ಶಿವಮೊಗ್ಗ: ಇಂದಿನಿಂದ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆರಂಭಗೊಂಡಿದೆ. ಇಲ್ಲಿದ ನಿಗದಿ ಪಡಿಸಿರುವಂತ ದುಡ್ಡಿಗಿಂತ ಹೆಲಿಕಾಪ್ಟರ್ ವರ್ಸಸ್ ವಿಮಾನ ಪ್ರಯಾಣದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ನಡೆಯುತ್ತಿದೆ. ಹಾಗಾದ್ರೇ ಇವೆರಡಕ್ಕೂ ವ್ಯತ್ಯಾಸವೇನು ಅನ್ನೋ ಬಗ್ಗೆ ಮಾಹಿತಿ ಮುಂದೆ ಓದಿ..
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶ್ರೀ ಮಾರಿಕಾಂಬ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಹೆಲಿ ಟೂರಿಸಂ ಆರಂಭಗೊಂಡಿದೆ. ಬೆಂಗಳೂರಿನಿಂದ ಬಂದಿರುವಂತ ಹೆಲಿಕಾಪ್ಟರ್ ಮೂಲಕ ಸಾಗರ ನಗರ ಪ್ರದಕ್ಷಿಣೆಯನ್ನು ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಮಾಡಿಸಲಾಗುತ್ತಿದೆ. ಇದಲ್ಲದೇ ಸಿಗಂದೂರು ಸೇತುವೆ, ಜೋಗದ ಜಲಪಾತ ವೀಕ್ಷಿಸುವಂತ ಅತ್ಯಂತ ಸಮಧುರ ಕ್ಷಣದ ಅವಕಾಶವನ್ನು ಕೂಡ ಆಯೋಜಕರಾದಂತ ಕಿರಣ್ ದೊಡ್ಮನಿ ಕಲ್ಪಿಸಿದ್ದಾರೆ.
ವಿಮಾನ ಪ್ರಯಾಣವೇ ಬೆಟರ್ ಅಂತೀರಾ?
ಶಿವಮೊಗ್ಗದಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಗಿಂತ ವಿಮಾನದಲ್ಲೇ ಪ್ರಯಾಣಿಸಬಹುದು ಅನ್ನೋದು ಹಲವರ ಮಾತು. ಈಗ ಬಹುತೇಕ ಚರ್ಚೆಗೊಳ್ಳುತ್ತಿರುವ ವಿಚಾರ ಕೂಡ. ಆದರೇ ವಿಮಾನದಲ್ಲಿ ಆ ಸಣ್ಣ ಕಿಟಕಿ ಮೂಲಕ, ಸಾವಿರಾರು ಅಡಿ ಎತ್ತರದಲ್ಲಿ ಭೂ ದೃಶ್ಯವನ್ನು ನೋಡುವುದಕ್ಕೂ, ಹೆಲಿಕಾಪ್ಟರ್ ಮೂಲಕ ಕಡಿಮೆ ಎತ್ತರದಲ್ಲಿ ನಿಮ್ಮೂರನ್ನು ಸುತ್ತಿ ಬರೋದಕ್ಕೂ ವ್ಯತ್ಯಾಸವಿಲ್ಲವೇ?
ಇನ್ನೂ ಬೆಂಗಳೂರಿಗೆ ವಿಮಾನದಲ್ಲಿ ತೆರಳೋದಕ್ಕೆ ನಿಮ್ಮೂರಿನಿಂದ ಹೋಗಿ, ಚೆಕ್ ಇನ್ ಆಗಿ, ಎಲ್ಲಾ ತಪಾಸಣೆ ಮುಗಿಸಿ, ಒಂದು ಇಲ್ಲವೇ ಎರಡು ತಾಸು ವಿಮಾನ ನಿಲ್ದಾಣದಲ್ಲಿ ಕುಳಿತು ಆ ಬಳಿಕ ಪ್ರಯಾಣಿಸಬೇಕು. ಆದರೇ ನಿಮ್ಮೂರಿಗೆ ಹೆಲಿಕಾಪ್ಟರ್ ಬಂದಿರುವಾಗ, ಟಿಕೆಟ್ ಖರೀದಿಸಿ ಯಾವುದೇ ತಪಾಸಣೆಗಳಿಲ್ಲದೇ ಸುತ್ತಿ ಬೋರದಕ್ಕೂ ವ್ಯಾತ್ಯಾಸ ಇದೆ ಅಲ್ವ?
