ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ರಂಗಾಪುರ ಗ್ರಾಮದಲ್ಲಿ ಒಂದೇ ದಿನ ಮಕ್ಕಳು ಸೇರಿದಂತೆ 10 ಮಂದಿಗೆ ಹುಚ್ಚುನಾಯಿ ಕಚ್ಚಿದ ದುರಂತ ಘಟನೆ ಬೆಳಕಿಗೆ ಬಂದಿದೆ
ಸುಜಾತ ಮಲ್ಲಾಪೂರ (4), ಶಿವಕುಮಾರ ಮಲ್ಲಾಪೂರ (11), ಶಿವಕುಮಾರ ಕಡಿವಾಲ (15), ಗಿರಿಯಪ್ಪ ನೆಲ್ಲೂರು (62), ಶರಣಪ್ಪ ಮಲ್ಲಾಪೂರ (54) ಸೇರಿದಂತೆ ಗಂಭೀರ ಗೊಂಡಿದ್ದಾರೆ. ಗಾಯಗೊಂಡ ಸುಜಾತ ಮಲ್ಲಾಪೂರ ಹಾಗೂ ಶಿವಕುಮಾರ ಮಲ್ಲಾಪೂರ ಎಂಬವರು ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರರಿಗೆ ಹನುಮನಾಳ ಆಸ್ಪತ್ರೆ ಹಾಗೂ ಇನ್ನೂ ಕೆಲವರಿಗೆ ಬಾದಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಯಿಗಳ ಹಾವಳಿ ತಪ್ಪಿಸೋದಕ್ಕೆ ಕೊಪ್ಪಳ ಜಿಲ್ಲೆಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