ಬೀದರ್: ಜಿಲ್ಲೆಯಲ್ಲಿ ಇಂದು ಶಾಕ್ ಎನ್ನುವಂತೆ ಓವರ್ ಟ್ಯಾಂಕ್ ಒಂದನ್ನು ಓರಿದಂತ ಯುವಕನೊಬ್ಬ ಅದಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದ್ಯಾವುದನ್ನು ಅರಿಯದಂತ ಜನರು ಮಾತ್ರ ಅದೇ ನೀರನ್ನು 4-5 ದಿನಗಳ ಕಾಲ ಕುಡಿದಿದ್ದಾರೆ. ಕೊನೆಗೆ ವಾಸನೆಯ ನಂತ್ರ ಓವರ್ ಟ್ಯಾಂಕ್ ನಲ್ಲಿ ಚೆಕ್ ಮಾಡಿದಾಗ ಯುವಕ ಶವ ಕಂಡು ಶಾಕ್ ಆಗಿದ್ದಾರೆ.

ಬೀದರ್ ತಾಲೂಕಿನ ಅಣದೂರು ಗ್ರಾಮದ ರಾಜಕುಮಾರ ದಾಸ ಎಂಬಾತ ಪತ್ನಿಯ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಬೇಸತ್ತು, ಓವರ್ ಟ್ಯಾಂಕ್ ಏರಿ ಅದರೊಳಗಿನ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಜಕುಮಾರ ಆತ್ಮಹತ್ಯೆ ಮಾಡಿಕೊಂಡಿದ್ದಂತ ವಿಷಯ ತಿಳಿಯದ ಅಣದೂರು ಗ್ರಾಮಸ್ಥರು ಮಾತ್ರ 4-5 ದಿನಗಳಿಂದ ಅದೇ ನೀರು ಕುಡಿದಿದ್ದಾರೆ.

ಕುಡಿಯುವ ನೀರು ವಿಪರೀತವಾಗಿ ವಾಸನೆ ಬರುತ್ತಿದೆ. ಅದರಲ್ಲಿ ಕೂದಲುಗಳು ಬರ್ತಾ ಇದ್ದಾವೆ ಎಂಬುದಾಗಿ ಗ್ರಾಮಸ್ಥರು ಪಿಡಿಓ, ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಗ್ರಾಮಸ್ಥರ ದೂರಿನಿಂದ ಗ್ರಾಮದಲ್ಲಿ ಎಲ್ಲೋ ಕುಡಿಯೋ ನೀರಿನ ಪೈಪಿಗೆ ಚರಂಡಿ ನೀರು ಸೇರುತ್ತಿರಬೇಕು ಅಂತ ಹುಡುಕಾಡಿದ್ದಾರೆ. ಕೊನೆಗೆ ಸಿಗದ ಕಾರಣ ಅಂತಿಮವಾಗಿ ನೀರಿನ ಓವರ್ ಟ್ಯಾಂಕ್ ಮೇಲೆ ಹತ್ತಿ ನೋಡಿದ್ದಾರೆ.

ನೀರಿನ ಟ್ಯಾಂಕರ್ ನಲ್ಲಿ ಕೊಳೆತ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದಂತ ರಾಜಕುಮಾರ ದಾಸ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 1.5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕರ್ ಇದ್ದು, 250 ರಿಂದ 300 ಜನನ ನೀರು ಸೇವಿಸುತ್ತಾರೆ. ವಿಷಯದ ಗಂಭೀರತೆಯನ್ನು ಅರಿತಂದ ವೈದ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಅಣದೂರು ಗ್ರಾಮದಲ್ಲೇ ಠಿಕಾಣಿ ಹೂಡಿ ಜನರ ಆರೋಗ್ಯ ತಪಾಸಣೆ ನಡೆಸುತ್ತಿದ್ದಾರೆ. ಶವವಿದ್ದ ನೀರು ಕುಡಿಸಿದಂತ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕಿದ್ದಾರೆ.

BIG NEWS : ‘PSI’ ಹುದ್ದೆಗಳ ನೇಮಕಾತಿಯ ಮರುಪರೀಕ್ಷೆ : ಅಂತಿಮ ಅಂಕಪಟ್ಟಿ ಪ್ರಕಟ

BIG NEWS : ಅಶ್ಲೀಲ ಪದಗಳಿಂದ ಸಚಿವ ಶಿವರಾಜ್ ತಂಗಡಗಿಗೆ ನಿಂದನೆ ಆರೋಪ : ಸಿಟಿ ರವಿ ವಿರುದ್ಧ ದೂರು ದಾಖಲು

Share.
Exit mobile version