ವಿಮಾನದಲ್ಲಿ ಕುಳಿತು ನೋಡುವ ಏರಿಯಲ್ ವೀವ್ಯೂಗೂ, ಹೆಲಿಕಾಪ್ಟರ್ ನಲ್ಲಿ ಕುಳಿತು ನೋಡುವಂತ ಭೂ ದೃಶ್ಯಾವಳಿಗೂ ಸಾಕಷ್ಟು ವ್ಯತ್ಯಾಸವಿದೆ. ಓಪನ್ ಲಾಂಜ್ ನಲ್ಲಿ ನಿಂತು ಮೇಲಿನಿಂದ ನಿಮ್ಮೂರು ನೋಡಿದಷ್ಟೇ ಅನುಭವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುವಾಗ ಉಂಟಾಗುತ್ತೆ ಅನ್ನೋದು ಇಂದು ಹೆಲಿ ಟೂರಿಸಂನಲ್ಲಿ ಪ್ರಯಾಣಿಸಿ ಬಂದವರ ಮಾತು. ಅದು ವಿಮಾನದಲ್ಲಿ ಸಾಧ್ಯವಾಗುತ್ತಾ ನೀವೇ ಯೋಚಿಸಿ.
ಹೆಲಿಕಾಪ್ಟರ್ vs ವಿಮಾನದ ಟಿಕೆಟ್ ದರ ವ್ಯತ್ಯಾಸ ಇಲ್ಲಿದೆ..
ಸಾಗರದ ಮಾರಿಕಾಂಬ ಜಾತ್ರೆಯ ಪ್ರಯುಕ್ತ ಕಿರಣ್ ದೊಡ್ಮನಿ ಮನೆನಾಡಿನ ನನ್ನೂರಿನ ಜನರು ಹೆಲಿ ಟೂರಿಸಂ ಅನುಭವ ಪಡೆಯೋದಕ್ಕೆ ಹೆಲಿಕಾಪ್ಟರ್ ಪ್ರವಾಸದ ವ್ಯವಸ್ಥೆ ಮಾಡಿದ್ದಾರೆ. ಒಬ್ಬರಿಗೆ ಸಾಗರ ಸುತ್ತಿ ಬರೋದಕ್ಕೆ ರೂ.4,000 ನಿಗದಿ ಮಾಡಿದ್ದರೇ, ಸಿಗಂದೂರು, ಜೋಗ ವೀಕ್ಷಿಸಿ ಬರೋದಕ್ಕೆ 6 ಜನರಿಗೆ 45,000 ದರ ಫಿಕ್ಸ್ ಮಾಡಿದ್ದಾರೆ. ಇದು ವಿಮಾನ ಪ್ರಯಾಣದಕ್ಕಿಂತ ಏನೂ ದುಬಾರಿ ಅಲ್ಲ ಎಂಬುದು ಅದರಲ್ಲಿ ಪ್ರಯಾಣಿಸಿದವರ ಅನುಭವದ ನುಡಿ.
ಅಂದಹಾಗೇ ಶಿವಮೊಗ್ಗದಿಂದ ಬೆಂಗಳೂರಿಗೆ ಇಂದಿನ ಹೆಲಿಕಾಪ್ಟರ್ ದರಕ್ಕಿಂತ ಕಡಿಮೆ ದರದಲ್ಲಿ ಹೋಗಿ ಬರಬಹುದು ಎಂಬ ಯೋಚನೆಯಲ್ಲಿ ನೀವಿದ್ದೀರಿ ಅಲ್ವ? ಆದರೇ ಯೋಚಿಸಿ ನೀವು ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರಯಾಣದ ವೆಚ್ಚ ಎಷ್ಟಾಗಲಿದೆ. ಬೆಂಗಳೂರು ತಲುಪಿದ ಬಳಿಕ ಕೆಂಪೇಗೌಡ ವಿಮಾನ ನಿಲ್ದಾಣದಿಂದ ನೀವು ತಲುಪಬೇಕಿರುವಂತ ಸ್ಥಳಕ್ಕೆ ಹೋಗೋದಕ್ಕೆ ಖರ್ಚು ಎಷ್ಟಾಗಲಿದೆ ಅಂತ.
