ಗದಗ: ಜಿಲ್ಲೆಯಲ್ಲಿ ಬಸ್ ನಿಲ್ದಾಣದಲ್ಲೇ ವಾಮಾಚಾರ ಮಾಡಲಾಗಿದೆ. ಬಸ್ ನಿಲ್ದಾಣದಲ್ಲಿ ಮಾಡಿದಂತ ವಾಮಾಚಾರ ಕಂಡು ಜನರು ಬೆಚ್ಚಿ ಬಿದ್ದಿರುವಂತ ಘಟನೆ ನಡೆದಿದೆ.
ಗದಗ ಜಿಲ್ಲೆಯ ಮುಂಡರಗಿಯ ಹುಡ್ರೋ ಕಾಲೋನಿಯಲ್ಲಿರೋ ಬಸ್ ನಿಲ್ದಾಣದಲ್ಲಿಯೇ ವಾಮಾಚಾರ ನಡೆಸಲಾಗಿದೆ. ಬಸ್ ನಿಲ್ದಾಣದಲ್ಲಿ ಕಲರ್ ಬಣ್ಣದ ರಂಗೋಲಿ ಹಿಟ್ಟಿನಿಂದ ರಂಗೋಲಿ ಹಾಕಿರುವಂತ ದುಷ್ಕರ್ಮಿಗಳು ಅದರಲ್ಲಿ ಕಪ್ಪು ಗೊಂಬೆ, ಮೊಟ್ಟೆ, ಎಲೆ ಅಡಿಕೆ, ನಿಂಬೆ ಹಣ್ಣು ಇರಿಸಿರೋದು ಪತ್ತೆಯಾಗಿದೆ.
ಗದಗದ ಮುಂಡರಗಿಯ ಹುಡ್ರೋ ಕಾಲೋನಿಯ ಬಸ್ ನಿಲ್ದಾಣದಲ್ಲಿನ ವಾಮಾಚಾರ ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಈ ದುಷ್ ಕೃತ್ಯ ಎಸಗಿದಂತ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಆಗಮಿಸಿ, ತನಿಖೆ ಕೈಗೊಂಡಿದ್ದಾರೆ.
BIG NEWS: ವಿಧಾನಸೌಧದ ನಿರ್ಧಿಷ್ಟ ಪಡಿಸಿದ ಸ್ಥಳದಲ್ಲೇ ಮಾಧ್ಯಮದವರು ಸಂದರ್ಶನ ನಡೆಸಿ: ರಾಜ್ಯ ಸರ್ಕಾರ ಆದೇಶ
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








