ಮಂಡ್ಯ : ಚಿಕ್ಕಬಳ್ಳಾಪುರದಲ್ಲಿ ಇಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಕಾಂಗ್ರೆಸ್ ನೀಡಿದ ಖಾಲಿ ಚಂಬು ಜಾಹಿರಾತಿಗೆ ಪ್ರತಿಕ್ರಿಯೆ ನೀಡಿ ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಇದೀಗ ಮೋದಿ ಅವರು ಅಕ್ಷಯಪಾತ್ರ ಮಾಡಿದ್ದಾರೆ ಎಂದು ತಿಳಿಸಿದರು ಇದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಟಾಂಗ್ ನೀಡಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಕಾಂಗ್ರೆಸ್ ಕೊಟ್ಟ ಖಾಲಿ ಚೊಂಬನ್ನು ಮೋದಿಯವರು ಅಕ್ಷಯಪಾತ್ರ ಮಾಡಿದ್ದಾರೆ ಎಂಬ HD ದೇವೇಗೌಡ ಹೇಳಿಕೆಗೆ ಮಂಡ್ಯ ಜಿಲ್ಲೆ ಕೆಆರ್ ಪೇಟೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಬಿಜೆಪಿಯವರು ಕೊಟ್ಟ ಖಾಲಿ ಚೊಂಬನ್ನು ಜನರ ಮುಂದಿಟ್ಟಿದ್ದೇವೆ ಏನು ಅಕ್ಷಯಪಾತ್ರೆ ಎಂದು ಅವರು ಬಿಡಿಸಿ ಹೇಳಲಿ ಹೊಟ್ಟೆ ತುಂಬಿತ? ಅಥವಾ ಜೇಬು ತುಂಬಿತ? ಅಂತ ಹೇಳಲಿ ಎಂದು ಟಾಂಗ್ ನೀಡಿದರು.