ಶಿವಮೊಗ್ಗ ಟು ಬೆಂಗಳೂರು ಸೇವಾ ತೆರಿಗೆ ಹೊರತುಪಡಿಸಿ ಇಂದಿನ ಆನ್ ಲೈನ್ ಟಿಕೆಟ್ ಬೆಲೆ ನಾಳೆಯೇ ಹೋಗುವುದಾದರೇ ರೂ.3,425. ಇದಕ್ಕೆ ಸೇವಾ ತೆರಿಗೆ ಸೇರಿದಂತೆ ಇತರೆ ಚಾರ್ಜ್ ಸೇರಿದರೇ ರೂ.4,500 ಮೀರೋದು ಗ್ಯಾರಂಟಿ. ಇದು ವಾರಾಂತ್ಯದಲ್ಲಿ, ವಿಶೇಷ ದಿನಗಳಲ್ಲಿ ಇನ್ನೂ ದುಬಾರಿ ದರ ಕೂಡ. ರೂ.8,000ಕ್ಕೂ ಹೆಚ್ಚು ಇರುತ್ತದೆ. ಅದೇ ನಿಮ್ಮೂರು ಸಾಗರಕ್ಕೆ ಬಂದಿರುವಂತ ಹೆಲಿಕಾಪ್ಟರ್ರ್ ಬಳಸಿ ಹೆಲಿ ಟೂರಿಸಂ ಮಾಡೋದಕ್ಕೆ ಫಿಕ್ಸ್ ಮಾಡಿರೋ ದರ ಅದಕ್ಕಿಂತ ಕಡಿಮೆ ಅಲ್ವ?
ಈಗ ಹೇಳಿ ಯಾವುದು ಬೆಸ್ಟ್?
ವಿಮಾನ ಪ್ರಯಾಣದ ಸೀಮಿತ ಪರಿಮಿತಿಯ ಪ್ರಯಾಣಕ್ಕೂ, ಹೆಲಿಕಾಪ್ಟರ್ ಓಪನ್ ನೋಟದ ಪ್ರಯಾಣಕ್ಕೂ ವ್ಯತ್ಯಾಸವಿದೆ ಅನ್ನೋದು ಪ್ರಯಾಣಿಸಿದವರ ಅನುಭವದ ಮಾತು. ನೀವು ವಿಮಾನದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೋ ಅಥವಾ ಬೇರೆ ಯಾವುದೋ ಸ್ಥಳಕ್ಕೆ ಹೋಗಿ ಬರಬಹುದು. ಆದರೇ ನಿಮ್ಮೂರನ್ನು ಸುತ್ತಿ ಬರೋದಕ್ಕೆ ಸಾಧ್ಯ ಇದ್ಯಾ? ಹೆಲಿ ಟೂರಿಸಂ ಮೂಲಕ ಸಾಗರವನ್ನು ಒಂದು ರೌಂಡ್ ಸುತ್ತಿ ಬಂದ ಅನುಭವದಂತೆ ವಿಮಾನದಲ್ಲಿ ಆಗುತ್ತಾ?
ಸೋ ಈಗ ಹೇಳಿ ಯಾವುದು ಬೆಸ್ಟ್? ನಿಮ್ಮ ಊರಿಗೆ ಬಂದು, ನಿಮ್ಮೂರನ್ನು ನೀಲ ಬಾನಂಗಳದಿಂದ ತೋರಿಸೋ ಹೆಲಿಕಾಪ್ಟರೋ ಅಥವಾ ನೀವು ಬೆಂಗಳೂರಿಗೆ ಹೋಗಿ ಬರೋದೋ? ಯಾವಾಗ ಬೇಕಾದರೂ ಬೆಂಗಳೂರಿಗೆ ವಿಮಾನದ ಮೂಲಕ ಹೋಗಿ ಬರಬಹುದು. ಆದರೇ ಹೆಲಿಕ್ಯಾಪ್ಟರ್ ಕರೆಸಿ ಹೋಗೋದಕ್ಕೆ ಸಾಧ್ಯವಾಗುತ್ತಾ? ನಿಮ್ಮ ಸಾಗರ, ಅದರ ಸಮೀಪವೇ ಇರುವಂತ ನಿಮ್ಮೂರು ಆಕಾಶದಿಂದ ನೋಡಿದಾಗ ಹೇಗೆ ಕಾಣುತ್ತೆ ಅನ್ನೋ ಅನುಭವ ಮತ್ತೆ ಆಗುತ್ತಾ?
