Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ

12/08/2025 5:46 PM

1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ

12/08/2025 5:41 PM

ಬೆಂಗಳೂರಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳು ಅರೆಸ್ಟ್

12/08/2025 5:32 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ
KARNATAKA

1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ

By kannadanewsnow0912/08/2025 5:41 PM

ಶಿವಮೊಗ್ಗ: ಅಂಗವೈಕಲ್ಯ ಸರ್ಟಿಫಿಕೇಟ್ ಮಾಡಿಕೊಡಲು ವ್ಯಕ್ತಿಯೊಬ್ಬರಿಂದ 1,500 ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಕ್ಲರ್ಕ್ ನೀಲಕಂಠೇಗೌಡ ಸಿಕ್ಕಿಬಿದ್ದಿದ್ದಾರೆ. ಅವರನ್ನು ವಶಕ್ಕೆ ಪಡೆದಿರುವಂತ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿ ಕೇಸ್ ದಾಖಲಿಸಿದ್ದಾರೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಲೋಕಾಯುಕ್ತದಿಂದ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಪಿರಾದುದಾರರಾದ ನಾಗರಾಜ ಕೆ. ಬಿನ್ ಲೇಟ್ ಕೆಂಚಪ್ಪ, ವ್ಯವಸಾಯ ಕೆಲಸ ವಾಸ: ಅಂದಾಸುರ ಗ್ರಾಮ, ಆಚಾಪುರ ಅಂಚೆ, ಸಾಗರ ತಾಲ್ಲೂಕ್, ಶಿವಮೊಗ್ಗ ಜಿಲ್ಲೆ ರವರ ಮಗಳಾದ ಭೂವಿಲಾ ಎನ್, 8 ವರ್ಷ, ಈಕೆ ಅಂಗವೈಕಲ್ಯದಿಂದ ಬಳಲುತ್ತಿದ್ದು, ಆಕೆಯ ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ಸಲುವಾಗಿ ಅಂಗವೈಕಲ್ಯ ಸರ್ಟಿಫಿಕೇಟ್ ಪಡೆದುಕೊಳ್ಳಲು ಈಗ್ಗೆ 15-20 ದಿವಸಗಳ ಹಿಂದೆ ಪಿರಾದುದಾರರು ಶಿವಮೊಗ್ಗ ಮಗ್ಗಾನ್ ಆಸ್ಪತ್ರೆಗೆ ಹೋಗಿ ಓಪಿಡಿ ಚೀಟಿ ಮಾಡಿಸಿ ಆಡಳಿತ ವಿಭಾಗದಲ್ಲಿ ಇದ್ದ ಕ್ಲರ್ಕ್ ನೀಲಕಂಠೇಗೌಡ ರವರನ್ನು ಭೇಟಿ ಮಾಡಿದಾಗ ಅವರು ಪಿದ್ಯಾದಿಗೆ ವೈದ್ಯರಿಂದ ಮಗಳನ್ನು ತಪಾಸಣೆ ಮಾಡಿಸಿ ವೈದ್ಯರಿಂದ ಸಹಿ ಪಡೆದು ಫಾರಂಗಳನ್ನು ತಂದು ನೀಡುವಂತೆ ತಿಳಿಸಿದ್ದು, ಅದರಂತೆ ಪಿರಾದುದಾರರು ವೈದ್ಯರಿಂದ ಪರೀಕ್ಷೆ ಮಾಡಿಸಿ ಫಾರಂಗಳನ್ನು ಭರ್ತಿ ಮಾಡಿಸಿ ಕ್ಲರ್ಕ್ ನೀಲಕಂಠೇಗೌಡರವರಿಗೆ ನೀಡಿದ್ದಾರೆ ಎಂದಿದೆ.

