ಬೆಂಗಳೂರು : ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನಕ್ಕೆ ಸಿಎಂ ಸಿದ್ದರಾಮಯ್ಯ ಶುಭಾಶಯ ಕೋರಿದ್ದು, ಮನೆ, ಮನ ಬೆಳಗುವ ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಕೂಡ ಆಗಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಮನೆ, ಮನ ಬೆಳಗುವ ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಕೂಡ ಆಗಿದ್ದಾಳೆ. ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿದರೂ, ಇಂದಿಗೂ ಲಿಂಗತಾರತಮ್ಯವೆಂಬುದು ಸಮಾಜದಲ್ಲಿ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು, ಅವರು ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ಪ್ರತಿಯೊಬ್ಬರೂ ಸಹ ಜೊತೆಗೂಡಬೇಕು.
ಯಾವುದೇ ತೆರನಾದ ಅಸಮಾನತೆ, ಶೋಷಣೆಯಿಲ್ಲದ, ಸಮಾನ ಗೌರವ, ಅವಕಾಶ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸಿಕೊಡುವ ಸಮಸಮಾಜ ನಿರ್ಮಾಣ ನಮ್ಮ ಸಂಕಲ್ಪವಾಗಲಿ ಎಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಸಂದರ್ಭದಲ್ಲಿ ಆಶಿಸುತ್ತೇನೆ.
ನಾಡಿನ ನನ್ನೆಲ್ಲಾ ಪ್ರೀತಿಯ ಅಕ್ಕ ತಂಗಿಯರಿಗೆ, ತಾಯಂದಿರಿಗೆ ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನದ ಶುಭಾಶಯಗಳು. ನಿಮ್ಮ ಜೊತೆ ಕರ್ನಾಟಕ ಸರ್ಕಾರ ಸದೃಢವಾಗಿ ನಿಂತಿದೆ.
ಮನೆ, ಮನ ಬೆಳಗುವ ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ, ಸಮಾಜದ ಶಕ್ತಿ ಕೂಡ ಆಗಿದ್ದಾಳೆ. ಹೆಣ್ಣುಮಕ್ಕಳು ಉದ್ಯೋಗ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನವಾಗಿ ಸಾಧನೆ ಮಾಡಿದರೂ, ಇಂದಿಗೂ ಲಿಂಗತಾರತಮ್ಯವೆಂಬುದು ಸಮಾಜದಲ್ಲಿ ಜೀವಂತವಿದೆ ಎನ್ನುವುದನ್ನು ಒಪ್ಪಿಕೊಂಡು, ಅವರು ಎದುರಿಸುತ್ತಿರುವ ಸವಾಲು ಹಾಗೂ ಸಮಸ್ಯೆಗಳ… pic.twitter.com/cMlm9pRnhq
— Siddaramaiah (@siddaramaiah) October 11, 2025