೇಡ್ಗಳು ಸೇರಿದಂತೆ ಭಾರಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Jammu | Arms and ammunition recovered by security forces in today's encounter at Sidhra in which four terrorists were killed pic.twitter.com/QlPi2SbGtM
— ANI (@ANI) December 28, 2022
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಉದ್ದಕ್ಕೂ ಸಿದ್ರಾ ಬೈಪಾಸ್ ಪ್ರದೇಶದ ತಾವಿ ಸೇತುವೆಯ ಬಳಿ ಬೆಳಿಗ್ಗೆ 7 ಗಂಟೆಗೆ ಗುಂಡಿನ ಚಕಮಕಿ ಪ್ರಾರಂಭವಾಯಿತು. ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದರು. ಪ್ರತೀಕಾರವಾಗಿ ಸೇನೆ ಗುಂಡಿನ ದಾಳಿ ನಡೆಸಿ ಎಲ್ಲಾ ಭಯೋತ್ಪಾದಕರು ಹತ್ಯೆಗೈದಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.
ಪೊಲೀಸರ ಪ್ರಕಾರ, ಹತರಾದ ನಾಲ್ವರು ಉಗ್ರರು ಪಾಕಿಸ್ತಾನದಿಂದ ನುಸುಳಿ ಕಾಶ್ಮೀರಕ್ಕೆ ಬಂದವರು ಎಂದು ಶಂಕಿಸಿದ್ದಾರೆ.
BIGG NEWS : ದೇಶದ ‘GDP’ಗೆ ಯೂಟ್ಯೂಬರ್ಸ್ ಕೊಡುಗೆ ; ₹10,000 ಕೋಟಿ ಆದಾಯ
BIGG NEWS : ಪ್ರಧಾನಿ ಮೋದಿ ತಾಯಿ ಆದಷ್ಟು ಬೇಗ ಚೇತರಿಸಿಕೊಳ್ಳಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾರೈಕೆ