Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಆಟೋ-ಸೆಟಲ್ಮೆಂಟ್’ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿದ EPFO’

25/06/2025 6:55 AM

SHOCKING : ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ : ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ ಪೋಷಕರು.!

25/06/2025 6:50 AM

Big News: ಇರಾನ್ ವಿರುದ್ಧ ಐತಿಹಾಸಿಕ ಗೆಲುವು ಘೋಷಿಸಿದ ನೆತನ್ಯಾಹು

25/06/2025 6:41 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಹುಪಯೋಗಿ ಹಲಸಿನ ಹಣ್ಣಿನ ತೊಳೆಗಳ ಸಂರಕ್ಷಣೆಗೆ ತಂತ್ರಜ್ಞಾನ ಅಭಿವೃದ್ಧಿ
INDIA

ಬಹುಪಯೋಗಿ ಹಲಸಿನ ಹಣ್ಣಿನ ತೊಳೆಗಳ ಸಂರಕ್ಷಣೆಗೆ ತಂತ್ರಜ್ಞಾನ ಅಭಿವೃದ್ಧಿ

By KNN IT Team23/01/2024 5:36 PM

ಹಲಸಿನ ಹಣ್ಣು ಮತ್ತದರ ಉತ್ಪನ್ನಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಅವುಗಳನ್ನು ಬಿಡಿಸುವ ಜಂಜಾಟಕ್ಕೆ ತುಸು ಕಿರಿಕಿರಿ ಎನಿಸಿ ಹಣ್ಣಿನಿಂದ ದೂರವುಳಿಯುತ್ತಾರೆ. ಈ ಸಮಸ್ಯೆಗೆ ಮುಕ್ತಿ ನೀಡಲು ನಗರದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೇಯಿಸಲು ಸಿದ್ಧವಾದ ಹಸಿ ಹಲಸಿನ ತೊಳೆಗಳ ಶೇಖರಣಾ ತಂತ್ರ ಜ್ಞಾನ’ವನ್ನು ಇತ್ತೀಚೆಗೆ ಸಂಶೋಧನೆ ನಡೆಸಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಹಲಸಿನ ಕಾಯಿ ಮತ್ತು ಹಣ್ಣಿನ ಋತುವಿನಲ್ಲಿ ಚಿಪ್ಸ್‌, ಹಪ್ಪಳ, ಹೋಳಿಗೆ, ಕಡುಬು, ಐಸ್‌ಕ್ರೀಂ, ದೋಸೆ ಹೀಗೆ ಹಲವು ವಿಧದ ತಿನಿಸುಗಳನ್ನು ತಯಾರಿಸುತ್ತಾರೆ. ಅಲ್ಲದೇ, ಹಲಸನ್ನು ತರಕಾರಿಯಾಗಿಯೂ ಬಳಸುತ್ತಿದ್ದು, ದೀರ್ಘಾವಧಿ ಬಳಕೆಗಾಗಿ ಉಪ್ಪು ಹಾಕಿ ಇಡುತ್ತಾರೆ. ಆದರೆ, ಇದರ ಕಾಲಾವಧಿ 3 ರಿಂದ 4 ತಿಂಗಳು ಮಾತ್ರ. ಅಷ್ಟರಲ್ಲೇ ಆ ಹಣ್ಣು ಕಂದು ಬಣ್ಣಕ್ಕೆ ತಿರುಗುತ್ತದೆ. ನಂತರ ಬಳಕೆಗೆ ಸಾಧ್ಯವಾಗುವುದಿಲ್ಲವಾಗಿದೆ.

ಕರ್ನಾಟಕದಲ್ಲಲ್ಲದೇ, ಹಸಿ ಹಲಸಿನ ಕಾಯಿಯನ್ನು ಪಾಶ್ಚಿಮಾತ್ಯ ದೇಶಗಳಲ್ಲಿ ಮಾಂಸದ ಬದಲಿಯಾಗಿ (ಸಸ್ಯ ಮಾಂಸ) ಬಳಸುತ್ತಾರೆ. ಪ್ರಸ್ತುತ, 1.98 ಮಿಲಿಯನ್‌ ಟನ್‌ ನಷ್ಟು ದೇಶದಲ್ಲಿ ಉತ್ಪಾದಿಸಿದರೆ, ಕಳೆದ ವರ್ಷ ಕರ್ನಾಟಕವೊಂದರಿಂದಲೇ 800 ಟನ್‌ಗಳಷ್ಟು ತಾಜಾ ಹಸಿ ಹಲಸು ರಫ್ತು ಮಾಡಲಾಗಿದೆ. ಬಾಂಗ್ಲಾದೇಶ ಮತ್ತು ಥಾಯ್ಲೆಂಡ್‌ ದೇಶಗಳು ಪ್ರಮುಖ ಪಾಲುದಾರರು. ಆದ್ದರಿಂದ ಈ ಹಣ್ಣಿಗೆ ವಿದೇಶಿ ಮಾರುಕಟ್ಟೆಯಲ್ಲಿಯೂ ಬೇಡಿಕೆ ಹೆಚ್ಚಿದೆ. ಆದರೆ, ಹಸಿ ಹಲಸಿನ ಕಾಯಿ ಲಭ್ಯತೆಯು ಸೀಮಿತವಾಗಿದ್ದು, ಕೆಲವು ದಿನಗಳಲ್ಲಿ ಆ ಹಣ್ಣು ಕಂದು ಬಣ್ಣಕ್ಕೆ ತಿರುಗುವುದೇ ಬಳಕೆಯ ಪ್ರಮುಖ ಸಮಸ್ಯೆಯಾಗಿತ್ತು. ಇದನ್ನರಿತ ಐಐಎಚ್‌ಆರ್‌ ವಿಜ್ಞಾನಿಯೊಬ್ಬರು “ಬೇಯಿಸಲು ಸಿದ್ಧವಾದ ಹಸಿ ಹಲಸಿನ ತೊಳೆಗಳ ಶೇಖರಣಾ ತಂತ್ರಜ್ಞಾನ’ವನ್ನು ಅಭಿವೃದ್ಧಿಪಡಿಸಿದರು. ಈ ತಂತ್ರಜ್ಞಾನದಿಂದ ಬೇಯಿಸಲು ಸಿದ್ಧವಾದ ಉತ್ಪನ್ನದಲ್ಲಿ ಯಾವುದೇ ಬದಲಾವಣೆಯಿಲ್ಲದೇ ಸುಮಾರು 18 ತಿಂಗಳುಗಳಿಗಿಂತ ಹೆಚ್ಚಿನ ಕಾಲ ಬಳಸಬಹುದಾಗಿದೆ. ಈ 18 ತಿಂಗಳುಗಳಲ್ಲಿ ಯಾವುದೇ ಸಮಯದಲ್ಲಿ ಅದನ್ನು ಹೊರ ತೆಗೆಯಬಹುದು, ಯಾವುದೇ ಉತ್ಪನ್ನಕ್ಕೆ ಅಡುಗೆ ಮಾಡಲು ಅಥವಾ ಸಂಸ್ಕರಿಸಲು ಬಳಸಬಹುದು. ಕಂದುಬಣ್ಣವನ್ನು ತಡೆಗಟ್ಟಲು. ಸಂಗ್ರಹಣೆ ಜೀವಿತಾವಧಿಯನ್ನು ವಿಸ್ತರಿಸಲು ಈ ಪ್ರಕ್ರಿಯೆ ಅಥವಾ ತಂತ್ರಜ್ಞಾನವು ರೈತರಿಗೆ ಮತ್ತು ವ್ಯಾಪಾರಿಗಳಿಗೆ ವರದಾನವಾಗಿದ್ದು, ಈ ತಂತ್ರಜ್ಞಾನವನ್ನು ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರವು ಮೊದಲ, ದ್ವಿತೀಯ ಹಂತದಲ್ಲಿ ಸಂರಕ್ಷಣೆಯ ಅನುಮೋದನೆ ನೀಡಿದೆ. ಹಲಸಿನ ಹಣ್ಣಿನಿಂದ ತಿನಿಸು ಮಾತ್ರವಲ್ಲದೆ, ಉತ್ತರ ಭಾರತ ಮತ್ತು ದಕ್ಷಿಣ ಭಾರತದ ಕೆಲ ಭಾಗಗಳಲ್ಲಿ ಹಲಸಿನ ಸಾಂಬಾರು ಸವಿಯಾದ ಪದಾರ್ಥ. ಕೋವಿಡ್‌ ನಂತರ ಬಹುತೇಕ ರಾಷ್ಟ್ರಗಳು ಸಿದ್ಧ ಆಹಾರ ಮತ್ತು ತ್ವರಿತ ಊಟದ ವ್ಯವಸ್ಥೆ ಅಳವಡಿಸಿಕೊಂಡಿವೆ. ಈ ತಂತ್ರಜ್ಞಾನವು ಇನ್‌ ಸ್ಟೆಂಟ್‌ ಹಲಸಿನ ಪ್ಯಾಕ್‌ ಹೊಂದಿದ್ದು, ಸೇವಿಸುವ ಮೊದಲು, ಪ್ಯಾಕೆಟಿನ್ನು 5 ರಿಂದ 8 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ಅದ್ದಿ ಮತ್ತು ನಂತರ ಅದನ್ನು ಕತ್ತರಿಸಿ ನೇರವಾಗಿ ಅನ್ನ ,ಚಪಾತಿ ಅಥವಾ ರೊಟ್ಟಿ ಜತೆ ಸೇವಿಸಬಹುದು. ಇದು ಮಾರುಕಟ್ಟೆಯಲ್ಲಿ ಬಹಳ ಸೀಮಿತ ಉಪಸ್ಥಿತಿಯನ್ನು ಹೊಂದಿರುವ ನವೀನ ಉತ್ಪನ್ನವಾಗಿದೆಯಾಗಿದೆ.