ಈ ನಂತ್ರ ಫೋಟೋ ಮತ್ತು ಇತರೆ ದಾಖಲಾತಿಗಳನ್ನು ನೀಡಿರುತ್ತಾರೆ ನಂತರ ಕ್ಲರ್ಕ್ ರವರು ಸರ್ಟಿಫಿಕೇಟ್ ರೆಡಿಮಾಡುವುದಾಗಿ ತಿಳಿಸಿದ್ದು, ನಂತರ ಪಿರಾದುದಾರರು ಅಪಾದಿತರ ಮೊಬೈಲ್‌ಗೆ ಸಂಪರ್ಕಿಸಿ ಸರ್ಟಿಫಿಕೇಟ್ ನೀಡುವಂತೆ ಕೇಳಿದಾಗ ಕ್ಲರ್ಕ್ ನೀಲಕಂಠೇಗೌಡ ರವರು ಅಂಗವೈಕಲ್ಯ ಸರ್ಟಿಫಿಕೇಟ್ ನೀಡಲು ರೂ 1500/- ಲಂಚದ ಹಣ ನೀಡುವಂತೆ ಕೇಳಿದ್ದು, ಪಿರಾದುದಾರರು ಸದರಿ ಸಂಭಾಷಣೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿರುತ್ತಾರೆ. ಪಿರಾದುದಾರರಿಗೆ ಅವರ ಮಗಳ ಅಂಗವೈಕಲ್ಯ ಸರ್ಟಿಫಿಕೇಟ್‌ಗಾಗಿ ಪಡೆಯಲು ಕ್ಲರ್ಕ್ ರವರಿಗೆ ಲಂಚದ ಹಣ ನೀಡಲು ಇಷ್ಟವಿಲ್ಲದೆ ಇದ್ದುದ್ದರಿಂದ ಸದರಿ ಕ್ಲರ್ಕ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ದಿವಸ ದಿನಾಂಕ: 12/08/2025 ರಂದು ನೀಡಿದ ದೂರಿನ ಮೇರೆಗೆ ಕಲಂ:7(3) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ-1988, (ತಿದ್ದುಪಡಿ ಕಾಯಿದೆ-2018) ರೀತ್ಯಾ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ತಿಳಿಸಿದೆ.

ದಿನಾಂಕ:-12-08-2025 ರಂದು ಮದ್ಯಾಹ್ನ 3:30 ಗಂಟೆಗೆ ಅಪಾದಿತ ಅಧಿಕಾರಿ ಶಿವಮೊಗ್ಗ ಮೆಗ್ಗಾನ್ ಜಿಲ್ಲಾ ಭೋಧನಾ ಆಸ್ಪತ್ರೆಯ ಆಡಳಿತ ಕಛೇರಿಯಲ್ಲಿ ಪಿದ್ಯಾದಿಯಿಂದ 1,500/-ರೂ ಲಂಚದ ಹಣವನ್ನು ಪಡೆದುಕೊಂಡ ಸಮಯದಲ್ಲಿ ಟ್ರ್ಯಾಪ್ ಮಾಡಲಾಗಿರುತ್ತದೆ ಮತ್ತು ಲಂಚದ ಹಣವನ್ನು ಜಪ್ತಿ ಪಡಿಸಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾದಿತ ಅಧಿಕಾರಿಯಾದ ನೀಲಕಂಠೇಗೌಡ ಬಿನ್ ತಿಮ್ಮೇಗೌಡ ರವರನ್ನು ತನಿಖೆ ಸಂಬಂಧ ವಶಕ್ಕೆ ಪಡೆದು ಪ್ರಕರಣದ ತನಿಖೆಯನ್ನು ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್‌ರಾದ ವೀರಬಸಪ್ಪ ಎಲ್ ಕುಸಲಾಪುರ ರವರು ಕೈಗೊಂಡಿರುತ್ತಾರೆ ಎಂದು ಹೇಳಿದೆ.

ಸದರಿ ಟ್ರ್ಯಾಪ್ ಕಾರ್ಯಾಚರಣೆಯನ್ನು ಮಂಜುನಾಥ ಚೌಧರಿ.ಎಂ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ರವರ ಮಾರ್ಗದರ್ಶನದಲ್ಲಿ ಬಿ.ಪಿ. ಚಂದ್ರಶೇಖರ್, ಪೊಲೀಸ್ ಉಪಾಧೀಕ್ಷಕರು, ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರಾದ ವೀರಬಸಪ್ಪ ಎಲ್ ಕುಸಲಾಪುರ ರವರು ಟ್ರ್ಯಾಪ್ ಮಾಡಿದ್ದು, ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳಾದ ರುದ್ರೇಶ್ ಕೆ.ಪಿ. ಗುರುರಾಜ ಎನ್ ಮೈಲಾರ್ ಸಿಬ್ಬಂದಿಯವರಾದ ಯೋಗೇಶ್.ಜಿ.ಸಿ, ಸಿ.ಹೆಚ್.ಸಿ, ಮಂಜುನಾಥ.ಎಂ. ಸಿ.ಹೆಚ್.ಸಿ, ಟೀಕಪ್ಪ ಸಿಹೆಚ್‌ಸಿ ಬಿ.ಟಿ. ಚನ್ನೇಶ್, ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಹೆಚ್. ಸಿ.ಪಿ.ಸಿ, ಪ್ರಕಾಶ್ ಬಾರಿಮರದ, ಸಿಪಿಸಿ, ಅರುಣ್ ಕುಮಾರ್.ಯು.ಬಿ.ಸಿ.ಪಿ.ಸಿ, ಆದರ್ಶ್ ಸಿ.ಪಿ.ಸಿ, ಅಂಜಲಿ ಮ.ಪಿ.ಸಿ ಚಂದ್ರಿಬಾಯಿ.ಎಸ್. ಮ.ಪಿ.ಸಿ ಪ್ರದೀಪ, ಎ.ಹೆಚ್.ಸಿ, ತರುಣ್ ಎಪಿಸಿ, ಗಂಗಾಧರ ಎಪಿಸಿ, ಆನಂದ ಎ.ಪಿ.ಸಿ, ಶ್ರೀ ಗೋಪಿ ಎ.ಪಿ.ಸಿ ರವರು ಹಾಜರಿರುತ್ತಾರೆ ಎಂದು ತಿಳಿಸಿದೆ.

BREAKING: ಶಿವಮೊಗ್ಗ ಜಿಲ್ಲೆಯಾಧ್ಯಂತ ಗಣೇಶ, ಈದ್ ಮಿಲಾದ್ ಹಬ್ಬದ ವೇಳೆ ಡಿಜೆ ಸಿಸ್ಟಂ ಬಳಕೆ ನಿಷೇಧ-DC ಆದೇಶ

CRIME NEWS: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕ ಅರೆಸ್ಟ್

Share. Facebook Twitter LinkedIn WhatsApp Email

Related Posts

ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ

12/08/2025 5:46 PM1 Min Read

ಬೆಂಗಳೂರಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳು ಅರೆಸ್ಟ್

12/08/2025 5:32 PM2 Mins Read

CRIME NEWS: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕ ಅರೆಸ್ಟ್

12/08/2025 5:24 PM2 Mins Read
Recent News

ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ

12/08/2025 5:46 PM

1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ

12/08/2025 5:41 PM

ಬೆಂಗಳೂರಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳು ಅರೆಸ್ಟ್

12/08/2025 5:32 PM

CRIME NEWS: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕ ಅರೆಸ್ಟ್

12/08/2025 5:24 PM
State News
KARNATAKA

ವಾಸ್ಕೋ ಡ ಗಾಮ – ಜಸಿದಿಹ್ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಮೂಲ ಮಾರ್ಗದಲ್ಲಿ ಪುನರಾರಂಭ

By kannadanewsnow0912/08/2025 5:46 PM KARNATAKA 1 Min Read

ಹುಬ್ಬಳ್ಳಿ: ದಕ್ಷಿಣ ಮಧ್ಯ ರೈಲ್ವೆಯು ವಾಸ್ಕೋ ಡ ಗಾಮ–ಜಸಿದಿಹ್–ವಾಸ್ಕೋ ಡ ಗಾಮ ಸಾಪ್ತಾಹಿಕ ಎಕ್ಸ್ ಪ್ರೆಸ್ ರೈಲು ಸಂಖ್ಯೆ 17321/17322 ಅನ್ನು…

1,500 ಲಂಚ ಪಡೆಯುತ್ತಿದ್ದಾಗಲೇ ‘ಮೆಗ್ಗಾನ್ ಆಸ್ಪತ್ರೆ ಕ್ಲರ್ಕ್ ನೀಲಕಂಠೇಗೌಡ’ ಲೋಕಾಯುಕ್ತ ಬಲೆಗೆ

12/08/2025 5:41 PM

ಬೆಂಗಳೂರಲ್ಲಿ ಪೊಲೀಸ ಭರ್ಜರಿ ಕಾರ್ಯಾಚರಣೆ: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರು ಆರೋಪಿಗಳು ಅರೆಸ್ಟ್

12/08/2025 5:32 PM

CRIME NEWS: ಮಾಲೀಕರ ಮನೆಯಲ್ಲಿ ಚಿನ್ನಾಭರಣಗಳನ್ನು ಕಳವು ಮಾಡಿದ್ದ ವ್ಯವಸ್ಥಾಪಕ ಅರೆಸ್ಟ್

12/08/2025 5:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.