Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ‘ನಟಿ ರನ್ಯಾ ರಾವ್‌’ಗೆ ಜಾಮೀನು ಮಂಜೂರು | Actress Ranya Rao

20/05/2025 5:10 PM

ಬೆಂಗಳೂರಲ್ಲಿ ನಿಜವಾಗಲೂ 1,600 ಕೋಟಿ ಕಾಮಗಾರಿ ನಡೆದಿದ್ದರೇ ಈ ಸ್ಥಿತಿ ಬರುತ್ತಿರಲ್ಲಿ: ಆರ್.ಅಶೋಕ್

20/05/2025 4:37 PM

BREAKING : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಇದೆಂತಾ ಕೃತ್ಯ : ಮಾನಸಿಕ ಅಸ್ವಸ್ಥತೆಯ ಮೇಲೆ ಹಾಡಹಗಲೇ ಅತ್ಯಾಚಾರಕ್ಕೆ ಯತ್ನ!

20/05/2025 4:35 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಚಿವ ನಾಗೇಂದ್ರ’ ವಜಾ ಯಾಕಿಲ್ಲ? ಹಗರಣ ‘CBI ತನಿಖೆ’ಗೆ ಏಕೆ ಕೊಟ್ಟಿಲ್ಲ?: ಸಿ.ಟಿ.ರವಿ ಪ್ರಶ್ನೆ
KARNATAKA

‘ಸಚಿವ ನಾಗೇಂದ್ರ’ ವಜಾ ಯಾಕಿಲ್ಲ? ಹಗರಣ ‘CBI ತನಿಖೆ’ಗೆ ಏಕೆ ಕೊಟ್ಟಿಲ್ಲ?: ಸಿ.ಟಿ.ರವಿ ಪ್ರಶ್ನೆ

By kannadanewsnow0901/06/2024 4:37 PM

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿರುವುದಕ್ಕಿಂತ ಹೆಚ್ಚಿನ ಸಾಕ್ಷಿ ಬೇಕಾ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಪ್ರಶ್ನಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇಷ್ಟು ದೊಡ್ಡ ಹಗರಣವಾದರೂ ಯಾಕಿನ್ನೂ ಸಿಬಿಐಗೆ ಕೊಟ್ಟಿಲ್ಲ? ಇಷ್ಟು ದೊಡ್ಡ ಹಗರಣ ನಡೆದಿದ್ದರೂ ಸಚಿವ ನಾಗೇಂದ್ರರನ್ನು ಯಾಕೆ ಇನ್ನೂ ವಜಾ ಮಾಡಿಲ್ಲ? ಈ ಪ್ರಶ್ನೆಗಳಿಗೆ ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಇಷ್ಟೆಲ್ಲ ಆದರೂ ಸರಕಾರಕ್ಕೆ ಇದೊಂದು ಗಂಭೀರ ಪ್ರಕರಣ ಅನಿಸುತ್ತಿಲ್ಲ. ಕಾಂಗ್ರೆಸ್ ಪಕ್ಷದ ಬುಡಕ್ಕೆ ಬರುವ ಕಾರಣಕ್ಕೆ ಇದು ಗಂಭೀರವಲ್ಲ ಎಂದು ತೇಲಿಸುವ ರೀತಿಯಲ್ಲಿ ಸರಕಾರ ವ್ಯವಹರಿಸುತ್ತಿದೆ ಎಂದು ಆರೋಪಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ತನ್ನ ಡೆತ್ ನೋಟಿನಲ್ಲಿ ಸಚಿವರ ಮೌಖಿಕ ಸೂಚನೆ ಎಂದಿದ್ದಾರೆ. ಜೊತೆಗೇ 3 ಅಧಿಕಾರಿಗಳ ಹೆಸರು, ಎನ್ ನಾಗರಾಜ್ ಎಂಬ ಹೆಸರು ಬರೆದಿದ್ದಾರೆ. ಎನ್. ನಾಗರಾಜ್ ಯಾರು ಎಂದು ಪ್ರಶ್ನಿಸಿದರು.

