ದಕ್ಷಿಣ ಕನ್ನಡ: ನನಗೆ ನನ್ನ ತಂದೆ-ತಾಯಿ ಸಿದ್ದರಾಮಯ್ಯ ಅಂತ ಹೆಸರು ಇಟ್ಟಿದ್ದಾರೆ. ಹೀಗಿದ್ದೂ ಇವನ್ಯಾವನು ನನಗೆ ಸಿದ್ರಾಮುಲ್ಲಾ ಖಾನ್ ಎಂಬುದಾಗಿ ಹೆಸರಿಡೋದಕ್ಕೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ), ಸಿ.ಟಿ ರವಿ ( C.T Ravi ) ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದ್ದಾರೆ.

‘ಚೆಕ್ ಬೌನ್ಸ್ ಕೇಸ್’ನಲ್ಲಿ ‘ಶಾಸಕ ಕೆ.ವೈ ನಂಜೇಗೌಡ’ಗೆ 49.65 ಲಕ್ಷ ದಂಡ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾನು ದ್ವೇಷವನ್ನು ಬಿತ್ತೋ ಸಿ.ಟಿ ರವಿಯಂತ ಹಿಂದೂ ಅಲ್ಲ. ಸತ್ಯ ಹೇಳದರೇ ನನಗೆ ಸಿದ್ರಾಮುಲ್ಲಾ ಖಾನ್ ಅಂತ ಹೇಳುತ್ತಾರೆ. ನನ ತಂದೆ-ತಾಯಿ ನನಗೆ ಸಿದ್ದರಾಮಯ್ಯ ಅಂತ ಹೆಸರಿಟ್ಟಿದ್ದಾರೆ. ಇವನ್ಯಾವ ಗಿರಾಕಿ ನನಗೆ ಸಿದ್ರಾಮುಲ್ಲಾಖಾನ್ ಅನ್ನೋದಕ್ಕೆ ಎಂಬುದಾಗಿ ಕಿಡಿಕಾರಿದರು.

ಬೆಂಗಳೂರಿನ ಜನತೆ ಗಮನಕ್ಕೆ: ‘ನಮ್ಮ ನಗರ, ನನ್ನ ಹೆಮ್ಮೆ’ ಬಗ್ಗೆ ‘ನಿಮ್ಮ ಅನಿಸಿಕೆ’ ವ್ಯಕ್ತ ಪಡಿಸಿ

ನಾವು ಭಾರತೀಯರು ಎಂಬುದು ಯುವಕರ ತಲೆಯಲ್ಲಿರಬೇಕು. ಇದನ್ನು ನಾನು ಪ್ರಸ್ತಾಪ ಮಾಡಿದರೇ ಮುಸ್ಲೀಂ ಹೆಸರು ಇಡುತ್ತಾರೆ. ಸಿ.ಟಿ ರವಿಯಂತಹ ಮತಾಂಧ ನನಗೆ ಮುಸ್ಲೀಂ ಹೆಸರು ಇಡುತ್ತಾನೆ. ಸಿಟಿ ರವಿಗಿಂತ ಹೆಚ್ಚಿನ ಹಿಂದೂ ನಾನು. ಆದ್ರೇ ಧರ್ಮ ದ್ವೇಷಿಯಂತಹ ಸಿಟಿ ರವಿ ನಾನಲ್ಲ ಎಂಬುದಾಗಿ ತಿಳಿಸಿದರು.

ಖಾತೆ ಮಾಡಿಕೊಡಲು 20 ಲಕ್ಷ ಲಂಚ: ನಗರಸಭೆ ಅಧ್ಯಕ್ಷೆ ಪತಿ, ಇಬ್ಬರು ಸದಸ್ಯರು ಲೋಕಾಯುಕ್ತ ಬಲೆಗೆ

Share.
Exit mobile version