Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಗಮನಿಸಿ : ರಾಜ್ಯದಲ್ಲಿ ‘ವಿವಾಹ ನೋಂದಣಿ’ ಇನ್ನೂ ಸರಳ : ಕುಳಿತಲ್ಲೇ ಹೀಗೆ ಅರ್ಜಿ ಸಲ್ಲಿಸಿ ‘ಸರ್ಟಿಫಿಕೇಟ್’ ಪಡೆಯಿರಿ

30/11/2025 5:37 AM

ಗ್ರಾಹಕರೇ ಗಮನಿಸಿ : ಡಿ.05ರಂದು `ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ’ ಮಾಡಲು ವಿಶೇಷ ಶಿಬಿರ.!

30/11/2025 5:35 AM

BIG NEWS : ವರದಕ್ಷಿಣೆಯಿಂದ `ಮದುವೆಯ ಪಾವಿತ್ರ್ಯ’ ನಾಶವಾಗುತ್ತಿದೆ : ಸುಪ್ರೀಂಕೋರ್ಟ್

30/11/2025 5:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಬೆಂಗಳೂರಲ್ಲಿ ‘HMT ವಶ’ದಲ್ಲಿದ್ದ ‘5 ಎಕರೆ ಅರಣ್ಯ ಭೂಮಿ’ಯನ್ನು ‘ಅರಣ್ಯ ಇಲಾಖೆ’ ಮರುವಶ
KARNATAKA

BREAKING: ಬೆಂಗಳೂರಲ್ಲಿ ‘HMT ವಶ’ದಲ್ಲಿದ್ದ ‘5 ಎಕರೆ ಅರಣ್ಯ ಭೂಮಿ’ಯನ್ನು ‘ಅರಣ್ಯ ಇಲಾಖೆ’ ಮರುವಶ

By kannadanewsnow0925/10/2024 6:14 PM

ಬೆಂಗಳೂರು : ಎಚ್ಎಂಟಿ ವಶದಲ್ಲಿರುವ ಪೀಣ್ಯ ಪ್ಲಾಂಟೇಷನ್ ನ 599 ಎಕರೆ ಅರಣ್ಯದ ಪೈಕಿ ಅರಣ್ಯ ಸ್ವರೂಪದ ಮತ್ತು 5 ಎಕರೆ ಖಾಲಿ ಜಮೀನು ವಶಕ್ಕೆ ಪಡೆದು ಬೃಹತ್ ಉದ್ಯಾನ ನಿರ್ಮಿಸುವ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಆಶಯಕ್ಕೆ ಅಧಿಕಾರಿಗಳು ಇಂದು ಬಲ ನೀಡಿದ್ದಾರೆ.

ಎಚ್ಎಂಟಿ ವಶದಲ್ಲಿದ್ದ ಪೀಣ್ಯ- ಜಾಲಹಳ್ಳಿ ಸರ್ವೆ ನಂ. 1ರಲ್ಲಿ ಇಂದು ಜೆಸಿಬಿಯೊಂದಿಗೆ ಕಾರ್ಯಾಚರಣೆಗೆ ಇಳಿದ ಅರಣ್ಯ ಇಲಾಖೆ ಬೆಂಗಳೂರು ನಗರ ವಲಯದ ಅಧಿಕಾರಿಗಳು 5 ಎಕರೆ ಖಾಲಿ ಜಮೀನನ್ನು ಮರುವಶಕ್ಕೆ ಪಡೆದಿದ್ದು ಅಲ್ಲಿ ಕರ್ನಾಟಕ ಅರಣ್ಯ ಇಲಾಖೆ ಫಲಕವನ್ನು ನೆಟ್ಟು ತಮ್ಮ ಹಕ್ಕು ಪ್ರತಿಪಾದಿಸಿದ್ದಾರೆ.

1896 ಮೇ 29ರ ಸರ್ಕಾರದ ಅಧಿಸೂಚನೆ ಸಂಖ್ಯೆ 10407, ಎಫ್.ಟಿ.ಎಫ್. 153-95 ಮತ್ತು 1901ರ ಜನವರಿ 7ರ ಅಧಿಸೂಚನೆ ಸಂಖ್ಯೆ 422-ಎಫ್.ಟಿ.ಎಫ್.-15-1900ರ ರೀತ್ಯ ಪೀಣ್ಯ, ಜಾಲಹಳ್ಳಿ ಪ್ಲಾಂಟೇಷನ್ ನಲ್ಲಿರುವ 599 ಎಕರೆ ಜಮೀನು ಅರಣ್ಯವಾಗಿರುತ್ತದೆ. ಅರಣ್ಯೇತರ ಉದ್ದೇಶಕ್ಕೆ ಭೂಪರಿವರ್ತನೆ ಆಗದ ಈ ಜಮೀನು once a forest is always a forest ಎಂಬ ಸುಪ್ರೀಂಕೋರ್ಟ್ ಅಭಿಪ್ರಾಯದಂತೆ ಅರಣ್ಯವೇ ಆಗಿದೆ ಎಂದು ಈಶ್ವರ ಖಂಡ್ರೆ ಪ್ರತಿಪಾದಿಸಿದ್ದರು.

ಸದರಿ ಜಮೀನು ಅರಣ್ಯ ಸ್ವರೂಪ ಕಳೆದುಕೊಂಡಿದೆ ಎಂದು ಡಿನೋಟಿಫಿಕೇಷನ್ ಗೆ ಅನುಮತಿ ಕೋರಿ ಅರಣ್ಯಾಧಿಕಾರಿಗಳು ನಿಯಮಬಾಹಿರವಾಗಿ ಸಲ್ಲಿಸಿದ್ದ ಇಂಟರ್ ಲೊಕೇಟರಿ ಅಪ್ಲಿಕೇಶನ್ (ಐ.ಎ.) ಹಿಂಪಡೆಯಲೂ ಸೂಚನೆ ನೀಡಿದ್ದರು.

ಈ ಮಧ್ಯೆ ಎಚ್ಎಂಟಿ ತನ್ನ ವಶದಲ್ಲಿದ್ದ ಅರಣ್ಯ ಭೂಮಿಯ ಪೈಕಿ 165ಕ್ಕೂ ಹೆಚ್ಚು ಎಕರೆ ಜಮೀನನ್ನು ಕೇವಲ 300 ಕೋಟಿ ರೂಪಾಯಿಗಳಿಗೆ ಖಾಸಗಿ ಮತ್ತು ಸರ್ಕಾರದ ವಿವಿಧ ಸಂಸ್ಥೆಗಳಿಗೆ ಮಾರಾಟ ಮಾಡಿತ್ತು.

ಈ ಭೂಮಿಯನ್ನು ವಶಕ್ಕೆ ಪಡೆದು ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತಹ ಬೃಹತ್ ಉದ್ಯಾನ ಇಲ್ಲದ ಉತ್ತರ ಬೆಂಗಳೂರಿನಲ್ಲಿ ವೃಕ್ಷೋದ್ಯಾನ ನಿರ್ಮಿಸಿ ಆ ಭಾಗದ ಬೆಂಗಳೂರಿಗರಿಗೆ ಅತ್ಯುತ್ತಮ ಶ್ವಾಸತಾಣ ಮಾಡುವ ಆಶಯವನ್ನು ಈಶ್ವರ ಖಂಡ್ರೆ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಇಂದು ಅಧಿಕಾರಿಗಳು ಪ್ರಥಮ ಹೆಜ್ಜೆ ಇಟ್ಟಿದ್ದಾರೆ.

BIG NEWS: ಬೆಂಗಳೂರಲ್ಲಿ ಡ್ರೋನ್ ಮೂಲಕ ನಿರ್ಮಾಣ ಹಂತದ ಕಟ್ಟಡಗಳ ಸಮೀಕ್ಷೆ: ಡಿಸಿಎಂ ಡಿ.ಕೆ ಶಿವಕುಮಾರ್

JOB ALERT: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಸಿಹಿಸುದ್ದಿ: ರಾಜ್ಯ ಸರ್ಕಾರದಿಂದ 4,115 ನೇಮಕಾತಿಗೆ ಗ್ರೀನ್ ಸಿಗ್ನಲ್ | Karnataka Police Recruitment 2024

Share. Facebook Twitter LinkedIn WhatsApp Email

Related Posts

ಗಮನಿಸಿ : ರಾಜ್ಯದಲ್ಲಿ ‘ವಿವಾಹ ನೋಂದಣಿ’ ಇನ್ನೂ ಸರಳ : ಕುಳಿತಲ್ಲೇ ಹೀಗೆ ಅರ್ಜಿ ಸಲ್ಲಿಸಿ ‘ಸರ್ಟಿಫಿಕೇಟ್’ ಪಡೆಯಿರಿ

30/11/2025 5:37 AM2 Mins Read

ಗ್ರಾಹಕರೇ ಗಮನಿಸಿ : ಡಿ.05ರಂದು `ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ’ ಮಾಡಲು ವಿಶೇಷ ಶಿಬಿರ.!

30/11/2025 5:35 AM1 Min Read

ಸಾರ್ವಜನಿಕರೇ ಗಮನಿಸಿ : `ಹೃದಯಾಘಾತ’ದ ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ಈ `ಔಷಧಿ’ಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ.!

30/11/2025 5:31 AM2 Mins Read
Recent News

ಗಮನಿಸಿ : ರಾಜ್ಯದಲ್ಲಿ ‘ವಿವಾಹ ನೋಂದಣಿ’ ಇನ್ನೂ ಸರಳ : ಕುಳಿತಲ್ಲೇ ಹೀಗೆ ಅರ್ಜಿ ಸಲ್ಲಿಸಿ ‘ಸರ್ಟಿಫಿಕೇಟ್’ ಪಡೆಯಿರಿ

30/11/2025 5:37 AM

ಗ್ರಾಹಕರೇ ಗಮನಿಸಿ : ಡಿ.05ರಂದು `ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ’ ಮಾಡಲು ವಿಶೇಷ ಶಿಬಿರ.!

30/11/2025 5:35 AM

BIG NEWS : ವರದಕ್ಷಿಣೆಯಿಂದ `ಮದುವೆಯ ಪಾವಿತ್ರ್ಯ’ ನಾಶವಾಗುತ್ತಿದೆ : ಸುಪ್ರೀಂಕೋರ್ಟ್

30/11/2025 5:33 AM

ಸಾರ್ವಜನಿಕರೇ ಗಮನಿಸಿ : `ಹೃದಯಾಘಾತ’ದ ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ಈ `ಔಷಧಿ’ಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ.!

30/11/2025 5:31 AM
State News
KARNATAKA

ಗಮನಿಸಿ : ರಾಜ್ಯದಲ್ಲಿ ‘ವಿವಾಹ ನೋಂದಣಿ’ ಇನ್ನೂ ಸರಳ : ಕುಳಿತಲ್ಲೇ ಹೀಗೆ ಅರ್ಜಿ ಸಲ್ಲಿಸಿ ‘ಸರ್ಟಿಫಿಕೇಟ್’ ಪಡೆಯಿರಿ

By kannadanewsnow5730/11/2025 5:37 AM KARNATAKA 2 Mins Read

ಬೆಂಗಳೂರು: ರಾಜ್ಯದಲ್ಲಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಕ ವಿವಾಹ ನೋಂದಣಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸೋ ಪ್ರಕ್ರಿಯೆ…

ಗ್ರಾಹಕರೇ ಗಮನಿಸಿ : ಡಿ.05ರಂದು `ವಾರಸುದಾರರಿಲ್ಲದ ಬ್ಯಾಂಕ್ ಠೇವಣಿಗಳ ವಸೂಲಿ’ ಮಾಡಲು ವಿಶೇಷ ಶಿಬಿರ.!

30/11/2025 5:35 AM

ಸಾರ್ವಜನಿಕರೇ ಗಮನಿಸಿ : `ಹೃದಯಾಘಾತ’ದ ಸಂದರ್ಭದಲ್ಲಿ ನಿಮ್ಮನ್ನ ರಕ್ಷಿಸುವ ಈ `ಔಷಧಿ’ಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ.!

30/11/2025 5:31 AM

ಸಾರ್ವಜನಿಕರೇ ಗಮನಿಸಿ : `ಜಾತಿ & ಆದಾಯ ದೃಢೀಕರಣ ಪತ್ರ’ಕ್ಕೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

30/11/2025 5:25 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.