ವಸಂತನಗರ ಶಾಖೆಯಿಂದ ಎಂ.ಜಿ.ರಸ್ತೆ ಶಾಖೆಗೆ ಖಾತೆ ಬದಲಿಸುವ ಮೂಲಕ ಈ ಹಗರಣ ಆರಂಭವಾಗಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮ ಇರುವುದೇ ವಸಂತನಗರದಲ್ಲಿ. ಕಾಲ್ನಡಿಗೆ ದೂರದಲ್ಲಿ ಶಾಖೆ ಇದೆ. ಯಾಕೆ ನೀವು ಎಂ.ಜಿ.ರಸ್ತೆಯ ಯೂನಿಯನ್ ಬ್ಯಾಂಕ್‍ಗೆ ಖಾತೆ ಬದಲಾಯಿಸಿದ್ದೀರಿ ಎಂದು ಪ್ರಶ್ನಿಸಿದರು.

ಉಳಿದ ನಿಗಮಗಳಲ್ಲೂ ಇಂಥ ಹಗರಣ…

ಈಗ ವಾಲ್ಮೀಕಿ ನಿಗಮದ ಹಗರಣ ಬೆಳಕಿಗೆ ಬಂದಿದೆ. ಉಳಿದ ನಿಗಮಗಳಲ್ಲೂ ಇಂಥ ಹಗರಣ ಆಗಿರುವ ಸಾಧ್ಯತೆ ಇದೆ ಎಂದು ಸಿ.ಟಿ. ರವಿ ಅವರು ಸಂಶಯ ವ್ಯಕ್ತಪಡಿಸಿದರು.

ಎಲ್ಲ ಅಭಿವೃದ್ಧಿ ನಿಗಮಗಳ ಲೆಕ್ಕಪತ್ರ ಪರಿಶೀಲನೆ ನಡೆಸಬೇಕು. ಎಷ್ಟೋ ನಿಗಮಗಳಿಂದ 2-3 ವರ್ಷವಾದರೂ ಫಲಾನುಭವಿಗಳಿಗೆ ಬೋರ್‍ವೆಲ್ ಕೊರೆದಿಲ್ಲ. ಸಬ್ಸಿಡಿ ಹಣ ಬಂದಿಲ್ಲ. ವೈಯಕ್ತಿಕ ಸಾಲ ಸೌಲಭ್ಯಕ್ಕೆ ಆಯ್ಕೆ ಆಗಿದ್ದರೂ ಸಾಲ ಸಿಕ್ಕಿಲ್ಲ. ಇಂಥ ಹಣ ನಕಲಿ ಖಾತೆಗಳ ಪಾಲಾಗಿರುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದರು.

ನಿಗಮದ ಬೇರೆ ಬೇರೆ ಖಾತೆಯಲ್ಲಿದ್ದ ಹಣವನ್ನು ಯೂನಿಯನ್ ಬ್ಯಾಂಕ್ ಖಾತೆಗೆ ಯಾಕೆ ವರ್ಗಾಯಿಸಲಾಯಿತು? ಯೂನಿಯನ್ ಬ್ಯಾಂಕಿನಿಂದ ಹೈದರಾಬಾದ್‍ನ ರತ್ನಾಕರ ಬ್ಯಾಂಕಿಗೆ ಹಣ ಹೋಗಿದೆ. ಅಲ್ಲಿಂದ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿಗೆ ವರ್ಗಾವಣೆ ಮಾಡಿದ್ದಾರೆ. ಅಲ್ಲಿ ಖಾತೆಗಳನ್ನು ತೆರೆದು ಹಣ ಹಿಂಪಡೆದಿದ್ದಾರೆ ಎಂದು ಆಕ್ಷೇಪಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕೇಸ್: ಸಿಎಂ, ಸಚಿವರ ರಾಜೀನಾಮೆಗೆ ಆರ್.ಅಶೋಕ್ ಆಗ್ರಹ

BIG NEWS : 2024- 25ನೇ ಸಾಲಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ʻಉಚಿತ ವಿದ್ಯುತ್‌ʼ : ರಾಜ್ಯ ಸರ್ಕಾರ ಅಧಿಕೃತ ಆದೇಶ

Share. Facebook Twitter LinkedIn WhatsApp Email

Related Posts

BREAKING: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ‘ನಟಿ ರನ್ಯಾ ರಾವ್‌’ಗೆ ಜಾಮೀನು ಮಂಜೂರು | Actress Ranya Rao

20/05/2025 5:10 PM1 Min Read

ಬೆಂಗಳೂರಲ್ಲಿ ನಿಜವಾಗಲೂ 1,600 ಕೋಟಿ ಕಾಮಗಾರಿ ನಡೆದಿದ್ದರೇ ಈ ಸ್ಥಿತಿ ಬರುತ್ತಿರಲ್ಲಿ: ಆರ್.ಅಶೋಕ್

20/05/2025 4:37 PM2 Mins Read

BREAKING : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಇದೆಂತಾ ಕೃತ್ಯ : ಮಾನಸಿಕ ಅಸ್ವಸ್ಥತೆಯ ಮೇಲೆ ಹಾಡಹಗಲೇ ಅತ್ಯಾಚಾರಕ್ಕೆ ಯತ್ನ!

20/05/2025 4:35 PM1 Min Read
Recent News

BREAKING: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ‘ನಟಿ ರನ್ಯಾ ರಾವ್‌’ಗೆ ಜಾಮೀನು ಮಂಜೂರು | Actress Ranya Rao

20/05/2025 5:10 PM

ಬೆಂಗಳೂರಲ್ಲಿ ನಿಜವಾಗಲೂ 1,600 ಕೋಟಿ ಕಾಮಗಾರಿ ನಡೆದಿದ್ದರೇ ಈ ಸ್ಥಿತಿ ಬರುತ್ತಿರಲ್ಲಿ: ಆರ್.ಅಶೋಕ್

20/05/2025 4:37 PM

BREAKING : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಇದೆಂತಾ ಕೃತ್ಯ : ಮಾನಸಿಕ ಅಸ್ವಸ್ಥತೆಯ ಮೇಲೆ ಹಾಡಹಗಲೇ ಅತ್ಯಾಚಾರಕ್ಕೆ ಯತ್ನ!

20/05/2025 4:35 PM

ಮೋದಿ ಸರ್ಕಾರ ಭದ್ರತೆ ನೀಡದ ಕಾರಣಕ್ಕೆ ಪೆಹಲ್ಗಾಮ್ ನಲ್ಲಿ 26 ಅಮಾಯಕ ಹತ್ಯೆ: ಮಲ್ಲಿಕಾರ್ಜುನ ಖರ್ಗೆ

20/05/2025 4:34 PM
State News
KARNATAKA

BREAKING: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ‘ನಟಿ ರನ್ಯಾ ರಾವ್‌’ಗೆ ಜಾಮೀನು ಮಂಜೂರು | Actress Ranya Rao

By kannadanewsnow0920/05/2025 5:10 PM KARNATAKA 1 Min Read

ಬೆಂಗಳಊರು: ಬೆಂಗಳೂರಿನ ವಿಶೇಷ ನ್ಯಾಯಾಲಯವು ಮಂಗಳವಾರ ನಟಿ ರನ್ಯಾ ರಾವ್ ಅವರಿಗೆ ಜಾಮೀನು ನೀಡಿದೆ. ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ…

ಬೆಂಗಳೂರಲ್ಲಿ ನಿಜವಾಗಲೂ 1,600 ಕೋಟಿ ಕಾಮಗಾರಿ ನಡೆದಿದ್ದರೇ ಈ ಸ್ಥಿತಿ ಬರುತ್ತಿರಲ್ಲಿ: ಆರ್.ಅಶೋಕ್

20/05/2025 4:37 PM

BREAKING : ಸಚಿವ ಶಿವರಾಜ್ ತಂಗಡಗಿ ಕ್ಷೇತ್ರದಲ್ಲಿ ಇದೆಂತಾ ಕೃತ್ಯ : ಮಾನಸಿಕ ಅಸ್ವಸ್ಥತೆಯ ಮೇಲೆ ಹಾಡಹಗಲೇ ಅತ್ಯಾಚಾರಕ್ಕೆ ಯತ್ನ!

20/05/2025 4:35 PM

ಮೋದಿ ಸರ್ಕಾರ ಭದ್ರತೆ ನೀಡದ ಕಾರಣಕ್ಕೆ ಪೆಹಲ್ಗಾಮ್ ನಲ್ಲಿ 26 ಅಮಾಯಕ ಹತ್ಯೆ: ಮಲ್ಲಿಕಾರ್ಜುನ ಖರ್ಗೆ

20/05/2025 4:34 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.