ಚರ್ಚೆ ಬಿಡಿ, ನಾಳೆಯೇ ಹೆಲಿ ಟೂರಿಸಂ ಪ್ರವಾಸ ಮಾಡಿ
ವಿಮಾನ ಬೆಸ್ಟು, ಹೆಲಿಕಾಪ್ಟರ್ ದುಬಾರಿ ಎನ್ನುವ ಯೋಚನೆ ಬಿಟ್ಟು ಬಿಡಿ. ಜೀವನದಲ್ಲಿ ಒಮ್ಮೆ ಈ ರೀತಿಯ ಅವಕಾಶ ಸಿಗೋದು. ವಿಮಾನ ಪ್ರಯಾಣ ಯಾವಾಗ ಬೇಕಾದ್ರೂ ಮಾಡಬಹುದು. ಆದರೇ ಹೆಲಿಕಾಪ್ಟರ್ ಪ್ರಯಾಣ ಅದು ರಾಜಕಾರಣಿಗಳಿಗೆ, ಸಿರಿವಂತರಿಗೆ ಮಾತ್ರ ಸಾಧ್ಯ ಅನ್ನೋದನ್ನು ಸುಳ್ಳು ಮಾಡಿ ಕಿರಣ್ ದೊಡ್ಮನಿ ಸಾಗರಕ್ಕೆ ಕರೆಸಿದ್ದಾರೆ. ಅದರ ಸದುಪಯೋಗ ಪಡೆದುಕೊಳ್ಳಿ. ಎಲ್ಲೋ, ಯಾವುದೋ ಕಾರಣಕ್ಕೋ ನಾಲ್ಕು ಸಾವಿರ ಖರ್ಚು ಮಾಡೋ ನೀವು, ಚರ್ಚೆ ಬಿಟ್ಟು ನಾಳೆಯೇ ಹೆಲಿ ಟೂರಿಸಂ ಪ್ರವಾಸ ಮಾಡಿ. ಇಂತಹ ಅವಕಾಶ ಸಿಗೋದಿಲ್ಲ ಎಂಬುದು ಇಂದು ಹೆಲಿ ಟೂರಿಸಂ ಮಾಡಿ ಬಂದವರ ಮಾತು.
ಇನ್ನೇಕೆ ತಡ ಹೆಲಿ ಟೂರಿಸಂ ಆಯೋಜಿಸಿರುವಂತ ಕಿರಣ್ ದೊಡ್ಮನಿ ಅವರ ಮೊಬೈಲ್ ಸಂಖ್ಯೆ +919945563294ಗೆ ಕರೆ ಮಾಡಿ. ನಾಳೆಯೇ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸೋದಕ್ಕೆ ಟಿಕೆಟ್ ಕಾಯ್ದಿರಿಸಿ. ಕೇವಲ ಫೆಬ್ರವರಿ.9ರವರೆಗೆ ಮಾತ್ರವೇ ಹೆಲಿ ಟೂರಿಸಂ ನಡೆಯೋದು. ಈಗ ಸಿಕ್ಕಿರುವಂತ ಇಂತಹ ಅವಕಾಶವನ್ನು ಸಾಗರದ ಸಮಸ್ತ ಜನತೆ ಸದುಪಯೋಗ ಪಡಿಸಿಕೊಳ್ಳಿ ಎಂಬುದು ಜಾತ್ರಾ ಸಮಿತಿ, ಆಯೋಜಕರ ಮನವಿಯಾಗಿದೆ. ಸೋ ಹೆಲಿ ಟೂರಿಸಂ ಟಿಕೆಟ್ ಬುಕ್ ಮಾಡಿ, ನಾಳೆ ನಿಮ್ಮ ಸಾಗರವನ್ನು ಆಕಾಶದ ಮೇಲಿನಿಂದ ಹೆಲಿಕಾಪ್ಟರ್ ಮೂಲಕ ಹೇಗೆ ಕಾಣುತ್ತೆ ಅನ್ನೋದು ನೋಡಿ ಬನ್ನಿ…
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು








