ಫರಿದಾಬಾದ್ (ಹರಿಯಾಣ): ತಮ್ಮಲ್ಲಿರುವ ಬದ್ಧತೆಯಲ್ಲಿ ಪರೀಕ್ಷಿಸುವ ಪ್ರಯತ್ನದಲ್ಲಿ ಮೂವರು ಸ್ನೇಹಿತರು ಕಾಲುವೆಗೆ ಹಾರಿದೆ ವಿಲಕ್ಷಣ ಘಟನೆ ಫರಿದಾಬಾದ್ನಲ್ಲಿ ನಡೆದಿದೆ. ಘಟನೆಯಲ್ಲಿ ಸ್ಥಳೀಯರು ಓರ್ವನನ್ನು ರಕ್ಷಿಸಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದೆ.
ಮೂವರು ಪಾನಮತ್ತರಾಗಿ ಕಾಲುವೆಗೆ ಹಾರಿದ್ದು, ಘಟನೆಗೆ ಮುನ್ನ ಮದ್ಯಪಾನ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ತಿಳಿಸಿದ್ದರು ಎಂದು ಪಲ್ಲಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಯೋಗೇಶ್ ಕುಮಾರ್ ತಿಳಿಸಿದ್ದಾರೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನ್ ಲೈನ್ ಅರ್ಜಿ ಆಹ್ವಾನ
ಕಾಲುವೆಗೆ ಹಾರುವ ಮೊದಲು ಅವರೆಲ್ಲರೂ ತಮ್ಮ ಬಟ್ಟೆಗಳನ್ನು ತೆಗೆದು ತಮ್ಮ ಮೊಬೈಲ್ ಫೋನ್ಗಳೊಂದಿಗೆ ಪಕ್ಕಕ್ಕೆ ಇರಿಸಿದ್ದರು. ಮೂವರು ಪರಸ್ಪರ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲು ಈ ರೀತಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ವಿಚಿತ್ರ ಯೋಚನೆ ಮಾಡಿದರವನ್ನು ಸರಸ್ವತಿ ಕಾಲೋನಿ ನಿವಾಸಿ ಅಮಿತ್ ಗುಪ್ತಾ (24), ಶ್ಯಾಮ್ ಕಾಲೋನಿಯ ನಿವಾಸಿಗಳಾದ ಮೋನು (26) ಮತ್ತು ಸಂಜೀವ್ ಅಲಿಯಾಸ್ ವಿರಾಟ್ (28) ಎಂದು ಗುರುತಿಸಲಾಗಿದ್ದು, ಆಪತ್ತೆಯಾಗರುವ ಮೋನು ಮತ್ತುಸಂಜೀವ್ಗಾಗಿ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್) ತಂಡ ಹುಡುಕಾಟ ನಡೆಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.