ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಭಾಷಣಗಳನ್ನು “ಟೊಳ್ಳು ಮಾತು” ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ ಖಂಡಿಸಿದ್ದಾರೆ.
ಅವರು ‘ನಾನು ಶಬರಿಯ ಅನುಯಾಯಿ’ ಎಂದು ಹೇಳುತ್ತಿದ್ದರು. ಒಂದು ಕಡೆ ಶಬರಿಯನ್ನು ಗೌರವಿಸಿದ ಶ್ರೀರಾಮ.. ಮತ್ತೊಂದೆಡೆ, ನೂರಾರು ಜನರ ಅವಮಾನವನ್ನು ನೋಡಿ ನರೇಂದ್ರ ಮೋದಿ ಅವರು ಬಾಯಿ ಮುಚ್ಚಿಕೊಂಡಿದ್ದರು. ನಮ್ಮ ಸಹೋದರಿಯರು ಚಿತ್ರಹಿಂಸೆಗೊಳಗಾದಾಗ ಮೋದಿ ಮೌನವಾಗಿದ್ದರು. ಮೋದಿ ಅವರ ಮಾತುಗಳು ಟೊಳ್ಳು” ಎಂದು ಅವರು ಮಹಾರಾಷ್ಟ್ರದ ನಂದೂರ್ಬಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು.
ನಂದೂರ್ಬಾರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೋವಾಲ್ ಪಡ್ವಿ ಅವರಿಗೆ ಬೆಂಬಲ ಗಳಿಸುವ ಉದ್ದೇಶದಿಂದ ಈ ರ್ಯಾಲಿ ಆಯೋಜಿಸಲಾಗಿತ್ತು.
ಬುಡಕಟ್ಟು ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಒಂದು ದಿನದ ನಂತರ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
“ಮೋದಿ ಅವರು ಹೇಳುವುದೆಲ್ಲವೂ ‘ಖೋಖ್ಲಿ ಬಾತೇನ್’ (ಖಾಲಿ ಪದಗಳು) ಮಾತ್ರ” ಎಂದು ಅವರು ಟೀಕಿಸಿದರು. “ನರೇಂದ್ರ ಮೋದಿ ಅವರು ಆದಿವಾಸಿಯೊಬ್ಬರ ಮನೆಗೆ ಭೇಟಿ ನೀಡಿ ಅವರ ಕಷ್ಟಗಳನ್ನು ಅರ್ಥಮಾಡಿಕೊಂಡಿರುವ ಒಂದು ಉದಾಹರಣೆಯನ್ನು ನನಗೆ ತೋರಿಸಿ” ಎಂದು ಅವರು ಸವಾಲು ಹಾಕಿದರು.
ಎಲ್ಲಾ ಸಮುದಾಯಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸುವುದು ರಾಜಕೀಯ ನಾಯಕರ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಆದಿವಾಸಿಗಳ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗೌರವಿಸಲು ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿದರು.