ಬಳ್ಳಾರಿ: ವಿಪಕ್ಷ ನಾಯಕ ಸಿದ್ಧರಾಮಯ್ಯ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ ಯಾವುದಕ್ಕೂ ಬಗ್ಗೋದಿಲ್ಲ, ಜಗ್ಗುವುದಿಲ್ಲ. ರಾಜಾಹುಲಿ ಯಾರಿಗೂ ತಗ್ಗುವುದಿಲ್ಲ ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಇಂದು ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದಂತ ಅವರು, ಬಿಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸೋದಕ್ಕೆ ಇಲ್ಲದ ಪ್ರಯತ್ನ ಮಾಡಿದ್ರು. ಅವರ ವಿರುದ್ಧ ಸುಳ್ಳು ಕೇಸ್ ಹಾಕಿಸಿದ್ರು. ಏನೆಲ್ಲಾ ಶಡ್ಯಂತ್ರ ಮಾಡಿದ್ರು. ಆದ್ರೇ ಅವುಗಳನ್ನೆಲ್ಲಾ ಮೆಟ್ಟಿನಿಂತು ಮತ್ತೊಮ್ಮೆ ಮುಖ್ಯಮಂತ್ರಿಯಾದರು ಎಂದರು.
ದೀನ ದಲಿತರ ಬಗ್ಗೆ ಯಾವತ್ತಾದರೂ ಯೋಚನೆ ಮಾಡಿದ್ದೀರಾ.? ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿಯವರು ಸಹಾಯ ಮಾಡುತ್ತಿದ್ದಾರೆ. ಕರ್ನಾಟಕ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ನೀವು ಏನೇ ಮಾಡಿದರು ಯಡಿಯೂರಪ್ಪ ಅವರನ್ನು ಮಣಿಸೋದಕ್ಕೆ ಆಗೋದಿಲ್ಲ. ಅವರು ಯಾವತ್ತೂ ಜಗ್ಗೋದಿಲ್ಲ, ಬಗ್ಗೋದಿಲ್ಲ ಎಂಬುದಾಗಿ ಮತ್ತೊಮ್ಮೆ ನುಡಿದರು.