Share. Facebook Twitter LinkedIn WhatsApp Email

Related Posts

ಆಟೋ-ಸೆಟಲ್ಮೆಂಟ್’ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿದ EPFO’

25/06/2025 6:55 AM1 Min Read

Big News: ಇರಾನ್ ವಿರುದ್ಧ ಐತಿಹಾಸಿಕ ಗೆಲುವು ಘೋಷಿಸಿದ ನೆತನ್ಯಾಹು

25/06/2025 6:41 AM1 Min Read

ಎಟಿಎಂಗಳಲ್ಲಿ ಪಿಎಫ್ ಠೇವಣಿ ಪಡೆಯಲು ಅವಕಾಶ: ಸಚಿವ ಮನ್ಸುಖ್ ಮಾಂಡವಿಯಾ

25/06/2025 6:34 AM1 Min Read
Recent News

ಆಟೋ-ಸೆಟಲ್ಮೆಂಟ್’ ಮಿತಿಯನ್ನು 5 ಲಕ್ಷ ರೂ.ಗೆ ಹೆಚ್ಚಿಸಿದ EPFO’

25/06/2025 6:55 AM

SHOCKING : ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ : ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ ಪೋಷಕರು.!

25/06/2025 6:50 AM

Big News: ಇರಾನ್ ವಿರುದ್ಧ ಐತಿಹಾಸಿಕ ಗೆಲುವು ಘೋಷಿಸಿದ ನೆತನ್ಯಾಹು

25/06/2025 6:41 AM

SHOCKING : ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ `ಹೃದಯಾಘಾತ’ದಿಂದ ಸಾವು.!

25/06/2025 6:40 AM
State News
KARNATAKA

SHOCKING : ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ : ಮಕ್ಕಳನ್ನು ಬೇರೆ ಶಾಲೆಗೆ ಸೇರಿಸಿದ ಪೋಷಕರು.!

By kannadanewsnow5725/06/2025 6:50 AM KARNATAKA 1 Min Read

ಚಾಮರಾಜನಗರ : ಮುಖ್ಯ ಅಡಿಗೆ ಸಿಬ್ಬಂದಿಯಾಗಿ ದಲಿತ ಮಹಿಳೆ ನೇಮಕ ಹಿನ್ನೆಲೆಯಲ್ಲಿ, ಪೋಷಕರು ಟಿಸಿ ಪಡೆದು ಬೇರೆ ಶಾಲೆಗೆ ಸೇರಿಸಿರುವ…

SHOCKING : ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ `ಹೃದಯಾಘಾತ’ದಿಂದ ಸಾವು.!

25/06/2025 6:40 AM

BREAKING : ರಾಜ್ಯದಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಕೃತ್ಯ : ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರ ಬರ್ಬರ ಹತ್ಯೆ

25/06/2025 6:35 AM

BIG NEWS : `GDP’ಯಲ್ಲಿ ದೇಶದಲ್ಲೇ ಕರ್ನಾಟಕ 3ನೇ ಸ್ಥಾನದಲ್ಲಿದೆ : CM ಸಿದ್ದರಾಮಯ್ಯ

25/06/2025 6:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.